ಶಿವಮೊಗ್ಗ ಸಿಟಿಯಲ್ಲಿ 103 ಕೆ.ಜಿ. ಜಿಂಕೆ ಮಾಂಸ ಸಾಗಣೆ ಮಾಡುತ್ತಿದ್ದ ಜಿಂಕೆ ಮಂಜ ಅರೆಸ್ಟ್, ಆಟೋ ಸೀಜ್

070920 Deer Hunters Arrested By Tunga Nagara Police 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಸೆಪ್ಟಂಬರ್ 2020 ಜಿಂಕೆ ಮಾಂಸ ಮಾರಾಟಕ್ಕೆ ಆಟೋದಲ್ಲಿ ಸಾಗಿಸುತ್ತಿದ್ದ ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅರಣ್ಯ ಇಲಾಖೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಿದ್ದಾರೆ. ಶಿವಮೊಗ್ಗ ಶ್ರೀರಾಮಪುರದ ಮಂಜುನಾಥ ಅಲಿಯಾಸ್ ಜಿಂಕೆ ಮಂಜ (30), ಮಲ್ಲಿಗೇನಹಳ್ಳಿಯ ಉಮೇಶ್ ನಾಯ್ಕ (32) ಬಂಧಿತರು. ಇವರಿಂದ 103 ಕೆ.ಜಿ. ಜಿಂಕೆ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ. ಮಾರಾಟ ಮಾಡಲು ಆಟೋದಲ್ಲಿ ಜಿಂಕೆ ಮಾಂಸವನ್ನು ಸಾಗಣೆ ಮಾಡುತ್ತಿದ್ದರು. ಆಟೋ ಮತ್ತು … Read more

ಶಿವಮೊಗ್ಗದ ಪಾರ್ಕ್ ಬಡಾವಣೆಯ ಲಾಡ್ಜ್ ಮೇಲೆ ಪೊಲೀಸರ ದಾಳಿ, ಎಂಟು ಮಂದಿ ಅರೆಸ್ಟ್

jayanagara police station in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಸೆಪ್ಟಂಬರ್ 2020 ಶಿವಮೊಗ್ಗದ ಲಾಡ್ಜ್ ಒಂದರ ಮೇಲೆ ಪೊಲೀಸರು ದಾಳಿ ನಡೆಸಿ ಇಸ್ಪೀಟು ಜೂಜಾಡುತ್ತಿದ್ದ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಇವರಿಂದ 1.20 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಪಾರ್ಕ್ ಬಡಾವಣೆಯ ತಿರುಮಲ ಲಾಡ್ಜ್‍ನ ರೂಂ ಒಂದರಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಜಯನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತರಿಂದ 1,20,260 ರೂ. ನಗದು, 8 ಮೊಬೈಲ್ ಫೋನ್, 7 ದ್ವಿಚಕ್ರ ವಾಹನಗಳನ್ನು … Read more

ಜಿಂಕೆ ಮಾಂಸ, ಚರ್ಮ ಮಾರಾಟಕ್ಕೆ ಯತ್ನ, ಇಬ್ಬರು ಅರೆಸ್ಟ್, ಸಿಕ್ಕಿಬಿದ್ದವರಾರು? ಎಲ್ಲಿ ಬೇಟೆಯಾಡಿದ್ದರು?

070920 Deer Hunters Arrest in Kumsi Limits 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಸೆಪ್ಟಂಬರ್ 2020 ಕಾಡಿನಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಸಾಗಿಸಲು ಯತ್ನಿಸುತ್ತಿದ್ದ ಇಬ್ಬರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತರಿಂದ 40 ಕೆ.ಜಿ ಜಿಂಕೆ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ. ಅಡಗಡಿ ಗ್ರಾಮದ ಅನಿಲ್ ಮತ್ತು ಹನುಮಂತ ಎಂಬುವವರು ಮಂಡಘಟ್ಟ ಸಮೀಪ ಕಾಡಿನಲ್ಲಿ ಜಿಂಕೆ ಬೇಟೆಯಾಡಿದ್ದರು. ಜಿಂಕೆಯ ತಲೆ, ಚರ್ಮ, ಕೊಂಬು ಮತ್ತು ಮಾಂಸವನ್ನು ಬೇರ್ಪಡಿಸಿ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. … Read more

