SHIVAMOGGA LIVE NEWS | 16 APRIL 2024
SHIMOGA : ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮತ್ತೆ ಶುರುವಾಗಿದೆ. ಚಿತ್ರದುರ್ಗಕ್ಕೆ ತೆರಳುವ ಬಸ್ಸಿನೊಳಗೆ ಕ್ಯಾರಿಯರ್ನಲ್ಲಿದ್ದ ಲ್ಯಾಪ್ ಟಾಪ್ ಕಳ್ಳತನ ಮಾಡಲಾಗಿದೆ. ನೀರು ಕುಡಿಯಲೆಂದು ಪ್ರಯಾಣಿಕ ಬ್ಯಾಗ್ನತ್ತ ಕಣ್ಣು ಹಾಯಿಸಿದಾಗ ಕಳುವಾಗಿರುವುದು ಬೆಳಕಿಗೆ ಬಂದಿದೆ.
ಅಶೋಕ ನಗರದ ನಿವಾಸಿ ಸಿವಿಲ್ ಇಂಜಿನಿಯರ್ ಅವಿನಾಶ್ ಪ್ರತಿದಿನ ಕೆಲಸಕ್ಕೆ ಚಿತ್ರದುರ್ಗದ ಮಲ್ಲಾಡಿಹಳ್ಳಿಗೆ ತೆರಳುತ್ತಿದ್ದರು. ಏ.4ರಂದು ಚಿತ್ರದುರ್ಗದ ಕೆಎಸ್ಆರ್ಟಿಸಿ ಬಸ್ ಹತ್ತಿದ್ದರು. ಲಗೇಜ್ ಕ್ಯಾರಿಯರ್ನಲ್ಲಿ ಬ್ಯಾಗ್ ಇಟ್ಟು ಸೀಟಿನಲ್ಲಿ ಕುಳಿತಿದ್ದರು. ಬಸ್ ಹೊರಡುವ ಹೊತ್ತಿಗೆ ನೀರು ಕುಡಿಯಲೆಂದು ತಲೆ ಎತ್ತಿದಾಗ ಬ್ಯಾಗ್ ನಾಪತ್ತೆಯಾಗಿತ್ತು. ಬ್ಯಾಗ್ನಲ್ಲಿ 20 ಸಾವಿರ ರೂ. ಮೌಲ್ಯದ ಡೆಲ್ ಲ್ಯಾಪ್ಟಾಪ್ ಇತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೊಡ್ಡಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಗೀತಾ ಶಿವರಾಜ್ ಕುಮಾರ್ ಬಳಿ 11 ಕೆ.ಜಿ ಆಭರಣ, ಮಗಳ ಖಾತೆಯಲ್ಲಿ ಕೇವಲ 100 ರೂ., ಒಟ್ಟು ಆಸ್ತಿ ಎಷ್ಟಿದೆ?