SHIVAMOGGA LIVE NEWS | 11 JANUARY 2024
RIPPONPETE : ಮನೆಯಲ್ಲಿ ಯಾರು ಇಲ್ಲಿದ ವೇಳೆ ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರಲೆಮನೆ ಗ್ರಾಮದ ಕುಂಬಾರ ಕೇರಿವಾಸಿ ನಿಷ್ಮಾ (14) ನೇಣಿಗೆ ಶರಣಾಗಿದ್ದಾಳೆ. ತಾಯಿ ಅಂಗನವಾಡಿ ಕಾರ್ಯಕರ್ತೆ, ಕೆಲಸಕ್ಕೆ ತೆರಳಿದ್ದರು. ಆಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ನಿಷ್ಮಾ, ಸರ್ಕಾರಿ ಪ್ರೌಢಶಾಲೆಯಲ್ಲಿ ಒಂಬತ್ತನೆ ತರಗತಿ ಓದುತ್ತಿದ್ದಳು. ರಿಪ್ಪನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಮಲವಗೊಪ್ಪದಲ್ಲಿ ಮರದ ಕೆಳಗೆ ಇಬ್ಬರ ಮೃತದೇಹ ಪತ್ತೆ