ಶಿವಮೊಗ್ಗದಲ್ಲಿ ಬೈಕ್‌ಗಳು ಮುಖಾಮುಖಿ ಡಿಕ್ಕಿ, ನ್ಯಾಮತಿಯ ವ್ಯಕ್ತಿ ಸಾವು

ACCIDENT-NEWS-GENERAL-IMAGE.

ಶಿವಮೊಗ್ಗ: ಓವರ್‌ ಟೇಕ್‌ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಮತ್ತೊಂದು ಬೈಕ್‌ ಡಿಕ್ಕಿ (Mishap) ಹೊಡೆದಿದೆ. ಘಟನೆಯಲ್ಲಿ ಓರ್ವ ಬೈಕ್‌ ಸವಾರ ಸಾವನ್ನಪ್ಪಿದ್ದಾನೆ. ಮತ್ತಿಬ್ಬರು ಗಾಯಗೊಂಡಿದ್ದಾರೆ. ಶಿವಮೊಗ್ಗ ತಾಲೂಕು ಗೆಜ್ಜೇನಹಳ್ಳಿ ಮತ್ತು ಜಕಾತಿಕೊಪ್ಪ ಮಧ್ಯೆ ಘಟನೆ ಸಂಭವಿಸಿದೆ. ನ್ಯಾಮತಿಯ ಚಿನ್ನಿಕಟ್ಟೆ ನಿವಾಸಿ ನರಸಿಂಹ (25) ಎಂಬಾತ ಮೃತಪಟ್ಟಿದ್ದಾರೆ. ಕೆಲಸದ ನಿಮಿತ್ತ ನರಸಿಂಹ ತೆರಳುತ್ತಿದ್ದ ಬೈಕ್‌ಗೆ ಎದುರಿನಿಂದ ಬಂದ ಮತ್ತೊಂದು ಬೈಕ್‌ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ನರಸಿಂಹಗೆ ತೀವ್ರ ಗಾಯವಾಗಿತ್ತು. ಕೂಡಲೆ ಆತನನ್ನು ಮೆಗ್ಗಾನ್‌ … Read more

ಶಿವಮೊಗ್ಗದಲ್ಲಿ ಸರ್ಕಾರಿ ಆಂಬುಲೆನ್ಸ್‌ ಚಾಲಕನಿಗೆ ₹10,000 ದಂಡ, ಕಾರಣವೇನು?

Fine-for-108-Ambulance-driver-in-Shimoga

ಶಿವಮೊಗ್ಗ: ಮದ್ಯ ಸೇವನೆ ಮಾಡಿ ಆಂಬುಲೆನ್ಸ್‌ ಚಾಲನೆ ಮಾಡುತ್ತಿದ್ದ ಚಾಲಕನಿಗೆ ₹10,000 ದಂಡ (Fine) ವಿಧಿಸಲಾಗಿದೆ. ಆ.25ರಂದು ವಾಹನಗಳ ತಪಾಸಣೆ ವೇಳೆ ಸರ್ಕಾರಿ ಆಂಬುಲೆನ್ಸ್‌ ಚಾಲಕನೊಬ್ಬ ಮದ್ಯ ಸೇವಿಸಿರುವ ಅನುಮಾನ ಬಂದಿತ್ತು. ಆಂಬುಲೆನ್ಸ್‌ ತಡೆದು ಚಾಲಕನನ್ನು ತಪಾಸಣೆಗೆ ಒಳಪಡಿಸಿದಾಗ ಮದ್ಯ ಸೇವಿಸಿರುವುದು ದೃಢವಾಗಿದೆ. ಈ ಹಿನ್ನೆಲೆ ಪಿಎಸ್‌ಐ ತಿರುಮಲೇಶ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 4ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆಂಬುಲೆನ್ಸ್‌ ಚಾಲಕನಿಗೆ ದಂಡ ವಿಧಿಸಿದೆ. ವಾಹನ ತಪಾಸಣೆ ವೇಳೆ ಪಶ್ಚಿಮ ಸಂಚಾರ … Read more

ಶಿವಮೊಗ್ಗದ ಹೂವಿನ ಮಾರುಕಟ್ಟೆಯಿಂದ ಹಿಂತಿರುಗಿದ ನ್ಯಾಮತಿಯ ವ್ಯಕ್ತಿ ಕಾದಿತ್ತು ಶಾಕ್‌, ಆಗಿದ್ದೇನು?

