ದಾವಣಗೆರೆಯಿಂದ ಒಂದೇ ಬೈಕಿನಲ್ಲಿ ಭದ್ರಾವತಿಗೆ ಬಂದಿದ್ದ ಆರು ಜನಕ್ಕೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಪರೀಕ್ಷೆ

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI | 2 ಮೇ 2020 ಪಕ್ಕದ ಜಿಲ್ಲೆ ದಾವಣಗೆರೆಯಿಂದ ಭದ್ರಾವತಿಯ ಸಂಬಂಧಿಕರ ಮನೆಗೆ ಒಂದೇ ಬೈಕಿನಲ್ಲಿ ಬಂದಿದ್ದ ಆರು ಜನರನ್ನು ಹೆಚ್ಚಿನ ತಪಾಸಣೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕಳುಹಿಸಲಾಗಿದೆ. ದಾವಣಗೆರೆಯಲ್ಲಿ ಕರೋನ ಪಾಸಿಟಿವ್ ಪ್ರಕರಣ ಹೆಚ್ಚಾದ ಹಿನ್ನೆಲೆ ಪತ್ನಿ, ನಾಲ್ಕು ಮಕ್ಕಳ ಜೊತೆಗೆ ವ್ಯಕ್ತಿಯೊಬ್ಬ ಭದ್ರಾವತಿಯ ಸಂಬಂಧಿಕರ ಮನೆಗೆ ಬಂದಿದ್ದರು. ವಿಚಾರ ತಿಳಿಯುತ್ತಿದ್ದಂತೆ ಮನೆಗೆ ಭೇಟಿ ನೀಡಿದ ಅಧಿಕಾರಿಗಳು ಅರೋಗ್ಯ ತಪಾಸಣೆ ನಡೆಸಿದರು. ಹೆಚ್ಚಿನ ತಪಾಸಣೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಯಿತು. ಇನ್ನು, … Read more

ಭದ್ರಾವತಿ ಸಿಟಿ, ಹಲವು ಗ್ರಾಮಗಳಲ್ಲಿ ಮೇ 2ರಂದು ಬೆಳಗ್ಗೆಯಿಂದ ಸಂಜೆತನಕ ಕರೆಂಟ್ ಇರಲ್ಲ

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI | 1 ಮೇ 2020 ಭದ್ರಾವತಿ ತಾಲೂಕಿನ ವಿವಿಧೆಡೆ ಮೇ 2ರಂದು ವಿದ್ಯುತ್‌ ವ್ಯತ್ಯಯವಾಗಲಿದೆ. ಭದ್ರಾವತಿ ಸಿಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕರೆಂಟ್‌ ಇರಲ್ಲ ಅಂತಾ ಮೆಸ್ಕಾಂ ಭದ್ರಾವತಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. MRS ಉಪಕೇಂದ್ರದಿಂದ ವಿದ್ಯುತ್‌ ಸರಬರಾಜು ಬದಲಿಸಿ ಕಡೂರು – ಶಿವಮೊಗ್ಗ 110 ಕೆವಿ ಮಾರ್ಗಕ್ಕೆ ಬದಲಿಸುವ ಹಿನ್ನೆಲೆ ವಿದ್ಯುತ್‌ ವ್ಯತ್ಯಯವಾಗಲಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್‌ ವ್ಯತ್ಯೆಯ ಸಾದ್ಯತೆ ಇದೆ. … Read more

ಸಾಗರದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ನಿಂದಿಸಿದ ಯುವಕನ ವಿರುದ್ಧ ಕೇಸ್

