SHIVAMOGGA LIVE NEWS | 20 FEBRUARY 2024
SHIMOGA : ಗೋಡೋನ್ನಲ್ಲಿ ಅಗ್ನಿ ಅವಘಡ ಸಂಭವಿಸಿ ಕಾರು, ಅಡಿಕೆ ಚೀಲಗಳು, ತೆಂಗಿನ ಕಾಯಿಗಳು ಸುಟ್ಟು ಹೋಗಿವೆ. ಶಿವಮೊಗ್ಗ ತಾಲೂಕು ಮತ್ತೂರು ಗ್ರಾಮದ ಬಾಬಯ್ಯ ಎಂಬುವವರಿಗೆ ಸೇರಿದ ಗೋಡೋನ್ನಲ್ಲಿ ಘಟನೆ ಸಂಭವಿಸಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಘಟನೆ ಸಂಭವಿಸಿರುವ ಶಂಕೆ ಇದೆ. ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದರು. ಆದರೆ ಬೆಂಕಿಯ ಕೆನ್ನಾಲಗೆಗೆ ಗೋಡನ್ನಲ್ಲಿದ್ದ ವಸ್ತುಗಳು ಆಹುತಿಯಾದವು. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಲಕ್ಷಾಂತರ ರೂ. ನಷ್ಟವಾಗಿದೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ – ಹುಂಡೈ ಶೋ ರೂಂಗೆ ಬೆಂಕಿ, ಟಾಟಾ ಕಾರುಗಳು ಅಗ್ನಿಗಾಹುತಿ, ಬೆಂಕಿ ಹೊತ್ತಿದ್ದೇಕೆ? ಏನೇನೆಲ್ಲ ಸುಟ್ಟು ಹೋಗಿದೆ?