ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ಡಿಸೆಂಬರ್ 2021
ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್’ನಲ್ಲಿ ಇವತ್ತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಯೊಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಬಾಡಿಗೆ ವಾಹನದ ಹಣ ಬಿಡುಗಡೆಗೆ ಲಂಚ ಕೇಳಿದ ಕೃಷಿ ವಿವಿ ಹಣಕಾಸು ಅಧಿಕಾರಿಯನ್ನು ಎಸಿಬಿ ಅಧಿಕಾರಿಗಳು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ವಿವಿಯ ಹಣಕಾಸು ವಿಭಾಗದ ಗಣೇಶಪ್ಪ ಬಂಧಿತ.
ಕೃಷಿ ವಿವಿಯಲ್ಲಿ ನವೀನ್ ಎಂಬುವವರು ವಾಹನಗಳನ್ನು ಬಾಡಿಗೆಗೆ ಬಿಟ್ಟಿದ್ದರು. ಅದರ ಹಣವನ್ನು ಬಿಡುಗಡೆ ಮಾಡಬೇಕಿತ್ತು.
1 ಲಕ್ಷ ಬಿಲ್ ಬಿಡುಗಡೆಗೆ ಗಣೇಶಪ್ಪ 5 ಸಾವಿರ ಲಂಚ ಡಿಮ್ಯಾಂಡ್ ಮಾಡದ್ದರು. 5 ಸಾವಿರ ರೂ. ಹಣ ಪಡೆಯುವಾಗ ಸೂಕ್ತ ಮಾಹಿತಿ ಆಧಾರದ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಗಣೇಶಪ್ಪನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.