ಸಾಲ ಕೊಟ್ಟ ಫೈನಾನ್ಸ್ ಸಂಸ್ಥೆಗಳಿಂದ ಮಾನಸಿಕ ಹಿಂಸೆ, ಸಾಗರದಲ್ಲಿ ತಿರುಗಿಬಿದ್ದ ಜನ

ಶಿವಮೊಗ್ಗ ಲೈವ್.ಕಾಂ | SAGARA | 7 ನವೆಂಬರ್ 2019 ವಿವಿಧ ಖಾಸಗಿ ಫೈನಾನ್ಸ್ ಸಂಸ್ಥೆಗಳು ನೀಡುತ್ತಿರುವ ಕಿರುಕುಳದ ವಿರುದ್ಧ ಕಾನೂನು ಕ್ರಮಜರುಗಿಸುವಂತೆ ಒತ್ತಾಯಿಸಿ ಸಾಗರದಲ್ಲಿ ನೊಂದ ಗ್ರಾಹಕರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. ಸಾಗರ ನಗರ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಸಾಲ ನೀಡುತ್ತಿರುವ ಖಾಸಗಿ ಫೈನಾನ್ಸ್’ಗಳು ಸಾಲ ಪಡೆಯುವ ನೆಪದಲ್ಲಿ ಗ್ರಾಹಕರಿಗೆ ಕಿರುಕುಳ ನೀಡುತ್ತಿವೆ. ಸಾಲ ವಸೂಲಿ ನೆಪದಲ್ಲಿ ಮನೆಗೆಬರುವ ಫೈನಾನ್ಸ್ ಕಂಪನಿಯವರು ಬಾಯಿಗೆ ಬಂದಂತೆ ಮಾತನಾಡುವ ಜತೆಗೆ ಹಣ ಕೊಡದೆ ಮನೆಯಿಂದ ಹೋಗುವುದಿಲ್ಲ. ಹಣ ಕಟ್ಟುವುದು ವಿಳಂಬವಾದರೆ … Read more

ನಡು ಬೀದಿಯಲ್ಲೆ ವ್ಯಾಪಾರಿಯ ಕತ್ತು ಸೀಳಿ ಕೊಲೆ, ಕ್ಷುಲಕ ಕಾರಣಕ್ಕೆ ಹರಿಯಿತು ನೆತ್ತರು

murder graphical image

ಶಿವಮೊಗ್ಗ ಲೈವ್.ಕಾಂ | SHIRALAKOPPA | 7 ನವೆಂಬರ್ 2019 ಶಿರಾಳಕೊಪ್ಪದ ಆನವಟ್ಟಿ ರಸ್ತೆಯಲ್ಲಿ ಕಬ್ಬಿನ ಹಾಲು ವ್ಯಾಪಾರಿಗೆ ಹಾಡಹಗಲೇ ಚಾಕುವಿನಿಂದ ಇರಿದು, ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ಸೈಯದ್ ಜಾಫರ್ ಮುನ್ನಾ (26) ಹತ್ಯೆಗೀಡಾದ ಯುವಕ. ಬುಧವಾರ ಸಂಜೆ ಘಟನೆ ನಡೆದಿದೆ. ಈತನ ಕಬ್ಬಿನ ಹಾಲಿನ ಅಂಗಡಿ ಪಕ್ಕದಲ್ಲಿ ಕುಷನ್ ಅಂಗಡಿ ನಡೆಸುತ್ತಿರುವ ಜಾವೇದ್‌ ಬೇಗ್ (19) ಎಂಬಾತ ಈ ಕೃತ್ಯ ಎಸಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ನಡೆದು ಅದು ವಿಕೋಪಕ್ಕೆ ತಿರುಗಿ … Read more