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 1 ಮೇ 2020 ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆ ಯುವಕನೊಬ್ಬನ ವಿರುದ್ಧ ಸಾಗರದಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಇಲ್ಲಿನ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ವೈದ್ಯರನ್ನು ನಿಂದಿಸಿದ್ಯಾರು? ಘಟನೆಗೇನು ಕಾರಣ? ಸಾಗರ ಪಟ್ಟಣದ ಸಮೀರ್‌ ಎಂಬಾತ ತನ್ನ ಸಹೋದರನನ್ನು ಆಸ್ಪತ್ರೆಗೆ ಕರೆತಂದಿದ್ದ. ಸಹೋದರನ ಕಾಲಿಗೆ ಗಾಯವಾಗಿದ್ದು, ತುರ್ತು ಚಿಕಿತ್ಸೆ ನೀಡಬೇಕು ಎಂದು ಸಮೀರ್‌ ವೈದ್ಯರನ್ನು ಒತ್ತಾಯಿಸಿದ. ಈ ವೇಳೆ ಕೀಲು ಮತ್ತು … Read more

ಕೆಲಸಕ್ಕೆ ಅಂತಾ ಶಿಕಾರಿಪುರದಿಂದ ಹೋಗಿದ್ದವ್ರು ಲಾಕ್‌ಡೌನ್‌ನಲ್ಲಿ ಲಾಕ್, ಜೀವನ ನಡೆಸೋಕೆ ಕಷ್ಟ ಕಷ್ಟ ಅಂದಾಗ ನೆರವಾದರು ಸಿಎಂ

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIKARIPURA | 1 ಮೇ 2020 ಲಾಕ್‌ಡೌನ್‌ ಪರಿಣಾಮ ಒಂದು ತಿಂಗಳಿಂದ ದಕ್ಷಿಣ ಕನ್ನಡದಲ್ಲಿ ಸಿಲುಕಿದ್ದ ಕುಟುಂಬವೊಂದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರವಾಗಿದ್ದಾರೆ. ಜೀವನ ನಡೆಸುವುದಕ್ಕೆ ಕಷ್ಟಪಡುತ್ತಿದ್ದ ಕುಟುಂಬವನ್ನು, ತವರೂರಿಗೆ ತಲುಪಿಸಿದ್ದಾರೆ ಸಿಎಂ. ಶಿಕಾರಿಪುರದ ಓರ್ವ ಗರ್ಭಿಣಿ ಮತ್ತು ಆಕೆಯ ಕುಟುಂಬದವರು ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಗ್ರಾಮದಲ್ಲಿ ಸಿಕ್ಕಿಬಿದ್ದಿದ್ದರು. ಒಂದು ತಿಂಗಳಿಂದ ಈ ಕುಟುಂಬ ಇಲ್ಲಿನ ಶಾಲೆಯಲ್ಲಿ ಉಳಿದುಕೊಂಡಿತ್ತು. ಆದರೆ ಜೀವನ ನಿರ್ವಹಣೆ ಕಷ್ಟಕರವಾದ ಹಿನ್ನೆಲೆ, ತಮ್ಮೂರಿಗೆ ತೆರಳಲು ಅವಕಾಶ ನೀಡೇಕು. ಇಲ್ಲವಾದರೆ … Read more

ಸಾಗರದ ಹುಡುಗರಿಂದ ಕರೋನ ಸಾಂಗ್, ಹೇಗಿದೆ ಗೊತ್ತಾ ಹಾಡು?

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 1 ಮೇ 2020 ಕರೋನ ಲಾಕ್‌ಡೌನ್‌ ಇದ್ದರೂ ಅನಗತ್ಯವಾಗಿ ಬೀದಿ, ಬೀದಿ ಸುತ್ತುವವರಿಗೆ ಎಚ್ಚರಿಕೆ ನೀಡಲು, ಸಾಗರದ ಯುವಕರ ತಂಡವೊಂದು ಸಾಂಗ್‌ ಸಿದ್ದಪಡಿಸಿದೆ. ಸಾಗರದ ಸಂಕಲ್ಪ ಕ್ರಿಯೇಷನ್ಸ್‌ ಈ ಹಾಡು ರೆಡಿ ಮಾಡಿದೆ. ಹಾಡಿನಲ್ಲಿ ಕರೋನ ಭೀತಿ, ಲಾಕ್‌ಡೌನ್‌ ಉದ್ದೇಶದ ಜೊತೆಗೆ ಪೊಲೀಸರ ಲಾಠಿ ಏಟಿನ ರುಚಿ ನೋಡಿದವರ ಕಥೆ ವ್ಯಥೆ ತೋರಿಸಿದ್ದಾರೆ. ಮಂಡ್ಯ ಶೈಲಿಯ ಭಾಷೆಯಲ್ಲೇ ಸಾಂಗ್‌ ಸಿದ್ಧಪಡಿಸಲಾಗಿದೆ. ಹಾಡು ಹೇಗಿದೆ? ಇಲ್ಲಿದೆ ವಿಡಿಯೋ.. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ … Read more

