ಹೊಸನಗರದಲ್ಲಿ ಮೊಬೈಲ್ ಟವರ್ ಬ್ಯಾಟರಿ ಕದ್ದ ಇಬ್ಬರು ಅರೆಸ್ಟ್

Hosanagara taluk name Graphics

HOSANAGARA| ಮೊಬೈಲ್ ಟವರ್ ಗೆ (TOWER) ಅಳವಡಿಸಿದ್ದ ಬ್ಯಾಟರಿ ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಯೂರ್ (23) ಮತ್ತು ಖಲೀಲ್ (32) ಬಂಧಿತರು. ಸೆ.12ರಂದು ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಪ್ಪಿನಮಲ್ಲೆಯಲ್ಲಿ ಘಟನೆ ಸಂಭವಿಸಿತ್ತು. ಖಾಸಗಿ ಕಂಪನಿಗೆ ಸೇರಿದ ಮೊಬೈಲ್ ಟವರ್’ನಲ್ಲಿ (TOWER) ಅಳವಡಿಸಿದ್ದ 18 ಬ್ಯಾಟರಿಗಳು ಕಳ್ಳತನವಾಗಿದ್ದವು. ದೂರು ಬಂದ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕ್ಲಿಕ್ ಮಾಡಿ ಇದನ್ನೂ ಓದಿ | ಕೈಯಲ್ಲಿದ್ದ ಬ್ರೇಸ್ ಲೆಟ್, ಕೊರಳಲಿದ್ದ ಚೈನ್ ಗಾಗಿ … Read more

ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಗುದ್ದಿದ ಕಾಡುಕೋಣ, ಕೈ ಮುರಿತ

Bison-in-Shimoga-Tyavarekoppa-Simhadhama-Kadu-Kona

HOSANAGARA: ಮನೆಯಿಂದ ಅಂಗಡಿಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾಡುಕೋಣ (BISON ATTACK) ಗುದ್ದಿದೆ. ವ್ಯಕ್ತಿಯ ಕೈ ಮುರಿದಿದೆ. ಹೊಸನಗರ ತಾಲೂಕು ಸಂಪೇಕಟ್ಟೆ (sampekatte) ಸಮೀಪ ಗುರುವಾರ ರಾತ್ರಿ ಘಟನೆ ಸಂಭವಿಸಿದೆ. ಮನೆಯಿಂದ ಬೈಕ್‌ನಲ್ಲಿ ಅಂಗಡಿಗೆ ಹೋಗುವ ವೇಳೆ ಕಟ್ಟಿನಹೊಳೆ ಸಿಂಚನೂರು ನಿವಾಸಿ ಕೃಪಾನಂದ ದೇವರ ಭಟ್ ಎಂಬುವವರಿಗೆ ಕಾಡುಕೋಣ ಗುದ್ದಿದೆ. ಅವರು ತಮ್ಮ ಮನೆಯಿಂದ ಸಂಪೇಕಟ್ಟೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಚಕ್ರಾ ಚಾನಲ್‌ (chakra canal) ಬಳಿ ಕಾಡುಕೋಣ (BISON ATTACK) ದಿಢೀರನೆ ನುಗ್ಗಿದೆ. ಬೈಕ್‌ಗೆ ಗುದ್ದಿದ ಪರಿಣಾಮ ಪಲ್ಟಿ … Read more

ಜಮೀನಿನಲ್ಲಿ ವಿಷ ಸೇವಿಸಿದ್ದ ರೈತ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು

farmer suicide poison

RIPPONPETE | ಬೆಳಹಾನಿ, ಸಾಲಬಾಧೆಯಿಂದ (LOAN) ಮನನೊಂದು ವಿಷ ಕುಡಿದಿದ್ದ ರೈತ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ, ಈವರೆಗಿನ 10 ಬೆಳವಣಿಗೆಗಳ ಕಂಪ್ಲೀಟ್ ಮಾಹಿತಿ ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡಗೊಪ್ಪದ ಮಂಜಪ್ಪ (55) ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕ್ಲಿಕ್ ಮಾಡಿ ಇದನ್ನೂ ಓದಿ | ಮಕ್ಕಳ ಕಳ್ಳರು ವದಂತಿ, ಕಂಡ ಕಂಡವರ ಮೇಲೆ ದಾಳಿ, ಶಿವಮೊಗ್ಗ, … Read more