ಭದ್ರಾವತಿಯಲ್ಲಿ ರಾತ್ರಿ ವೇಳೆ ಬೈಕ್ ಕಳ್ಳತನ ಮಾಡಿದ್ದ ಕೋಳಿ ಮಂಜ ಅರೆಸ್ಟ್, ಎರಡು ಬೈಕ್ ಸೀಜ್

prison hand cuff image

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 2 ಸೆಪ್ಟಂಬರ್ 2020 ಭದ್ರಾವತಿಯಲ್ಲಿ ಬೈಕ್‍ ಕಳ್ಳತನ ಮಾಡಿದ್ದವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಳೆನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನವಾಗಿತ್ತು. ನಾಲ್ಕೆ ದಿನದಲ್ಲಿ ಅರೆಸ್ಟ್ ಭದ್ರಾವತಿ ಅನ್ವರ್ ಕಾಲೋನಿಯಲ್ಲಿ ರಾತ್ರಿ ವೇಳೆ ಬೈಕ್ ಕಳ್ಳತನವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಶೆಟ್ಟಿಹಳ್ಳಿ ಗ್ರಾಮದ ವಾಸುಭೋವಿ ಅಲಿಯಾಸ್ ಕೋಳಿ ಮಂಜ (33) ಎಂಬಾತನನ್ನು ಬಂಧಿಸಲಾಗಿದೆ. ಎರಡು ಬೈಕ್ ಸೀಜ್ ಕೋಳಿ ಮಂಜನಿಂದ ಎರಡು ಬೈಕ್‍ಗಳನ್ನು … Read more

ಜೀವಂತ ಹಸುವಿನ ಚರ್ಮ ಸುಲಿಯಲು ಯತ್ನ, ಕಟುಕರಿಂದ ತಪ್ಪಿಸಿಕೊಂಡ ಹಸುವಿಗೆ ಭಜರಂಗದಳದಿಂದ ಚಿಕಿತ್ಸೆ, ದೂರು

310820 Bajarangadal Rescues Cow in Bhadravathi 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 31 ಆಗಸ್ಟ್ 2020 ಹತ್ಯೆಕೋರರಿಂದ ತಪ್ಪಿಸಿಕೊಂಡು ಬಂದು ಗಾಯಗೊಂಡಿದ್ದ ಹಸುವಿಗೆ ಭಜರಂಗದಳ ಕಾರ್ಯಕರ್ತರು ಚಿಕಿತ್ಸೆ ನೀಡಿ, ರಕ್ಷಣೆ ಮಾಡಿದ್ದಾರೆ. ಭದ್ರಾವತಿ ಪಟ್ಟಣದಲ್ಲಿ ಘಟನೆ ಸಂಭವಿಸಿದೆ. ಏನಿದು ಪ್ರಕರಣ? ಜೀವಂತ ಹಸುವಿನ ಚರ್ಮ ಸುಲಿಯಲು ಕಟುಕರು ಪ್ರಯತ್ನಿಸಿದ್ದಾರೆ. ಅದರ ಕಾಲಿನ ಭಾಗದಲ್ಲಿ ಚರ್ಮ ಸುಲಿಯಲಾಗಿದೆ. ಬೊಮ್ಮನಕಟ್ಟೆಯಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕಟುಕರಿಂದ ತಪ್ಪಿಸಿಕೊಂಡ ಹಸು ಹುಡ್ಕೊ ಕಾಲೋನಿವರೆಗೂ ಬಂದಿದ್ದು, ಸುಸ್ತಾಗಿ ಕೂಳಿತಿತ್ತು. ಇದನ್ನು ಗಮನಿಸಿದ ಭಜರಂಗದಳ ಕಾರ್ಯಕರ್ತರು, ಚಿಕಿತ್ಸೆ … Read more