ಉಸಿರಾಟದ ಸಮಸ್ಯೆಯಿಂದ ಒಂದು ವರ್ಷದ ಹೆಣ್ಣು ಮಗು ಸಾವು, ಗಂಟಲು ದ್ರವ ಮಾದರಿ ಮೆಗ್ಗಾನ್‌ಗೆ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 1 ಮೇ 2020 ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಒಂದು ವರ್ಷದ ಹೆಣ್ಣು ಮಗುವೊಂದು ಮೃತಪಟ್ಟಿದೆ. ಸಾಗರ ತಾಲೂಕು ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಗುವನ್ನು ಪೋಷಕರು ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಪರೀಕ್ಷೆ ನಡೆಸಿದ ವೈದ್ಯರು ಮಗು ಮೃತಪಟ್ಟಿರುವುದನ್ನು ಖಚಿತಪಡಿಸಿದರು. ಮೂರು ದಿನದಿಂದ ಮಗುವಿಗೆ ಆರೋಗ್ಯ ಸರಿ ಇರಲಿಲ್ಲ ಎಂದು ತಿಳಿದು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಮಗುವಿನ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ, … Read more

ಆಯನೂರು ಬಳಿ ಉರುಳಿ ಬಿತ್ತು ನಿರ್ಮಾಣ ಹಂತದ ವಿದ್ಯುತ್ ಟವರ್, ಕಾರ್ಮಿಕರಿಗೆ ಗಾಯ, ಸ್ಥಳದಲ್ಲಿ ಕೆಲಕಾಲ ಆತಂಕ

290420 Tower Falls in Ayanur Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 29 ಏಪ್ರಿಲ್ 2020 ನಿರ್ಮಾಣ ಹಂತದ ವಿದ್ಯತ್‌ ಟವರ್‌ ದಿಢೀರ್‌ ಉರುಳಿದ ಬಿದ್ದಿದ್ದು, ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಯನೂರು ಸಮೀಪದ ಹೊಸನಗರ ರಸ್ತೆ ಬಳಿ 220 ಕೆ.ವಿ. ಟವರ್‌ ಲೈನ್‌ ಕಾಮಗಾರಿ ನಡೆಯುತ್ತಿದೆ. ಬೆಂಗಳೂರಿನ ಖಾಸಗಿ ಕಂಪನಿಯೊಂದು ಟವರ್‌ ನಿರ್ಮಾಣ ಮಾಡುತ್ತಿದೆ. ಪಶ್ಚಿಮ  ಬಂಗಾಳ ಮೂಲದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ‌ ದೊಡ್ಡ ಅನಾಹುತ ತಪ್ಪಿಸಿದ ಊಟ ಬೆಳಗ್ಗೆಯಿಂದಲೇ ಟವರ್‌ … Read more

ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ, ಚಾಲಕನ ಕಾಲು ಕಟ್, ಲಾರಿಗಳು ಜಖಂ