ಐದು ಕ್ವಿಂಟಾಲ್ ಅಡಕೆ ಕದ್ದ ಐವರು ಕಳ್ಳರು ಅರೆಸ್ಟ್, ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA | 4 ನವೆಂಬರ್ 2019 ಐದು ಕ್ವಿಂಟಾಲ್ ಅಡಕೆ ಕಳ್ಳತನ ಮಾಡಿದ್ದ ಗ್ಯಾಂಗ್ ಒಂದನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾತ್ರಿ ಗಸ್ತು ತಿರುಗುವಾಗ ಅನುಮಾನಾಸ್ಪದವಾಗಿ ವರ್ತಿಸಿದವರನ್ನು ಹಿಡಿದು, ವಿಚಾರಣೆ ನಡೆಸಿದಾಗ, ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ. ಶಿಕಾರಿಪುರದ ಚುರ್ಚುಗುಂಡಿ ಬಳಿ ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನ ಕಂಡು ಬೊಲೆರೋ ವಾಹನ ಮತ್ತು ಬೈಕ್’ನಲ್ಲಿ ಪರಾರಿಯಾಗಲು ಯತ್ನಿಸಿದ ಮೂವರನ್ನು ತಡೆದು ನಿಲ್ಲಿಸಲಾಗಿದೆ. ಇವರ ವಿಚಾರಣೆ ನಡೆಸಿದಾಗ ಹಲವು ಕಡೆ ಅಡಕೆ ಕಳ್ಳತನ ಮಾಡಿರುವುದು … Read more

ಸಾಗರದ ವಿವಿಧೆಡೆ ರೈಲ್ವೆ ಮಾರ್ಗ ಪರಿಶೀಲನೆ, ನ.6ರವರೆಗೆ ರಸ್ತೆ ಸಂಚಾರ ಬದಲು, ಪರ್ಯಾಯ ಮಾರ್ಗಗಳು ಯಾವುದು ಗೊತ್ತಾ?

Sagara Train General Image

ಶಿವಮೊಗ್ಗ ಲೈವ್.ಕಾಂ | SAGARA | 31 ಅಕ್ಟೋಬರ್ 2019 ಸಾಗರ ತಾಲೂಕಿನ ವಿವಿಧೆಡೆ ಹಾದು ಹೋಗಿರುವ ರೈಲ್ವೆ ಮಾರ್ಗದಲ್ಲಿ ತಾಂತ್ರಿಕ ಪರಿಶೀಲನೆ ಕಾರ್ಯ ನಡೆಯಲಿದೆ. ವಿವಿಧ ಲೆವೆಲ್ ಕ್ರಾಸ್’ಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿನ್ನೆಯಲ್ಲಿ ನ.6ರವರೆಗೆ ವಿವಿಧೆಡೆ ರಸ್ತೆ ಸಂಚಾರಕ್ಕೆ ತೊಡಕಾಗಲಿದೆ. ಹಾಗಾಗಿ ಪರ್ಯಾ ಮಾರ್ಗದಲ್ಲಿ ವಾಹನ ಸಂಚರಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಎಲ್ಲೆಲ್ಲಿ? ಯಾವಾಗ ಪರಿಶೀಲನೆ ನಡೆಯುತ್ತೆ? ನ.1ರ ಬೆ.8 ರಿಂದ ಸಂಜೆ 6.30 :  ಬಾಳೆಗುಂಡಿ ರಸ್ತೆಯಲ್ಲಿ ಹಾದು ಹೋಗಿರುವ ಲೆವೆಲ್ ಕ್ರಾಸ್ … Read more