ಮೋದಿ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನ, ಶಿವಮೊಗ್ಗದಲ್ಲಿ ಕಾಂಗ್ರೆಸ್ ಮುಖಂಡನ ಬಂಧನ

vinobanagara polic station and police jeep

ಶಿವಮೊಗ್ಗ ಲೈವ್.ಕಾಂ | SHIMOGA NEWS | 29 ಆಗಸ್ಟ್ 2020 ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಾಚ್ಯವಾಗಿ ನಿಂದಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಪ್ರಕಟಿಸಿದ್ದ ಆರೋಪದ ಹಿನ್ನೆಲೆ ಜಿಲ್ಲಾ ಕಾಂಗ್ರೆಸ್ ಪಕ್ಷದ ವಕ್ತಾರನನ್ನು ಬಂಧಿಸಲಾಗಿದೆ. ವಿನೋಬನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೀಪಕ್ ಸಿಂಗ್, ಬಂಧಿತರು. ಇವರು ಫೇಸ್‍ಬುಕ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಬಳಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೋಸ್ಟ್ ಪ್ರಕಟಿಸಿದ್ದರು ಎಂದು ಬಿಜೆಪಿ ಯುವ ಮೋರ್ಚಾ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಐಪಿಸಿ 504, … Read more

ಜೋಗ ರಾಣಿ ಫಾಲ್ಸ್‌ನಿಂದ ಜಿಗಿಯಲು ಯತ್ನಿಸಿದ್ದ ಯುವಕ ಆಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ

260820 Youth Attempts Suicide in Jog Falls 1

ಶಿವಮೊಗ್ಗ ಲೈವ್.ಕಾಂ | SAGARA NEWS | 28 ಆಗಸ್ಟ್ 2020 ಜೋಗ ಜಲಪಾತದಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಯುವಕನನ್ನು ಆತನ ಪೋಷಕರಿಗೆ ಒಪ್ಪಿಸಲಾಗಿದೆ. ಆತನನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಬುಧವಾರ ಜೋಗದ ರಾಣಿ ಫಾಲ್ಸ್‍ ಮೇಲಿಂದ ಜಿಗಿಯಲು ಬೆಂಗಳೂರಿನ ಚೇತನ್ ಯತ್ನಿಸಿದ್ದ. ಪೊಲೀಸರು ಆತನ ಮನವೊಲಿಸಿದ್ದರು. ಚೇತನ್ ಬಳಿ ಮಾಹಿತಿ ಪಡೆದು ಬೆಂಗಳೂರಿನಲ್ಲಿರುವ ಪೋಷಕರಿಗೆ ತಿಳಿಸಲಾಗಿತ್ತು. ಆಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಚೇತನ್‍ ತಾಯಿ ಮತ್ತು ಸಹೋದರ ಜೋಗ ಪೊಲೀಸ್ ಠಾಣೆಗೆ ಬಂದು ಕರೆದೊಯ್ದಿದ್ದಾರೆ. ಈ ವೇಳೆ ಠಾಣೆಯಲ್ಲಿ … Read more

ಹುಲಿ ಉಗುರು ಮಾರಾಟಕ್ಕೆ ಯತ್ನಿಸಿದವರ ಮೇಲೆ ಐಜಿಪಿ ಸ್ಕ್ವಾಡ್‌ನಿಂದ ದಾಳಿ, ಎಷ್ಟು ಉಗುರು ಸಿಕ್ಕಿವೆ? ಬಂಧಿತರು ಯಾರು?

ಶಿವಮೊಗ್ಗ ಲೈವ್.ಕಾಂ | ANANDAPURA NEWS | 28 ಆಗಸ್ಟ್ 2020 ಹುಲಿ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸಿದವರ ಮೇಲೆ ದಾವಣಗೆರೆ ಐಜಿಪಿ ಸ್ಕ್ವಾಡ್ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತರಿಂದ ನಾಲ್ಕು ಹುಲಿ ಉಗುರುಗಳನ್ನು ವಶಕ್ಕೆ ಪಡೆಯಲಾಗಿದೆ. ಆನಂದಪುರದ ಮಾರಿಕಾಂಬ ದೇಗುಲ ಎದುರಿನ ರಸ್ತೆಯಲ್ಲಿ ದಾಳಿ ನಡೆಸಲಾಗಿದೆ. ಇಲ್ಲಿನ ಅಶೋಕ ರಸ್ತೆಯ ಓಂಕೇಶ್ (56), ವಿಶ್ವನಾಥ್ (60) ಮತ್ತು ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚ್ಕಾಳಸರದ ಮೋಹನ್ (35) ಬಂಧಿತರು. ಐದು ಹುಲಿ ಉಗುರುಗಳನ್ನು ಮಾರಾಟಕ್ಕೆ ತಂದಿದ್ದು … Read more

