ಶಿವಮೊಗ್ಗ – ಆಯನೂರು ರಸ್ತೆಯಲ್ಲಿ ಅಪಘಾತ, ಮೂರು ಬೈಕುಗಳಲ್ಲಿ ಇದ್ದವರಿಗೆ ಗಾಯ

Three-Bike-incident-at-Veerannana-Benavalli-in-Shimoga-Ayanur-road.

SHIVAMOGGA LIVE NEWS | 10 OCTOBER 2023 AYANURU : ಮೂರು ಬೈಕುಗಳ (BIKES) ನಡುವೆ ಡಿಕ್ಕಿಯಾಗಿ ಮಹಿಳೆ ಸೇರಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ವೀರಣ್ಣನ ಬೆನವಳ್ಳಿ ಬಳಿ ಶಿವಮೊಗ್ಗ ಕಡೆಯಿಂದ ಬರುತ್ತಿದ್ದ 2 ಬೈಕ್ ಹಾಗೂ ಆಯನೂರಿನಿಂದ ಶಿವಮೊಗ್ಗದ ಕಡೆ ಹೋಗುತ್ತಿದ್ದ ಬೈಕುಗಳ ನಡುವೆ ಡಿಕ್ಕಿಯಾಗಿದೆ. ಹಾರನಹಳ್ಳಿ ಗ್ರಾಮದವನೆಂದು ಹೇಳಲಾದ ವ್ಯಕ್ತಿ ಹಾಗೂ ಶಿವಮೊಗ್ಗದಿಂದ ಆಯನೂರು ಕಡೆಗೆ ಹೋಗುತ್ತಿದ್ದ ಬೈಕುಗಳು ಪರಸ್ಪರ ಹೊಡೆದುಕೊಂಡಿದೆ. ಎದುರಗಡೆಯಿಂದ ಬರುತ್ತಿದ್ದ … Read more

ಉಂಬ್ಳೆಬೈಲಿನಲ್ಲಿ ಶಿಕಾರಿ, ಜಿಂಕೆ, ಬರ್ಕ, ಕಾಡು ಮೊಲದ ಸಹಿತ ಸಿಕ್ಕಿಬಿದ್ದರು ಆರೋಪಿಗಳು

Hunting-case-at-Umblebyle-range-forest-department

SHIVAMOGGA LIVE NEWS | 2 OCTOBER 2023 SHIMOGA : ಜಿಂಕೆ, ಬರ್ಕ ಮತ್ತು ಕಾಡು ಮೊಲ ಶಿಕಾರಿ (Hunting) ಮಾಡಿದ್ದ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ತಾಲೂಕು ಉಂಬ್ಳೆಬೈಲು ವಲಯ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಶಿಕಾರಿ ಮಾಡಲಾಗಿತ್ತು. ಈ ಸಂಬಂಧ ಈಶ್ವರ್‌, ನವೀನ್‌, ಸುಜಿತ್‌, ಸುನಿಲ್‌, ಭರತ್‌ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಂದು … Read more

ಗಾಜನೂರಿನಲ್ಲಿ ದಾಳಿ, ಲೀಟರ್‌ಗಟ್ಟಲೆ ಗೋವಾ ಮದ್ಯ ವಶಕ್ಕೆ

Excise-department-raid-at-gajanuru-in-Shimoga-taluk

SHIVAMOGGA LIVE NEWS | 1 OCTOBER 2023 SHIMOGA : ಮನೆಯೊಂದರ ಮೇಲೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ ಗೋವಾ (GOA) ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಗಾಜನೂರು ಅಗ್ರಹಾರದ ರಾಜಣ್ಣ ಎಂಬುವವರ ಮನೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 7 ಲೀಟರ್‌ 100 ಎಂಎಲ್‌ನಷ್ಟು ಗೋವಾ ಮದ್ಯ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ – 314 ರೈಲು ವೇಳಾಪಟ್ಟಿ ಬದಲು, ಶಿವಮೊಗ್ಗದ ಯಾವ್ಯಾವ … Read more

ಸಕ್ರೆಬೈಲು ಆನೆ ಬಿಡಾರದಲ್ಲಿ ಸ್ವಚ್ಚತಾ ಹಿ ಸೇವಾ ಅಭಿಯಾನ

Swachata-Abhiyana-in-Sakrebyle

SHIVAMOGGA LIVE NEWS | 28 SEPTEMBER 2023 SHIMOGA : ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆಯನ್ನು (Cleanliness) ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಪ್ಲಾಸ್ಟಿಕ್ ಬಳಕೆ ನಿಲ್ಲಿಸುವ ಕುರಿತು ಜನಾಂದೋಲನ ಆಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಹೇಳಿದರು ಸ್ವಚ್ಚತಾ ಹಿ ಸೇವಾ ಅಭಿಯಾನದ ಅಡಿ ಸಕ್ರೈಬೈಲು ಆನೆ ಬಿಡಾರದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಪ್ಲಾಸ್ಟಿಕ್‍ನಿಂದ ಆರೋಗ್ಯದ ಮೇಲೆ, ಪರಿಸರ, ವನ್ಯಜೀವಿಗಳ ಮೇಲೆ ಆಗುತ್ತಿರುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಬೇಕಾಗಿದೆ … Read more