ಸಾಗರ ಮಾರಿಕಾಂಬ ಜಾತ್ರೆಗೆ ಸಿದ್ಧತೆ ಶುರು, ಸರ್ಕಾರದಿಂದ 6.80 ಕೋಟಿ ರಿಲೀಸ್

ಶಿವಮೊಗ್ಗ ಲೈವ್.ಕಾಂ | SAGARA | 31 ಅಕ್ಟೋಬರ್ 2019 ಮುಂದಿನ ವರ್ಷ ಫೆಬ್ರವರಿಯಲ್ಲಿ ರಾಜ್ಯದ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾಗಿರುವ ಶ್ರೀ ಮಾರಿಕಾಂಬಾ ಜಾತ್ರೆ ಅಂಗವಾಗಿ ರಾಜ್ಯ ಸರ್ಕಾರ ಶಾಸಕರ ನಿಧಿಗೆ 6.80 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಅನುದಾನವನ್ನು ನಗರವ್ಯಾಪ್ತಿಯಲ್ಲಿ ರಸ್ತೆ ಸೇರಿದಂತೆ ವಿವಿಧ ಅಗತ್ಯ ಕಾಮಗಾರಿಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಶಾಸಕ ಹೆಚ್.ಹಾಲಪ್ಪ ಹೇಳಿದರು. ನಗರದ ವಿವಿಧ ಭಾಗಗಳಲ್ಲಿ ರಸ್ತೆ ನಿರ್ಮಾಣ, ಗಣಪತಿ ಕೆರೆ ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಸಂಬಂಧ ಸ್ಥಳ … Read more

ತೀರ್ಥಹಳ್ಳಿ ಯುವಕರ ವಿಭಿನ್ನ ಪ್ರಯೋಗಕ್ಕೆ ಭರ್ಜರಿ ರೆಸ್ಪಾನ್ಸ್, ಜನರ ಕಣ್ತೆರೆಸುತ್ತಿದೆ ಡಿಫರೆಂಟ್ ಅಂಟಿಗೆ ಪಂಟಿಗೆ

311019 Different Antige Pantige in Thirthahalli 1

ಶಿವಮೊಗ್ಗ ಲೈವ್.ಕಾಂ | SHIMOGA | 31 ಅಕ್ಟೋಬರ್ 2019 ಮಲೆನಾಡು ಭಾಗದ ಸರ್ಕಾರಿ ಶಾಲೆ ಉಳಿವಿಗೆ ಯುವಕರ ವಿಭಿನ್ನ ಪ್ರಯತ್ನ. ಅಂಟಿಗೆ ಪಂಟಿಗೆ ಮೂಲಕ ಜನರಲ್ಲಿ ಜಾಗೃತಿ. ಮನೆ ಮನೆಗು ತೆರಳಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಮನವಿ. ಮಲೆನಾಡಿಗರ ಪ್ರಮುಖ ಆಚರಣೆಗಳಲ್ಲಿ ಒಂದು ಅಂಟಿಗೆ ಪಂಟಿಗೆ. ದೀಪಾವಳಿ ಸಂದರ್ಭ ಮನೆ ಮನೆಗು ತೆರಳಿ ದೀಪ ಬೆಳಗಿಸಲಾಗುತ್ತದೆ. ಇದೆ ಅಂಟಿಗೆ ಪಂಟಿಗೆಯನ್ನು ಸರ್ಕಾರಿ ಶಾಲೆ ಉಳಿವಿನ ಜಾಗೃತಿ ಯಾತ್ರೆಯಾಗಿ ಪರಿವರ್ತಿಸಿಕೊಂಡಿದೆ ತೀರ್ಥಹಳ್ಳಿಯ ಯುವಕರ ತಂಡ. ಎರಡು … Read more

ಹೊಳೆಹೊನ್ನೂರು ಬಳಿ ಕುಸಿದ ಮನೆಯ ಗೋಡೆ, ಸ್ಥಳದಲ್ಲೇ ವ್ಯಕ್ತಿ ಸಾವು

ಶಿವಮೊಗ್ಗ ಲೈವ್.ಕಾಂ | HOLEHONNURU | 26 ಅಕ್ಟೋಬರ್ 2019 ಮನೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಅರಬಿಳಚಿ ಗ್ರಾಮದಲ್ಲಿ ಘಟನೆ ನಡೆದಿದೆ. ಲಕ್ಷ್ಮಣ (70) ಮೃತ ವ್ಯಕ್ತಿ. ಮಲಗಿದ್ದ ವೇಳೆ ಲಕ್ಷ್ಮಣ ಅವರ ಮೇಲೆಯೆ ಗೋಡೆ ಕುಸಿದಿದೆ. ಇದರಿಂದ ಲಕ್ಷ್ಮಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂರು ದಿನದಿಂದ ನಿರಂತರ ಮಳೆಯಾಗಿದ್ದರಿಂದ ಗೋಡೆ ಒದ್ದೆಯಾಗಿ, ಕುಸಿದಿದೆ ಎಂದು ಹೇಳಲಾಗುತ್ತಿದೆ. ವಿಚಾರ ತಿಳಿಯುತ್ತಿದ್ದಂತ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ, ಭದ್ರಾವತಿ ತಹಶೀಲ್ದಾರ್ ಸ್ಥಳಕ್ಕೆ … Read more

