SHIVAMOGGA LIVE NEWS | 11 JANUARY 2024
HOSANAGARA : ಬೈಕ್ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಹೊಳೆ ಕ್ರಾಸ್ನಲ್ಲಿ ಘಟನೆ ಸಂಭವಿಸಿದೆ. ಗರ್ತಿಕೆರೆ ಗ್ರಾಮದ ಕಮ್ಮಚ್ಚಿ ನಿವಾಸಿ ಶಮಂತ್ (25) ಮೃತರು.
ಇದನ್ನೂ ಓದಿ – ಮಲವಗೊಪ್ಪದಲ್ಲಿ ಮರದ ಕೆಳಗೆ ಇಬ್ಬರ ಮೃತದೇಹ ಪತ್ತೆ
ಲಾರಿ ಹೊಸನಗರದಿಂದ ಸಾಗರ ಕಡೆಗೆ ತೆರಳುತ್ತಿತ್ತು. ಹೊಸನಗರ ಕಡೆಗೆ ತೆರಳುತ್ತಿತ್ತು. ಶಮಂತ್, ಚಕ್ಕಮಣತಿ ಗ್ರಾಮದ ಮುತ್ತೂರಿನ ತನ್ನ ಅಕ್ಕನ ಮನೆಗೆ ತೆರಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಹೊಸನಗರ ಠಾಣೆ ಪಿಎಸ್ಐ ಶಿವಾನಂದ ಕೋಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.