ಶಿವಮೊಗ್ಗ – ತಾಳಗುಪ್ಪ ರೈಲ್ವೆ ಮಾರ್ಗ ಕೊಂಕಣ ರೈಲ್ವೆಗೆ ವಿಸ್ತರಣೆ, ಸಂಸದ ರಾಘವೇಂದ್ರ ಮಹತ್ವದ ಹೇಳಿಕೆ

BY-Raghavendra-and-Dr-Dhananjaya-Sarji-in-sagara.

SHIVAMOGGA LIVE NEWS | 13 JUNE 2024 SAGARA : ಶಿವಮೊಗ್ಗ – ತಾಳಗುಪ್ಪ ರೈಲ್ವೆ ಮಾರ್ಗವನ್ನು ಹೊನ್ನಾವರದವರೆಗೆ ವಿಸ್ತರಿಸಿ ಕೊಂಕಣ (Konkan) ರೈಲ್ವೆ ಮಾರ್ಗದ ವ್ಯಾಪ್ತಿಗೆ ಸೇರಿಸುವ ಯೋಜನೆಗೆ ಮರು ಚಾಲನೆ ನೀಡಲಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ ತಿಳಿಸಿದರು. ಸಾಗರದ ರಾಘವೇಶ್ವರ ಸಭಾ ಭವನದಲ್ಲಿ ಬಿಜೆಪಿ ತಾಲ್ಲೂಕು ಘಟಕದಿಂದ ಏರ್ಪಡಿಸಿದ್ದ ಮತದಾರರಿಗೆ, ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಿಸುವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಶಿವಮೊಗ್ಗ – ತಾಳಗುಪ್ಪ ರೈಲ್ವೆ ಮಾರ್ಗವನ್ನು ಹೊನ್ನಾವರದವರೆಗೆ ವಿಸ್ತರಿಸಿ ಕೊಂಕಣ … Read more

ಮಳೆಗಾಲ ಮುಗಿಯುವವರೆಗೆ ಅಧಿಕಾರಿಗಳಿಗೆ ರಜೆ ಇಲ್ಲ, ಮಳೆ ಹಾನಿಯ ಫೋಟೊ ತಕ್ಷಣ ರವಾನೆಗೆ ಸೂಚನೆ

Sagara-Beluru-Gopalakrishna-press-meet

SHIVAMOGGA LIVE NEWS | 12 JUNE 2024 SAGARA : ಮಳೆಗಾಲದಲ್ಲಿ (Rainy) ಸೇತುವೆ, ರಸ್ತೆ, ಮನೆ, ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾದರೆ ತಕ್ಷಣ ಫೋಟೊ ತೆಗೆದು ಕಳುಹಿಸಿ. ಸೂಕ್ತ ಸೌಲಭ್ಯ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಸಾಗರದ ಪ್ರವಾಸಿ ಮಂದಿರದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಮಳೆಗಾಲ ಮುಗಿಯುವ ತನಕ ಸಾಗರ ಮತ್ತು ಹೊಸನಗರ … Read more