ಕಲ್ಲು ಗಣಿಗಾರಿಕೆಗೆ ಭಾರೀ ವಿರೋಧ, ಗಣಿ ಪ್ರದೇಶಕ್ಕೆ ಸಾಗರ ಎಸಿ ನೇತೃತ್ವದ ಟೀಂ ಭೇಟಿ

ಶಿವಮೊಗ್ಗ ಲೈವ್.ಕಾಂ | RIPPONPETE | 26 ಅಕ್ಟೋಬರ್ 2019 ಹುಂಚಾ ಸರ್ವೇ ನಂ. 69ರಲ್ಲಿ ನಡೆಸಲು ಉದ್ದೇಶಿಸಿರುವ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಸಾಗರ ಉಪವಿಭಾಗಾಧಿಕರಿ ಡಾ.ಎಲ್.ನಾಗರಾಜ್ ಅವರು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಾಗರ ಅರಣ್ಯ ಇಲಾಖೆ ಅಧಿಕಾರಿಗಳು, ಹೊಸನಗರ ತಹಸೀಲ್ದಾರ್‌ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಗಣಿಗಾರಿಕೆ ನಡೆಸದಂತೆ ಒತ್ತಾಯಿಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿ ಜಿಲ್ಲಾಧಿಕಾರಿಗೆ ಸೂಕ್ತ ವರದಿ ನೀಡುವಂತೆ ಒತ್ತಾಯಿಸಿದರು. ಗಣಿಗಾರಿಕೆ ವಿರೋಧಿಸಿ ಕಳೆದ … Read more

ಸುರಿವ ಮಳೆಯಲ್ಲೂ ಆಗುಂಬೆಯಿಂದ 15 ಕಿ.ಮೀ ಪಾದಯಾತ್ರೆ ಮಾಡಿದ ಮಾಜಿ ಮಿನಿಸ್ಟರ್

ಶಿವಮೊಗ್ಗ ಲೈವ್.ಕಾಂ | SHIMOGA | 25 ಅಕ್ಟೋಬರ್ 2019 ನೆರೆ ಪರಿಹಾರ ವಿತರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಳಂಬ ಧೋರಣೆ, ತೀರ್ಥಹಳ್ಳಿ ಶಾಸಕರ ವೈಫಲ್ಯ ಖಂಡಿಸಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪಾದಯಾತ್ರೆ ನಡೆಸಿದರು. ಸುರಿವ ಮಳೆಯಲ್ಲು ಸುಮಾರು 15 ಕಿ.ಮೀ. ಪಾದಯಾತ್ರೆ ನಡೆಯಿತು. ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಆಗುಂಬೆಯ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಯಿತು. ಮಾಜಿ ಶಾಸಕ ಕಡಿದಾಳ್ ದಿವಾಕರ್ ಅವರು ಪಾದಯಾತ್ರೆಗೆ ಚಾಲನೆ ನೀಡಿದರು. ಮೇಗರವಳ್ಳಿವರೆಗೆ … Read more

ಸಾಗರ ತಾಲೂಕಿನ ಎಲ್ಲ ಶಾಲೆಗಳಿಗೆ ನಾಳೆ ರಜೆ, ನಿರಂತರ ಸುರಿಯುತ್ತಿದೆ ಮಳೆ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 25 ಅಕ್ಟೋಬರ್ 2019 ಹೊಸನಗರ ಮತ್ತು ಸಾಗರ ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಗರ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸಾಗರದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅಕ್ಟೋಬರ್ 26ರಂದು ರಜೆ ಘೋಷಣೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200 ಸುದ್ದಿಗಾಗಿ ಕರೆ ಮಾಡಿ – 9964634494 ಈ ಮೇಲ್ ಐಡಿ | shivamoggalive@gmail.com