ವಿಷ ಸೇವಿಸಿ ಶಿಕಾರಿಪುರದಲ್ಲಿ ರೈತ ಆತ್ಮಹತ್ಯೆ

SHIKARIPURA-TALUK-NEWS-1.jpg

SHIVAMOGGA LIVE NEWS | 28 SEPTEMBER 2023 SHIKARIPURA : ಸಾಲಬಾಧೆಯಿಂದ ಮನನೊಂದು ರೈತರೊಬ್ಬರು (Farmer) ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕಾರಿಪುರ ತಾಲೂಕು ಅರಳಿಹಳ್ಳಿ ಗ್ರಾಮದ ಮಂಜಪ್ಪ (58) ಮೃತ ರೈತ. ಗ್ರಾಮದಲ್ಲಿ ಎರಡೂವರೆ ಎಕರೆ ಜಮೀನು ಹೊಂದಿದ್ದರು. ಕೃಷಿ ಚಟುವಟಿಕೆಗಾಗಿ ವಿವಿಧೆಡೆ ಸಾಲ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಸೆ.26ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ವಿಷ ಸೇವಿಸಿದ್ದರು. ತಕ್ಷಣ ಅವರನ್ನು ನ್ಯಾಮತಿಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. … Read more

BREAKING NEWS – ಆಯನೂರು ಸಮೀಪ ಅಪಘಾತ, ವ್ಯಕ್ತಿ ಸ್ಥಳದಲ್ಲೇ ಸಾವು, ಬೈಕ್‌ ನಜ್ಜುಗುಜ್ಜು

120923-Bike-bus-incident-at-Chinamane-near-Ayanuru-in-Shimoga-taluk.webp

SHIVAMOGGA LIVE NEWS | 12 SEPTEMBER 2023 AYANURU : ಖಾಸಗಿ ಬಸ್‌ (Private Bus) ಮತ್ತು ಬೈಕ್‌ (Bike) ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್‌ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಅಪಘಾತದ ರಭಸಕ್ಕೆ ಬೈಕ್‌ ಸಂಪೂರ್ಣ ನಜ್ಜುಗುಜ್ಜಾಗಿದೆ. ಹೊಸನಗರ ತಾಲೂಕಿನ ಗುರುಮೂರ್ತಿ (36) ಮೃತ ಬೈಕ್‌ ಸವಾರ. ಗುರುಮೂರ್ತಿ ಅವರು ಆಯನೂರು ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಖಾಸಗಿ ಬಸ್‌ ರಿಪ್ಪನ್‌ಪೇಟೆ ಕಡೆಯಿಂದ ಆಯನೂರಿಗೆ ಸಾಗುತ್ತಿತ್ತು. ಚಿನ್ಮನೆ ಸಮೀಪ ಅಪಘಾತ ಸಂಭವಿಸಿದೆ. ಗಂಭೀರ ಗಾಯವಾಗಿ … Read more

ಶಿವಮೊಗ್ಗ ತಾಲೂಕಿನ ಹಲವು ಗ್ರಾಮಗಳಲ್ಲಿ ಸೆ.13ರಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್‌ ಇರಲ್ಲ

power cut mescom ELECTRICITY

SHIVAMOGGA LIVE NEWS | 12 SEPTEMBER 2023 SHIMOGA : ಶಿವಮೊಗ್ಗ ತಾಲೂಕು ಹೊಳಲೂರು ವಿವಿ ಕೇಂದ್ರ ಮತ್ತು ತಾವರೆಚಟ್ನಹಳ್ಳಿ ವಿವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಶಿವಮೊಗ್ಗ ತಾಲೂಕಿನ ಹಲವರು ಗ್ರಾಮಗಳಲ್ಲಿ ಸೆ.13ರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ (Power Cut). ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಹೊಳಲೂರು, ಮಡಿಕೆ ಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, … Read more

ಶಿವಮೊಗ್ಗಕ್ಕೆ ಪ್ರೈವೇಟ್‌ ಜೆಟ್‌, ಬೆಂಗಳೂರಿನಿಂದ 39 ನಿಮಿಷ, ಇಲ್ಲಿಂದ ಮೈಸೂರಿಗೆ 25 ನಿಮಿಷದಲ್ಲಿ ಹಾರಾಟ

