SHIVAMOGGA LIVE NEWS | 20 ಮಾರ್ಚ್ 2022
ಕ್ಷುಲಕ ವಿಚಾರಕ್ಕೆ ಬಿಯರ್ ಬಾಟಲಿಯಿಂದ ವ್ಯಕ್ತಿಯೊಬ್ಬರ ತಲೆಗೆ ಹೊಡೆಯಲಾಗಿದೆ. ಶಿವಮೊಗ್ಗ ನಗರದ ಸವರ್ ಲೈನ್ ರಸ್ತೆಯ ಬಾರ್ ಒಂದರದಲ್ಲಿ ಘಟನೆ ಸಂಭವಿಸಿದೆ.
ವೇಣುಗೋಪಾಲ (57) ಅವರ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಲಾಗಿದೆ. ಸ್ನೇಹಿತರೊಬ್ಬರ ಜೊತೆಗೆ ವೇಣುಗೋಪಾಲ ಅವರು ಸವರ್ ಲೈನ್ ರಸ್ತೆಯಲ್ಲಿರುವ ಬಾರ್ ಒಂದಕ್ಕೆ ತೆರಳಿದ್ದರು.
ಬಾರ್’ನಲ್ಲಿ ವೇಣುಗೋಪಾಲ ಅವರು ಕುಳಿತಿದ್ದ ಟೇಬಲ್ ಬಳಿ ಬಂದ ಅಪರಿಚಿತನೊಬ್ಬ ಹೊರಗೆ ಹೋಗು ಎಂದು ತಿಳಿಸಿದ್ದಾನೆ. ಯಾಕೆ ಎಂದು ಪ್ರಶ್ನಿಸಿದಾಗ ಅಲ್ಲೆ ಇದ್ದ ಬಿಯರ್ ಬಾಟಲಿ ತೆಗೆದುಕೊಂಡು ವೇಣುಗೋಪಾಲ ಅವರ ತಲೆಗೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ಗಾಯಗೊಂಡಿದ್ದ ವೇಣುಗೋಪಾಲ ಅವರನ್ನು ಕೂಡಲೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200