ಜೋಗ ಜಲಪಾತಕ್ಕೆ ಜೀವ ಕಳೆ, ಮತ್ತಷ್ಟು ಮಳೆಯಾದರೆ ಮೈದುಂದಬಲಿವೆ ರಾಜ, ರಾಣಿ, ರೋರರ್‌, ರಾಕೆಟ್‌

Jog-Falls-in-2024

SHIVAMOGGA LIVE NEWS | 12 JUNE 2024 RAINFALL NEWS : ಕಳೆದ ಒಂದು ವಾರದಿಂದ ಮಳೆಯಾಗುತ್ತಿರುವುರಿಂದ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ (Jog Falls) ಜೀವ ಕಳೆ ಬಂದಿದೆ. ಆದ್ದರಿಂದ ಜಲಪಾತಕ್ಕೆ ನಿಧಾನಕ್ಕೆ ಪ್ರವಾಸಿಗರು ಬರಲು ಆರಂಭಿಸಿದ್ದಾರೆ. ಜೋಗ ಜಲಪಾತ ಸುತ್ತಮುತ್ತ ಮತ್ತು ಶರಾವತಿ ನದಿ ಭಾಗದಲ್ಲಿ ಕಳೆದ ಒಂದು ವಾರದಿಂದ ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಸಣ್ಣ ಮಟ್ಟಿಗೆ ಮಳೆಯಾಗುತ್ತಿದೆ. ಇದರಿಂದ ಜಲಪಾತಕ್ಕೆ ನೀರು ಹರಿದು ಬರುತ್ತಿದೆ. ಹಾಗಾಗಿ ರಾಜ, ರಾಣಿ, ರೋರರ್‌, ರಾಕೆಟ್‌ ಜಲಪಾತಗಳಲ್ಲಿ … Read more

ಸರ್ಕಾರಿ ಆಸ್ಪತ್ರೆಗೆ ಎಂಎಲ್‌ಎ ದಿಢೀರ್‌ ಭೇಟಿ, ಏನೇನೆಲ್ಲ ಚೆಕ್‌ ಮಾಡಿದರು?

MLA-Beluru-Gopalakrishna-sudden-visti-to-sagara-government-hospital

SHIVAMOGGA LIVE NEWS | 11 JUNE 2024 SAGARA : ಉಪವಿಭಾಗೀಯ ಆಸ್ಪತ್ರೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ದಿಢೀರ್‌ ಭೇಟಿ (Sudden Visit) ನೀಡಿ ಪರಿಶೀಲಿಸಿದರು. ಆಸ್ಪತ್ರೆಯ ವಾರ್ಡ್‌ಗೆ ತೆರಳಿ ರೋಗಿಗಳು, ಅವರ ಸಂಬಂಧಿ ಜೊತೆಗೆ ಮಾತನಾಡಿದರು. ಬಳಿಕ ವೈದ್ಯರು ಮತ್ತು ಸಿಬ್ಬಂದಿ ಹಾಜರಾತಿ ಪರಿಶೀಲಿಸಿದರು. ಈ ಸಂದರ್ಭ ಕೆಲ ವೈದ್ಯರು ವಿಳಂಬವಾಗಿ ಹಾಜರಾಗುತ್ತಿರುವ ವಿಚಾರ ತಿಳಿದು ತರಾಟೆಗೆ ತೆಗೆದುಕೊಂಡರು. 11 ಗಂಟೆಯಾದರೂ ಬರುವುದಿಲ್ಲ ಪರಿಶೀಲನೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಕೆಲವು … Read more

ಕಾರು, ಬಸ್ಸು ಮುಖಾಮುಖಿ ಡಿಕ್ಕಿ, ಕಾರಿನ ಮುಂಭಾಗ ಸಂಪೂರ್ಣ ಜಖಂ

Bus-car-at-Kaspadi-cross-in-Sagara-road

SHIVAMOGGA LIVE NEWS | 10 JUNE 2024 SAGARA : ಖಾಸಗಿ ಬಸ್‌ (Bus) ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು ಕಾರು ಚಾಲಕನಿಗೆ ಗಂಭೀರ ಗಾಯವಾಗಿದೆ. ಸಾಗರ ತಾಲೂಕು ಉಳ್ಳೂರು ಬಳಿ ತಿರುವಿನಲ್ಲಿ ಘಟನೆ ಸಂಭವಿಸಿದೆ. ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್‌ ಮತು ಸಾಗರ ಕಡೆಗೆ ತೆರಳುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಕಾರು ಚಾಲಕನಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕೂಡಲೆ ಅವರನ್ನು ಸಾಗರದ ಆಸ್ಪತ್ರೆಗೆ ರವಾನಿಸಲಾಗಿದೆ. ಬಸ್ಸಿನಲ್ಲಿ ಸುಮಾರು 20 ಪ್ರಯಾಣಿಕರು … Read more

