ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 OCTOBER 2023
SHIMOGA : ಜೋಳದ ಹೊಲಕ್ಕೆ ನುಗ್ಗಿ ದನಗಳು ಬೆಳೆ ಹಾನಿ ಮಾಡಿದ ವಿಚಾರವಾಗಿ ಯುವಕನೊಬ್ಬನ ತಲೆಗೆ ಮಚ್ಚಿನಿಂದ ಹೊಡೆದು (Attack) ಗಂಭೀರ ಗಾಯಗೊಳಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
ತಟ್ಟಿಕೆರೆ ಗ್ರಾಮದ ಕೌಶಿಕ್ (19) ಎಂಬಾತ ಗಂಭೀರ ಗಾಯಗೊಂಡಿದ್ದಾನೆ. ಕೌಶಿಕ್ ಅವರ ಜೋಳದ ಹೊಲಕ್ಕೆ ದನಗಳು ನುಗ್ಗಿದ್ದು, ಬೆಳೆ ಹಾನಿಯಾಗಿತ್ತು. ದನಗಳನ್ನು ಸರಿಯಾಗಿ ನೋಡಿಕೊಳ್ಳಿ ಎಂದು ಅವುಗಳ ಮಾಲೀಕರಿಗೆ ಕೌಶಿಕ್ ತಿಳಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅ.21ರಂದು ದನದ ಮಾಲೀಕ ಮತ್ತು ಆತನ ಮಗ ಜಮೀನಿಗೆ ಹೋಗುತ್ತಿದ್ದ ಕೌಶಿಕ್ನನ್ನು ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿದ್ದಾರೆ. ಮಚ್ಚಿನಿಂದ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾರೆ (Attack) ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ- ಬೈಕ್ ಹಾರನ್ ಮಾಡಿದ್ದಕ್ಕೆ ಫಾಲೋ ಮಾಡಿಕೊಂಡು ಬಂದು ಮಾರಕಾಸ್ತ್ರದಿಂದ ದಾಳಿ
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕೌಶಿಕ್ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