Crime-News-General-Image

ಶಿವಮೊಗ್ಗ: ಜನನಿಬಿಡ ಪ್ರದೇಶದಲ್ಲಿಯೇ ಪಾರ್ಕಿಂಗ್‌ ಮಾಡಿದ್ದ ಬೈಕ್‌ (Bike) ಕಳ್ಳತನವಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಎ.ಕೆ.ಕಾಲೋನಿಯ ಸಂತೋಷ್‌ ಎಂಬುವವರು ತಮ್ಮ ಸಂಬಂಧಿಯ ಬೈಕ್‌ ತೆಗೆದುಕೊಂಡು ಶಿವಮೊಗ್ಗಕ್ಕೆ ಬಂದಿದ್ದರು. ಶಿವಪ್ಪನಾಯಕ ಪ್ರತಿಮೆ ಸಮೀಪ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದರು. ಹೂವಿನ ಮಾರುಕಟ್ಟೆಗೆ ಹೋಗಿ ಹಿಂತಿರುಗುವಷ್ಟರಲ್ಲಿ ಬೈಕ್‌ ನಾಪತ್ತೆಯಾಗಿತ್ತು. ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಪೊಲೀಸರ ರೂಟ್‌ ಮಾರ್ಚ್‌, ಎಲ್ಲೆಲ್ಲಿ ಸಾಗಿತು ಪಥಸಂಚಲನ?ಅ ಎಲ್ಲೆಡೆ ಹುಡುಕಿದ ಸಂತೋಷ್‌ ಬಳಿಕ ದೂರು … Read more

ಗಣಪತಿ ಹಬ್ಬದ ಚಂದಾ ವಿಚಾರವಾಗಿ ನಡುಬೀದಿಯಲ್ಲಿ ಗಲಾಟೆ, ಮೂವರ ವಿರುದ್ಧ ಕೇಸ್‌

Crime-News-General-Image

ಶಿವಮೊಗ್ಗ: ಗಣಪತಿ ಹಬ್ಬದ (Ganesha) ಚಂದಾ ಹಣದ ವಿಚಾರವಾಗಿ‌ ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದ ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ರವಿವರ್ಮ ಬೀದಿಯಲ್ಲಿ ಗಲಾಡೆ ಮಾಡುತ್ತಿದ್ದರು. ನಾಗರಾಜ್‌, ಕೃಷ್ಣ ಮತ್ತು ಚಂದನ್‌ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದ. ಗಣೇಶ ಹಬ್ಬದ ಚಂದಾ ಹಣದ ವಿಚಾರವಾಗಿ ನಡುರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದರು. ಗಸ್ತು ತಿರುಗುತ್ತಿದ್ದ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಯುವಕರು ಪರಾರಿಯಾಗಲು ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ » ಜೀವ ವಿಮೆ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಐದು ವಿಧದ ಇನ್ಷುರೆನ್ಸ್‌ಗಳ … Read more

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ, MBBS ವಿದ್ಯಾರ್ಥಿಗಳು ಸಾವು, ರಸ್ತೆ ಮೇಲೆ ಹರಿದ ಹಾಲು, ನೆತ್ತರು

mishap-at-circuit-house-circle-in-Shimoga-city.

ಶಿವಮೊಗ್ಗ: ನಗರದ ಸರ್ಕ್ಯೂಟ್‌ ಹೌಸ್‌ ಸರ್ಕಲ್‌ನಲ್ಲಿ ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೆಡಿಕಲ್‌ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್‌ ಮತ್ತು ನಂದಿನಿ ಹಾಲಿನ ವಾಹನ (Milk Van) ಮುಖಾಮುಖಿ ಡಿಕ್ಕಿಯಾಗಿವೆ. ಮೂರನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳಾದ ಆದಿತ್ಯ ಮತ್ತು ಸಂದೀಪ್‌ ಮೃತರು. ರಸ್ತೆ ಮೇಲೆ ಹರಿದ ನೆತ್ತರು, ಹಾಲು ನಂದಿನಿ ಹಾಲಿನ ವಾಹನ ಮತ್ತು ಬೈಕ್‌ ಡಿಕ್ಕಿಯಾಗಿ ಆದಿತ್ಯ ಮತ್ತು ಸಂದೀಪ್‌ ಕೆಳಗೆ ಬಿದ್ದು ಗಾಯಗೊಂಡು, ತೀವ್ರ ರಕ್ತಸ್ರಾವ ಉಂಟಾಗಿದೆ. ರಸ್ತೆ ಮೇಲೆ ರಕ್ತ … Read more

ಫೈನಾನ್ಸ್‌ ಸಂಸ್ಥೆ ಲಾಯರ್‌ ಅಂತಾ ಮಹಿಳೆಗೆ ಫೋನ್‌, ಕೇಸು, ಆಧಾರ್‌ ರದ್ಧತಿಯ ವಾರ್ನಿಂಗ್‌, ಏನಿದು ಪ್ರಕರಣ?