270420 Shikaripura Road Accident 1

ಶಿವಮೊಗ್ಗ ಲೈವ್.ಕಾಂ | SHIKARIPURA | 27 ಏಪ್ರಿಲ್ 2020 ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಚಾಲಕನೊಬ್ಬನ ಕಾಲು ಕಟ್‌ ಆಗಿದೆ. ಶಿಕಾರಿಪುರ ತಾಲೂಕು ಬಳ್ಳಿಗಾವಿ ಕ್ರಾಸ್‌ ಬಳಿ ಇವತ್ತು ಬೆಳಗ್ಗೆ ಘಟನೆ ಸಂಭವಿಸಿದೆ. ಶಿವಮೊಗ್ಗ ಮತ್ತು ತಡಸ ರಾಜ್ಯ ಹೆದ್ದಾರಿಯಲ್ಲಿ ಅಪಘಾತವಾಗಿದೆ. ಗೂಡ್ಸ್‌ ಲಾರಿ ಚಾಲಕ ಮಂಜುನಾಥ್‌ ಅವರ ಕಾಲು ಕಟ್‌ ಆಗಿದೆ ಎಂದು ತಿಳಿದು ಬಂದಿದೆ. ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೋರ್‌ವೆಲ್‌ ಲಾರಿ ಶಿಕಾರಿಪುರದ ಕಡೆಗೆ ಹೋಗುತಿತ್ತು. ಗೂಡ್ಸ್‌ … Read more

ಬಾರ್ ಕಳ್ಳತನ ಮಾಡಿದ್ದ ನಾಲ್ಕು ಮಂದಿ ಭದ್ರಾವತಿಯಲ್ಲಿ ಅರೆಸ್ಟ್

250420 Paper Town Police Arrest Four in Bar Theft cAse 1

ಶಿವಮೊಗ್ಗ ಲೈವ್.ಕಾಂ | BHADRAVATHI | 25 ಏಪ್ರಿಲ್ 2020 ಬಾರ್‍ನಲ್ಲಿ ಮದ್ಯ ಕಳ್ಳತನ ಮಾಡಿದ್ದ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ 20 ಸಾವಿರ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಭದ್ರಾವತಿ ತಾಲೂಕು ಡಿ.ಜಿ.ಹಳ್ಳಿ ತಾಂಡದ ಸೋಮಶೇಖರ್ ಅಲಿಯಾಸ್ ಪಂದಿ (29), ಮಣಿಕಂದನ್ ಅಲಿಯಾಸ್ ಮಣಿಕಂಠ (27), ಆನಂದ ಅಲಿಯಾಸ್ ಹೊಟ್ಟೆ (28), ರಾಜಾನಾಯ್ಕ ಅಲಿಯಾಸ್‌ ಗುಂಡ (19) ಎಂಬುವವರನ್ನು ಬಂಧಿಸಲಾಗಿದೆ. ಏಪ್ರಿಲ್‌ 16ರಂದು ರಾತ್ರಿ ಬಾರಂದೂರು ಗ್ರಾಮದ ವೈನ್‌ ಶಾಪ್‌ ಒಂದರಲ್ಲಿ ಕಳ್ಳತನ … Read more

ಸಾಗರದ ಮೆಡಿಕಲ್ ಶಾಪ್‌ಗಳ ಮೇಲೆ ದಿಢೀರ್ ದಾಳಿ, ದಂಡ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 24 ಏಪ್ರಿಲ್ 2020 ಹೆಚ್ಚಿನ ಬೆಲೆಗೆ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ಮೆಡಿಕಲ್‌ ಶಾಪ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಐದು ಸಾವಿರ ರೂಪಾಯಿ ದಂಡವನ್ನು ವಿಧಿಸಿದ್ದಾರೆ. ಸಾಗರ ಪಟ್ಟಣದ ವಿವಿಧೆಡೆ ಆರೋಪದ ಹಿನ್ನೆಲೆ ದಾಳಿ ನಡೆಸಲಾಗಿದೆ. ಐದು ಅಂಗಡಿಗಳ ಮೇಲೆ ರೇಡ್‌ ಮಾಡಿ, ಸ್ಯಾಂಪಲ್‌ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇಲಾಖೆಯ ಸಹಾಯಕ ನಿಯಂತ್ರಕ ಹೆಚ್.ಎಸ್.ರಾಜು, ನಿರೀಕ್ಷಕ ಹೆಚ್.ಎಸ್.ವಸಂತಕುಮಾರ್‌, ಧನಲಕ್ಷ್ಮಿ, … Read more