ಖಾಸಗಿ ಬಸ್ ಪಲ್ಟಿ, ಹಲವರಿಗೆ ಗಾಯ

090624 bus mishap near anandapura

SHIVAMOGGA LIVE NEWS | 9 JUNE 2024 SAGARA : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ (PRIVATE BUS) ಪಲ್ಟಿಯಾಗಿದೆ‌. ಸಾಗರ ತಾಲೂಕು ಮುಂಬಾಳು ಬಳಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಬೆಳಗ್ಗೆ ಜೋರು ಮಳೆಯಾಗುತ್ತಿತ್ತು. ಈ ಸಂದರ್ಭ ಮುಂಬಾಳು ತಿರುವಿನಲ್ಲಿ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ‌ ಎನ್ನಲಾಗುತ್ತಿದೆ. ಬಸ್ಸಿನಲ್ಲಿದ್ದ ಸುಮಾರು 20 ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಆನಂದಪುರ, ಸಾಗರ ಮತ್ತು ಶಿವಮೊಗ್ಗದ ಆಸ್ಪತ್ರೆಗೆ ಗಾಯಾಳುಗಳನ್ನು ರವಾನಿಸಲಾಗಿದೆ. ಬಸ್ಸು ಸಾಗರದಿಂದ ಬೆಳ್ತಂಗಡಿಗೆ … Read more

ಆನಂದಪುರ ಸುತ್ತಮುತ್ತ ಇವತ್ತು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್‌ ಇರಲ್ಲ, ಎಲ್ಲೆಲ್ಲಿ ವ್ಯತ್ಯಯವಾಗಲಿದೆ?

power cut mescom ELECTRICITY

SHIVAMOGGA LIVE NEWS | 8 JUNE 2024 ANANDAPURA : ವಿದ್ಯುತ್ ಮಾರ್ಗ ನಿರ್ವಹಣೆ ಕಾಮಗಾರಿ ಹಿನ್ನೆಲೆ ಜೂ.8ರಂದು ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ಆನಂದಪುರಂ, ಮಲಂದೂರು, ಯಡೇಹಳ್ಳಿ, ದಾಸಕೊಪ್ಪ, ಆಚಾಪುರ, ಇಸ್ಲಾಂಪುರ, ಲಕ್ಕವಳ್ಳಿ, ಕೆರೆಹಿತ್ತಲು, ಗಿಳಾಲಗುಂಡಿ, ಚೆನ್ನಕೊಪ್ಪ, ತಂಗಳವಾಡಿ, ಕೊಡ್ಲಿಕೊಪ್ಪ, ಗೇರುಬೀಸು, ಇರುವಕ್ಕಿ, ತಾವರೆಹಳ್ಳಿ, ಜೇಡಿಸರ, ಅಡೂರು, ಬಳ್ಳಿಬೈಲು, ಕೊಂಗನಹೊಸಳ್ಳಿ, ಹೆಗ್ಗೋಡಿ ಗ್ರಾಮದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ (POWER CUT) ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ … Read more

ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿ, ಸಾಗರದಲ್ಲಿ ಅಟೆಂಡರ್‌ ಅರೆಸ್ಟ್

Lokayuktha-Raid-General-Image

SHIVAMOGGA LIVE NEWS | 6 JUNE 2024 SAGARA : ವ್ಯಕ್ತಿಯೊಬ್ಬರಿಂದ ಲಂಚ ಪಡೆಯುವಾಗ ತಾಲೂಕು ಕಚೇರಿಯ ಅಟೆಂಡರ್‌ ಒಬ್ಬ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಸಾಗರ ತಾಲೂಕು ಕಚೇರಿಯ ದಾಖಲಾತಿ ವಿಭಾಗದ ಆರ್‌.ಆರ್‌.ಟಿ ಶಾಖೆಯ ಅಟೆಂಡರ್‌ (Attender) ಬಸವರಾಜ್‌ ಲೋಕಾಯುಕ್ತ ಬಲೆಗೆ ಬಿದ್ದಾತ. ಏನಿದು ಪ್ರಕರಣ? ಸಾಗರದ ಬಳಸಗೋಡು ಗ್ರಾಮದಲ್ಲಿ ತೋಹಿದ್‌ ಅಬ್ದುಲ್‌ ಎಂಬುವವರಿಗೆ ಸೇರಿದ ಜಮೀನಿನ ಆರ್‌.ಟಿ.ಸಿ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಅವರ ಸ್ನೇಹಿತ ಅಸೀಬ್‌ ಎಂಬುವವರು ತಾಲೂಕು ಕಚೇರಿಗೆ ತೆರಳಿ ಅಟೆಂಡರ್‌ ಬಸವರಾಜ್‌ … Read more