ಪೊಲೀಸ್ ಇನ್ಸ್‌ಪೆಕ್ಟರ್ ಫೇಸ್‌ಬುಕ್ ಹ್ಯಾಕ್, 20 ಸಾವಿರ ಕೊಡುವಂತೆ ಸ್ನೇಹಿತರಿಗೆ ಮನವಿಯ ಮೆಸೇಜ್

facebook logo

ಶಿವಮೊಗ್ಗ ಲೈವ್.ಕಾಂ | SAGARA NEWS | 27 ಆಗಸ್ಟ್ 2020 ಪೊಲೀಸ್ ಇನ್ಸ್‍ಪೆಕ್ಟರ್ ಒಬ್ಬರ ಫೇಸ್‍ಬುಕ್ ಖಾತೆಯನ್ನೇ ಹ್ಯಾಕ್ ಮಾಡಿ, ಅವರ ಫೇಸ್‍ಬುಕ್ ಖಾತೆಯಲ್ಲಿರುವ ಸ್ನೇಹಿತರಿಗೆ ಹಣ ನೀಡುವಂತೆ ಹ್ಯಾಕರ್‍ಗಳು ಮನವಿ ಮಾಡುತ್ತಿದ್ದಾರೆ. ಈ ಸಂಬಂಧ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಗರ ಗ್ರಾಮಾಂತರ ಠಾಣೆ ಇನ್ಸ್‍ಪೆಕ್ಟರ್ ಸುನಿಲ್ ಕುಮಾರ್ ಅವರ ಫೇಸ್‍ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಬಳಿಕ ಅವರ ಫ್ರೆಂಡ್ ಲಿಸ್ಟ್‍ನಲ್ಲಿರುವವರಿಗೆ ಮೆಸೇಜ್ ಕಳುಹಿಸಿರುವ ಹ್ಯಾಕರ್‍ಗಳು, ತಾವು ಕಷ್ಟದಲ್ಲಿದ್ದು, 20 ಸಾವಿರ ಹಣ ನೀಡುವಂತೆ … Read more

ತಮಿಳುನಾಡಿನಿಂದ ನಕ್ಸಲ್ ಮಹಿಳೆ ಶಿವಮೊಗ್ಗಕ್ಕೆ, ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರು, ಯಾರದು? ಏನು ಕೇಸ್?

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಆಗಸ್ಟ್ 2020 ತಮಿಳುನಾಡು ಪೊಲೀಸರ ವಶದಲ್ಲಿದ್ದ ಹೊಸನಗರ ಮೂಲದ ನಕ್ಸಲ್ ಮಹಿಳೆಯನ್ನು ಶಿವಮೊಗ್ಗಕ್ಕೆ ಕರೆತರಲಾಗಿದೆ. ಆಕೆಯನ್ನು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಯಾರದು ನಕ್ಸಲ್? ಎಲ್ಲಿಯವರು? ನಕ್ಸಲ್ ಶೋಭಾ (34) ಎಂಬಾಕೆಯನ್ನು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈಕೆ ಹೊಸನಗರ ತಾಲೂಕು ಯಡೂರು ಸಮೀಪದ ಉಳ್ತಿಗಾ ಗ್ರಾಮದ ಮೇಲು ಸಂಕದವಳು. ಈಕೆ ಬಹುವರ್ಷ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದಳು. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಈಕೆ ವಿರುದ್ಧ ಪ್ರಕರಣಗಳು ದಾಖಲಾಗಿದೆ. … Read more