020823-Private-Jets-visit-Shivamogga-Airport-at-Sogane.webp

SHIVAMOGGA LIVE NEWS | 2 SEPTEMBER 2023 SHIMOGA : ಸೋಗಾನೆಯ ವಿಮಾನ ನಿಲ್ದಾಣಕ್ಕೆ ಪ್ರೈವೇಟ್‌ ಜೆಟ್‌ಗಳು ಆಗಮಿಸುತ್ತಿವೆ. ಸಾರ್ವಜನಿಕ ಸೇವೆಗೆ ವಿದ್ಯುಕ್ತ ಚಾಲನೆ ದೊರೆತ ಬೆನ್ನಿಗೆ ಸೆ.1ರಂದು ಖಾಸಗಿ ವಿಮಾನವೊಂದು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಇದನ್ನೂ ಓದಿ – ಶಿವಮೊಗ್ಗದ ಮೊದಲ ವಿಮಾನ, ಲ್ಯಾಂಡಿಂಗ್‌ನಿಂದ ಟೇಕಾಫ್‌ವರೆಗೆ ಏನೇನಾಯ್ತು? ಇಲ್ಲಿದೆ ಪೂರ್ತಿ ಮಾಹಿತಿ ಶುಕ್ರವಾರ ಬೆಳಗ್ಗೆ 9.52ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 10.31ಕ್ಕೆ ಶಿವಮೊಗ್ಗದಲ್ಲಿ ಲ್ಯಾಂಡ್‌ ಆಗಿತ್ತು. ಮಧ್ಯಾಹ್ನ 1.21ಕ್ಕೆ ಶಿವಮೊಗ್ಗದಿಂದ ಹೊರಟು ಕೇವಲ 25 … Read more

ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಗದ್ದಲ, ಗೊಂದಲ, ಪೊಲೀಸ್‌ ಮಧ್ಯಪ್ರವೇಶ, ಆಗಿದ್ದೇನು?

Santhe-Kadur-Vijay-Kumar-angry-over-felicitation-at-Shimoga-Airport.webp

SHIVAMOGGA LIVE NEWS | 31 AUGUST 2023 SHIMOGA : ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ (Farmers) ಇವತ್ತು ಏರ್‌ಪೋರ್ಟ್‌ ಟರ್ಮಿನಲ್‌ನಲ್ಲಿ (Airport Terminal) ಸನ್ಮಾನಿಸಲಾಯಿತು. ಸಾಂಕೇತಿಕವಾಗಿ ಇಬ್ಬರನ್ನು ವೇದಿಕೆಗೆ ಆಹ್ವಾನಿಸಿ ಶಾಲು ಹೊದಿಸಿ ಗೌರವಿಸಲಾಯಿತು. ಆದರೆ ಸನ್ಮಾನಿತರು ಭೂಮಿಯನ್ನು ಕಳೆದುಕೊಂಡ ರೈತರಲ್ಲ ಎಂದು ಕಾರ್ಯಕ್ರಮದಲ್ಲಿದ್ದ ಉಳಿದ ರೈತರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂದಿದ್ದ ಮೊದಲ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ 3 ಪ್ರಮುಖ ವಿಚಾರ ಟರ್ಮಿನಲ್‌ನಲ್ಲಿ ನಡೆದ ಸನ್ಮಾನ … Read more

ಶಿವಮೊಗ್ಗದ ಮೊದಲ ವಿಮಾನ, ಲ್ಯಾಂಡಿಂಗ್‌ನಿಂದ ಟೇಕಾಫ್‌ವರೆಗೆ ಏನೇನಾಯ್ತು? ಇಲ್ಲಿದೆ ಪೂರ್ತಿ ಮಾಹಿತಿ

Indigo-ATR-Flight-in-Shivamogga-Airport-Shimoga-Live-news.webp

SHIVAMOGGA LIVE NEWS | 31 AUGUST 2023 SHIMOGA : ಜಿಲ್ಲೆಯ ಜನರ ಬಹು ಸಮಯದ ಕನಸು ನನಸಾಗಿದೆ. ಇಂಡಿಗೋ (Indigo Flight) ಸಂಸ್ಥೆಯ ಎಟಿಆರ್‌ 72 ಮಾದರಿ ವಿಮಾನ ಶಿವಮೊಗ್ಗಕ್ಕೆ (Shimoga Airport) ಆಗಮಿಸಿತ್ತು. ಈ ವಿಮಾನಕ್ಕೆ ಜಿಲ್ಲೆಯಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಬೆಂಗಳೂರಿನಲ್ಲು ಇಂಡಿಗೋ ಸಂಭ್ರಮ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ ಸಂಸ್ಥೆಯ ಎಟಿಆರ್‌ 72 ವಿಮಾನ ಬೆಳಗ್ಗೆ 9.47ಕ್ಕೆ ಹಾರಾಟ ಆರಂಭಿಸಿತು. ಇದಕ್ಕೂ ಮೊದಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, … Read more