ಸಿಗಂದೂರು ಲಾಂಚ್‌, ವಾಹನ ಸಾಗಟ ಸ್ಥಗಿತ, ಸ್ಥಳೀಯರಲ್ಲಿ ಆತಂಕ, ಪ್ರವಾಸಿಗರಿಗು ಸಂಕಷ್ಟ, ಕಾರಣವೇನು?

Sigandur-Launch-in-Sharavathi-River

SHIVAMOGGA LIVE NEWS | 5 JUNE 2024 SAGARA : ಶರಾವತಿ ಹಿನ್ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಆದ್ದರಿಂದ ಜೂ.5ರಿಂದ ಕಳಸವಳ್ಳಿ – ಅಂಬಾರಗೋಡ್ಲು ಲಾಂಚ್‌ನಲ್ಲಿ (Sigandur Launch) ವಾಹನ ಸಾಗಾಟ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಲಾಂಚ್‌ನಲ್ಲಿ ವಾಹನ ಸಾಗಾಟ ಸ್ಥಗಿತಗೊಳಿಸಿರುವುದರಿಂದ ಕರೂರು ಹೋಬಳಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಮಳೆ ಆರಂಭವಾಗಿ ನೀರಿನ ಮಟ್ಟ ಏರಿದಲ್ಲಿ ಮಾತ್ರ ಮತ್ತೆ ವಾಹನ ಸಾಗಾಟ ಪುನಾರಂಭವಾಗಲಿದೆ. ಶರಾವತಿ ನದಿಯ ಹಿನ್ನೀರು ಪ್ರಮಾಣ ತೀವ್ರ ಕುಸಿತ ಕಂಡಿದೆ. ಹಾಗಾಗಿ ಹಸಿರುಮಕ್ಕಿ … Read more

ಮತ ಚಲಾಯಿಸಿ ಕೊಠಡಿಯಿಂದ ಹೊರ ಬಂದ ಉದ್ಯಮಿಗೆ ಕಾದಿತ್ತು ಆಘಾತ

Sagara Police Station Building

SHIVAMOGGA LIVE NEWS | 3 JUNE 2024 SAGARA : ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಗೆ ಮತ ಚಲಾಯಿಸಲು ತೆರಳಿದ್ದ ಸಂದರ್ಭ ಮತಗಟ್ಟೆಯಲ್ಲಿ ಉದ್ಯಮಿಯೊಬ್ಬರ ಮೊಬೈಲ್‌ (Mobile Theft) ಕಳ್ಳತನವಾಗಿದೆ. ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಉದ್ಯಮಿ ವಿನಯ್‌ ಎಂಬುವವರು ಮತ ಚಲಾಯಿಸಲು ತೆರಳಿದ್ದರು. ಮತ ಚಲಾಯಿಸುವ ಕೊಠಡಿಯೊಳಗೆ ಮೊಬೈಲ್‌ ಕೊಂಡೊಯ್ಯುವಂತಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದರು. ಸಿಬ್ಬಂದಿ ಸೂಚಿಸಿದ ಜಾಗದಲ್ಲಿ ಉದ್ಯಮಿ ವಿನಯ್‌ ಮೊಬೈಲ್‌ ಇಟ್ಟು ಹೋಗಿ ಮತ ಚಲಾಯಿಸಿದ್ದರು. ಕೊಠಡಿಯಿಂದ ಹೊರ … Read more