Crime-News-General-Image

ಶಿವಮೊಗ್ಗ: ದ್ವಿಚಕ್ರ ವಾಹನದ ಮೇಲೆ ಸಾಲ ಬಾಕಿ (Loan) ಇದೆ ಎಂದು ಹೆದರಿಸಿ, ಕೇಸ್‌ ಹಾಕುವ ಬೆದರಿಕೆಯೊಡ್ಡಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ ₹27,900 ವಂಚಿಸಲಾಗಿದೆ. ಶಿವಮೊಗ್ಗದ ಮಹಿಳೆಗೆ (ಹೆಸರು ಗೌಪ್ಯ) ಕರೆ ಮಾಡಿದ ವ್ಯಕ್ತಿಯೊಬ್ಬ ಬೆಂಗಳೂರಿನ ಕೋರಮಂಗಲದಲ್ಲಿರುವ ಫೈನಾನ್ಸ್‌ ಕಂಪನಿಯಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದ. ದ್ವಿಚಕ್ರ ವಾಹನದ ಮೇಲಿನ ಸಾಲದ ಕಂತು ಎರಡು ತಿಂಗಳಿನಿಂದ ಪಾವತಿಸಿಲ್ಲ. ಕೂಡಲೆ ಪಾವತಿಸಬೇಕು ಎಂದು ಹೆದರಿಸಿದ್ದ. ಕ್ಯೂ ಆರ್‌ ಕೋಡ್‌ ಕಳುಹಿಸಿ ₹14,650 ವರ್ಗಾಯಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಂಕ್‌ನಿಂದ ಹೊರ … Read more

ಜನಶತಾಬ್ದಿ ರೈಲು ಹತ್ತಲು ತೆರಳುತ್ತಿದ್ದ ವಕೀಲನ ಮೇಲೆ ದಾಳಿ, ಬ್ಯಾಗ್‌ ಕಸಿದು ಪರಾರಿ, ಏನಿತ್ತು ಅದರಲ್ಲಿ?

200123 Police Jeep With Light jpg

ಶಿವಮೊಗ್ಗ: ಜನಶತಾಬ್ದಿ ರೈಲು ಹತ್ತಲು ತೆರಳುತ್ತಿದ್ದ ವಕೀಲರೊಬ್ಬರ (Advocate) ಮೇಲೆ ಮೂವರು ದುಷ್ಕರ್ಮಿಗಳು ದಾಳಿ ಮಾಡಿ ಅವರ ಬ್ಯಾಗ್‌ ಕಸಿದುಕೊಂಡಿದ್ದಾರೆ. ಅದರಲ್ಲಿ ಮೊಬೈಲ್‌, ವಕೀಲರ ಕೋಟ್‌ ಮತ್ತು ನಗದು ಇತ್ತು ಆರೋಪಿಸಲಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಉಚಿತವಾಗಿ ಹೆಪಟೈಟಿಸ್‌ ಬಿ ತಪಾಸಣೆ ಶಿಬಿರ, ಲಸಿಕೆ ವಿತರಣೆ, ಈಗಲೆ ಹೆಸರು ನೋಂದಣಿಗೆ ಸೂಚನೆ ವಕೀಲ ಅಶೋಕ್‌ ಅವರು ಜೂನ್‌ 18ರಂದು ಬೆಂಗಳೂರಿನ ಹೈಕೋರ್ಟ್‌ಗೆ ತೆರಳಬೇಕಿತ್ತು. ಹಾಗಾಗಿ ಬೆಳಗ್ಗೆ ಜನಶತಾಬ್ದಿ ರೈಲು ಹತ್ತಲು ತೆರಳುತ್ತಿದ್ದರು. ರವೀಂದ್ರನಗರ ಗಣಪತಿ ದೇವಸ್ಥಾನದ ಬಳಿ … Read more