ಅಡಕೆ ಗಿಡಗಳನ್ನು ಕಡಿದು ಹಾಕಿದ ಆರೋಪಿ ಪೊಲೀಸ್ ವಶಕ್ಕೆ

crime name image

HOSANAGARA | ಜಮೀನು ಕಲಹ ಮತ್ತು ದಾಯಾದಿ ವೈಷಮ್ಯಕ್ಕೆ ಅಡಕೆ ಗಿಡಗಳನ್ನು (ADIKE PLANT) ಕಡಿದು ಹಾಕಲಾಗಿದೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಬೈಲು ವಾಸಿ ಕೃಷಿಕ ಗಂಗಾಧರಯ್ಯ ಎಂಬುವವರಿಗೆ ಸೇರಿದ ತೋಟದಲ್ಲಿ ಅಡಕೆ ಗಿಡಗಳನ್ನು ಕಡಿದು ಹಾಕಲಾಗಿದೆ. ಖಾತೆ ಜಮೀನಿಗೆ ಹೊಂದಿಕೊಂಡಂತೆ ಇರುವ ಸರ್ಕಾರಿ ಜಾಗದಲ್ಲಿ ಒತ್ತುವರಿ ಮಾಡಿಕೊಂಡು ಅಡಕೆ ಸಸಿಗಳನ್ನು ನೆಡಲಾಗಿತ್ತು. ಸುಮಾರು ಮೂರು ವರ್ಷದ ಸಸಿಗಳನ್ನ ಭಾನುವಾರ ರಾತ್ರಿ ಕಡಿದು ಹಾಕಲಾಗಿದೆ. 250 ಅಡಕೆ ಸಸಿಗಳನ್ನು (ADIKE PLANT) … Read more

ಮದುವೆಗೆ ಒಪ್ಪದ ಪ್ರಿಯಕರ, ವಿಷ ಕುಡಿದು ಯುವತಿ ಆತ್ಮಹತ್ಯೆ

crime name image

RIPPONPETE | ಪ್ರಿಯಕರ ಮದುವೆಗೆ (MARRIAGE) ನಿರಾಕರಿಸಿದ್ದಕ್ಕೆ ವಿಷ ಸೇವಿಸಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೂರು ತಿಂಗಳ ಹಿಂದೆಯಷ್ಟೆ ಯುವಕ ಪರಿಚಯವಾಗಿದ್ದ. ರಿಪ್ಪನ್ ಪೇಟೆ ಸಮೀಪದ ಹಾಲುಗುಡ್ಡೆ ಕ್ಯಾಂಪ್ ನಿವಾಸಿ ಅನುಷಾ (19) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಾಕೆ. ಮದುವೆ (MARRIAGE) ನಿರಾಕರಿಸಿದ್ದಕ್ಕೆ ಪ್ರಿಯಕರ ಮಂಜುನಾಥನ ಜೊತೆಗೆ ಅನುಷಾ ಜಗಳವಾಡಿದ್ದಾಳೆ. ನಂತರ ವಿಷ ಸೇವಿಸಿ ಪ್ರಿಯಕರನಿಗೆ ಕರೆ ಮಾಡಿ ತಿಳಿಸಿದ್ದಾಳೆ. ದೌಡಾಯಿಸಿದ ಪ್ರಿಯಕರ ವಿಷ ಕುಡಿದ ವಿಚಾರ ತಿಳಿದು ಮಂಜುನಾಥ ಅನುಷಾಳ ಮನೆಗೆ ದೌಡಾಯಿಸಿದ್ದಾನೆ. ಆಕೆಯನ್ನು ಆನಂದಪುರದ … Read more

ಥೈಲ್ಯಾಂಡ್, ಮಹಾರಾಷ್ಟ್ರದಂತೆ ಹೊಸನಗರದಲ್ಲೂ ಗಣಪತಿ ಮ್ಯೂಸಿಯಂ, ಹೇಗಿದೆ? ಏನೇನೆಲ್ಲ ಇದೆ?

