ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 13 ಜನವರಿ 2022
ಗಾಂಧಿ ಬಜಾರ್’ನಲ್ಲಿ ಬೈಕ್ ಕಳ್ಳತನ
ಗಾಂಧಿ ಬಜಾರ್’ನಲ್ಲಿಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಗಾಂಧಿ ಬಜಾರ್ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದ ಸ್ಪ್ಲೆಂಡರ್ ಬೈಕ್ ಕಳುವಾಗಿದೆ. ರಾಜೇಶ್ ಚಂದ್ರಕಾಂತ್ ಬಿದರಿ ಎಂಬುವವರಿಗೆ ಸೇರಿದ ಬೈಕ್ ನಾಪತ್ತೆಯಾಗಿದೆ. ಅಂಗಡಿಯೊಂದಕ್ಕೆ ಹೋಗಿ ಬರುವಷ್ಟರಲ್ಲು ಬೈಕ್ ನಾಪತ್ತೆಯಾಗಿದೆ. ಈ ಕುರಿತು ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಟೋ ಕದ್ದೊಯ್ದ ಕಳ್ಳರು
ಶಿವಮೊಗ್ಗದ ಸುಂದರ ಆಶ್ರಯ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ನಿಲ್ಲಿಸಿದ್ದ ಆಟೋ ಕಳ್ಳತನವಾಗಿದೆ. ಆನಂದಪ್ಪ ಎಂಬುವವರಿಗೆ ಸೇರಿದ ಆಟೋವನ್ನು ಭದ್ರಾವತಿಯ ಮುನಿಯಪ್ಪ ಎಂಬುವವರು ಬಾಡಿಗೆಗೆ ಓಡಿಸಿಕೊಂಡಿದ್ದರು. ಮುನಿಯಪ್ಪ ಅವರು ಆಟೋವನ್ನು ಸುಂದರ ಆಶ್ರಯ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ನಿಲ್ಲಿಸಿ, ಪರಿಚಿತರೊಂದಿಗೆ ಸೋಮಿನಕೊಪ್ಪಗೆ ತೆರಳಿದ್ದರು. ಮರಳಿ ಬಂದಾಗ ಆಟೋ ನಾಪತ್ತೆಯಾಗಿತ್ತು. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.