ಶಿವಮೊಗ್ಗದಲ್ಲಿ ಬ್ಯಾಂಕ್‌ನಿಂದ ಹೊರ ಬಂದ ವ್ಯಕ್ತಿಗೆ ಕಾದಿತ್ತು ಆಘಾತ

crime name image

ಶಿವಮೊಗ್ಗ: ಬ್ಯಾಂಕಿನಿಂದ (Bank) ಹಿಂತಿರುಗುಷ್ಟರಲ್ಲಿ ಬೈಕ್‌ ಕಳ್ಳತನವಾಗಿದೆ. ಶಿವಮೊಗ್ಗದ ಗಾರ್ಡನ್‌ ಏರಿಯಾದ ಬ್ಯಾಂಕ್‌ ಆಫ್‌ ಮಹಾರಾಷ್ಟ್ರದ ಎದುರು ಘಟನೆ ನಡೆದಿದೆ. ಬೈರಪ್ಪ ಎಂಬುವವರು ಬೈಕ್‌ ನಿಲ್ಲಿಸಿ ಬ್ಯಾಂಕಿಗೆ ಹೋಗಿದ್ದರು. ಕೆಲವೇ ನಿಮಿಷದಲ್ಲಿ ಕೆಲಸ ಮುಗಿಸಿ ಹೊರ ಬಂದಾಗ ಸ್ಪ್ಲೆಂಡರ್‌ ಬೈಕ್‌ ಇರಲಿಲ್ಲ. ಎಲ್ಲೆಡೆ ಹುಡುಕಿದ ಬೈರಪ್ಪ ಅವರು ಬೈಕ್‌ ಸಿಗದ ಹಿನ್ನೆಲೆ ದೂರು ನೀಡಿದ್ದಾರೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ಒಳ ಹರಿವು ಎಷ್ಟಿದೆ? ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗದ ಮಣಿಕಂಠ ಕೊಲೆ ಕೇಸ್‌, ತಮ್ಮನಿಂದಲೇ ಹತ್ಯೆ, ಆರೋಪಿ ಅರೆಸ್ಟ್‌, ಕೃತ್ಯಕ್ಕೆ ಕಾರಣವೇನು?

Melina-tunga-Nagara-manikanta-issue

ಶಿವಮೊಗ್ಗ: ಮೇಲಿನ ತುಂಗಾನಗರದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಮಣಿಕಂಠನ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ (Arrest). ಕ್ಷುಲಕ ವಿಚಾರಕ್ಕೆ ಸಹೋದರನೆ ಮಣಿಕಂಠನ ಹತ್ಯೆ ‌ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ » ಗಾಳಿ, ಮಳೆಗೆ ಹಲವೆಡೆ ಹಾನಿ, ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ನ್ಯೂಸ್‌ ಮಣಿಕಂಠನ ತಮ್ಮ ಸಂತೋಷ್‌ (31) ಎಂಬಾತನನ್ನು ತುಂಗಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ಮುಂದುವರೆಸಿದ್ದಾರೆ. ಹತ್ಯೆಗೆ ಕಾರಣವೇನು? ಮೇಲಿನ ತುಂಗಾನಗರದ … Read more

BREAKING NEWS – ಶಿವಮೊಗ್ಗದಲ್ಲಿ ಕೊಲೆ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಶಂಕೆ

Melina-tunga-Nagara-manikanta-issue

ಶಿವಮೊಗ್ಗ: ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಶಿವಮೊಗ್ಗದ ಮೇಲಿನ ತುಂಗಾನಗರದಲ್ಲಿ ಘಟನೆ (Incident) ಸಂಭವಿಸಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಯುವತಿ ಇದ್ದ ಆಂಬುಲೆನ್ಸ್‌ಗೆ ಜೀರೋ ಟ್ರಾಫಿಕ್‌, ವಿಮಾನ ನಿಲ್ದಾಣದಿಂದ ಮುಂಬೈಗೆ ಶಿಫ್ಟ್‌ ಮಣಿಕಂಠ (38) ಕೊಲೆಯಾದ ಯುವಕ. ಈತ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು ಎಂದು ತಿಳಿದುಬಂದಿದೆ. ತಡರಾತ್ರಿ ಮಣಿಕಂಠನ ತಲೆ ಮೇಲೆ ದೊಡ್ಡ ಗಾತ್ರದ ಕಲ್ಲನ್ನು ಎತ್ತಿ ಹಾಕಿ ಹತ್ಯೆ ಮಾಡಿರುವ ಶಂಕೆ … Read more