Karanagiri-Ganapathi-Temple-Museum

ಶಿವಮೊಗ್ಗ | ಗಜಮುಖನಿಗೆ ನೂರಾರು ಹೆಸರುಗಳು ಇರುವಂತೆಯೆ ಹಲವು ರೂಪಗಳು ಇದ್ದಾವೆ. ವಿಶ್ವಾದ್ಯಂತ ಸಾವಿರಾರು ಸ್ವರೂಪದಲ್ಲಿ ವಕ್ರತುಂಡನನ್ನು (VAKRATUNDA) ಪೂಜಿಸಲಾಗುತ್ತಿದೆ. ಈಗ ಎಲ್ಲಾ ರೂಪದ ಗಣಪತಿಯನ್ನು (GANAPATHI) ನಮ್ಮೂರಿನಲ್ಲೇ ಕಣ್ತುಂಬಿಕೊಳ್ಳಬಹುದಾಗಿದೆ. ಪ್ರಮುಖ ದೇವಸ್ಥಾನವೊಂದರಲ್ಲಿ ಮೋದಕ ಪ್ರಿಯನ ಮ್ಯೂಸಿಯಂ (MUSEUM) ಸಿದ್ಧಪಡಿಸಲಾಗಿದೆ. ದೇಶದಲ್ಲೇ ಇದು ವಿಭಿನ್ನವಾಗಿ ಪ್ರಯೋಗವಾಗಿದೆ. ಹೊಸನಗರ (HOSANAGARA) ತಾಲೂಕು ಕಾರಣಗಿರಿಯ (KARANAGIRI) ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ (SIDDI VINAYAKA TEMPLE) ಗಣಪತಿಯ ಮ್ಯೂಸಿಯಂ ಸ್ಥಾಪಿಸಲಾಗಿದೆ. ಇಲ್ಲಿ ದೇಶ ವಿದೇಶದಲ್ಲಿರುವ ಸಾವಿರಾರು ರೂಪದ ಗಣಪತಿಯನ್ನು ಒಂದೇ ಸೂರಿನಡಿ … Read more

ಜಮೀನಿನಲ್ಲಿ ಕೆಲಸ ಮಾಡುವಾಗ ವಿದ್ಯುತ್ ಶಾಕ್, ರೈತ ಸಾವು

Hosanagara taluk name Graphics

ರಿಪ್ಪನ್ ಪೇಟೆ | ಜಮೀನಿನಲ್ಲಿ ವಿದ್ಯುತ್ ಅವಘಡ (ELECTRIC SHOCK) ಸಂಭವಿಸಿ ರೈತರೊಬ್ಬರು (FARMER DEATH) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳ್ಳೂರು (BELLUR) ಗ್ರಾಮದ ರೈತ ಹಿರಿಯಣ್ಣ (58) ಎಂಬುವವರು ಮೃತರು. ಭಾನುವಾರ ಹಿರಿಯಣ್ಣ ಅವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿರಿಯಣ್ಣ ಅವರು ತಳಲೆ (TALALE) ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿದ್ದಾರೆ. ಅವರ ಪತ್ನಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿದ್ದು, ಪ್ರಸ್ತುತ ಸದಸ್ಯರಾಗಿದ್ದಾರೆ. ಇವರಿಗೆ ಮೂವರು ಪುತ್ರಿಯರಿದ್ದಾರೆ. ಇದನ್ನೂ … Read more

ನಡು ರಸ್ತೆಯಲ್ಲೆ ಅಡಕೆ, ಭತ್ತ, ಬಾಳೆ ಗಿಡ ನೆಟ್ಟು ಗ್ರಾಮಸ್ಥರ ಆಕ್ರೋಶ

260822 Varamballi Villagers plant saplings on road

ಹೊಸನಗರ | ಕೆಸರು ಗದ್ದೆಯಂತೆ ಆಗಿದ್ದ ಗ್ರಾಮದ ಮುಖ್ಯರಸ್ತೆಯಲ್ಲಿ (MAIN ROAD) ಸಸಿ ನೆಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗೃಹ ಸಚಿವ (HOME MINISTER) ಆರಗ ಜ್ಞಾನೇಂದ್ರ ಅವರ ವಿರುದ್ಧ ಘೋಷಣೆ (PROTEST) ಕೂಗಿದರು. ಹೊಸನಗರ (HOSANAGARA) ತಾಲೂಲು ವಾರಂಬಳ್ಳಿ (VARAMBALLI) ನಿವಣೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹಾಳಾಗಿದೆ. ಕೆಸರು ಗದ್ದೆಯಂತೆ ಆಗಿರುವ ರಸ್ತೆಯಲ್ಲಿ ಗ್ರಾಮಸ್ಥರು ಅಡಕೆ, ಬಾಳೆ ಮತ್ತು ಭತ್ತದ ಸಸಿ ನೆಟ್ಟು ಪ್ರತಿಭಟನೆ ನಡೆಸಿದರು. ಜನಪ್ರತಿನಿಧಿಗಳಿಗೆ ಹಲವು ಭಾರಿ ಮನವಿ ಮಾಡಿದರೂ … Read more

ಹೊಸನಗರದಲ್ಲಿ ಮಳೆ ಜೊತೆ ಗಾಳಿ ಅಬ್ಬರ, ಮಾಸ್ತಿಕಟ್ಟೆಯಲ್ಲಿ ಹೆಚ್ಚು ವರ್ಷಧಾರೆ

Rain-at-Hosanagara

ಹೊಸನಗರ | ತಾಲೂಕಿನಲ್ಲಿ ಭಾರಿ ಮಳೆ ಜೊತೆಗೆ ಗಾಳಿಯು ಅಬ್ಬರಿಸುತ್ತಿದೆ. ಇದು ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಕಳೆದ 24 ಗಂಟೆ ಅವಧಿಯಲ್ಲಿ ಮಾಸ್ತಿಕಟ್ಟೆ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ. ಹೊಸನಗರ ತಾಲೂಕಿನ ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 71 ಮಿ.ಮೀ ಮಳೆಯಾಗಿದೆ. ಯಡೂರಿನಲ್ಲಿ 82 ಮಿ.ಮೀ, ಹುಲಿಕಲ್’ನಲ್ಲಿ 99 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 111 ಮಿ.ಮೀ, ಚಕ್ರಾ ವ್ಯಾಪ್ತಿಯಲ್ಲಿ 51 ಮಿ.ಮೀ, ಸಾವೇಹಕ್ಲು ಭಾಗದಲ್ಲಿ 42 ಮಿ.ಮೀ ಮಳೆಯಾಗಿದೆ. ಜೋರು ಮಳೆಯಿಂದಾಗಿ ಹೊಸನಗರ ತಾಲೂಕಿನ ಜಲಾಶಯಗಳಿಗೆ ಒಳ ಹರಿವು ಹೆಚ್ಚಳವಾಗಿದೆ. … Read more

ಕಳೆದ 24 ಗಂಟೆಯಲ್ಲಿ ಹೊಸನಗರದ ಗ್ರಾಮವೊಂದರಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ

rain in shimoga

ಹೊಸನಗರ | ತಾಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಮೇಲಿನಬೆಸಿಗೆ (MELINABESIGE) ಗ್ರಾಮದಲ್ಲಿ ರಾಜ್ಯದಲ್ಲೆ ಅತಿ ಹೆಚ್ಚು (HIGHEST RAIN) ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸನಗರ ತಾಲೂಕು ಮೇಲಿನಬೆಸಿಗೆ ಗ್ರಾಮದಲ್ಲಿ 220 ಮಿ.ಮೀ ಮಳೆಯಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾದ ಗ್ರಾಮ ಇದಾಗಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಚಿಕ್ಕಮಗಳೂರಿನ ಬಣಕಲ್’ನಲ್ಲಿ 184 ಮಿ.ಮೀ, ಉಡುಪಿಯ ಕಲ್ತೋಡು 183.50 ಮಿ.ಮೀ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾದ ಟಾಪ್ … Read more