ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIKARIPURA | 30 ಸೆಪ್ಟೆಂಬರ್ 2019
![ಶಿಕಾರಿಪುರದಲ್ಲಿ ಸಿಎಂ ಯಡಿಯೂರಪ್ಪ ಜನತಾ ದರ್ಶನ, ಅಹವಾಲು ಹಿಡಿದು ಬಂದರು ಭಾರಿ ಸಂಖ್ಯೆಯ ಜನ 1 71306806 696779200801993 144724051229671424 n.jpg? nc cat=107& nc oc=AQnzIeO3eNzFBhjpr 9oHPw6i5jLn0DIuhfut3oVyn2hVeIPjVVkat4ehlIFHVOMcn4& nc ht=scontent.fblr1 3](https://scontent.fblr1-3.fna.fbcdn.net/v/t1.0-9/71306806_696779200801993_144724051229671424_n.jpg?_nc_cat=107&_nc_oc=AQnzIeO3eNzFBhjpr-9oHPw6i5jLn0DIuhfut3oVyn2hVeIPjVVkat4ehlIFHVOMcn4&_nc_ht=scontent.fblr1-3.fna&oh=853369edc661c392c2a51822d00ed4d8&oe=5E35FBCB)
ಶಿಕಾರಿಪುರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇವತ್ತು ಜನತಾ ದರ್ಶನ ನಡೆಸಿದರು. ಭಾರಿ ಸಂಖ್ಯೆಯಲ್ಲಿ ಬಂದಿದ್ದ ಜನರು ಸಿಎಂಗೆ ತಮ್ಮ ಅಹವಾಲು ಸಲ್ಲಿಸಿದರು. ಪ್ರತಿಯೊಬ್ಬರ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿ, ಕೂಡಲೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
![ಶಿಕಾರಿಪುರದಲ್ಲಿ ಸಿಎಂ ಯಡಿಯೂರಪ್ಪ ಜನತಾ ದರ್ಶನ, ಅಹವಾಲು ಹಿಡಿದು ಬಂದರು ಭಾರಿ ಸಂಖ್ಯೆಯ ಜನ 2 Prashanth GPS copy](https://shivamoggalive.com/wp-content/uploads/2019/09/Prashanth-GPS-copy.jpg)
ಜನತಾ ದರ್ಶನದಲ್ಲಿ ಸಿಎಂ ಏನೆಲ್ಲ ಹೇಳಿದರು?
ಜಿಲ್ಲೆಯ ಎಲ್ಲಾ ಪ್ರಮುಖ ನೀರಾವರಿ ಯೋಜನೆಗಳನ್ನು ಒಂದು ವರ್ಷದ ಒಳಗಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಹೊಸೂರು ಉಡುಗಣಿ ತಾಳಗುಂದ ನೀರಾವರಿ ಯೋಜನೆಗೆ ಈಗಾಗಲೇ 607 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಇದೇ ರೀತಿ ಹೊಸಳ್ಳಿ ಏತನೀರಾವರಿ ಕಲ್ಲೂರು ನೀರಾವರಿ ಯೋಜನೆ, ಸೊರಬ ತಾಲೂಕಿನ ಮೂರು ಏತ ನೀರಾವರಿ ಯೋಜನೆಗಳು ಸದ್ಯದಲ್ಲೇ ಆರಂಭವಾಗಲಿದೆ.
ಪ್ರವಾಹ ಪರಿಹಾರ ಕಾಮಗಾರಿಗಳನ್ನು ತ್ವರಿತಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಅಕ್ಟೋಬರ್ ನಾಲ್ಕರಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾಮಗಾರಿಗಳ ಪರಿಶೀಲನೆ ನಡೆಸಲಾಗುವುದು.
![ಶಿಕಾರಿಪುರದಲ್ಲಿ ಸಿಎಂ ಯಡಿಯೂರಪ್ಪ ಜನತಾ ದರ್ಶನ, ಅಹವಾಲು ಹಿಡಿದು ಬಂದರು ಭಾರಿ ಸಂಖ್ಯೆಯ ಜನ 3 70578780 2398489037062520 5710410120999993344 n.jpg? nc cat=106& nc oc=AQlWnu1kDEStA4X6f8D0Ngn riKnp2lKDZQkkcOr9WNpxjl sVYKxf44yb7sCXyTX3I& nc ht=scontent.fblr1 3](https://scontent.fblr1-3.fna.fbcdn.net/v/t1.0-9/70578780_2398489037062520_5710410120999993344_n.jpg?_nc_cat=106&_nc_oc=AQlWnu1kDEStA4X6f8D0Ngn-riKnp2lKDZQkkcOr9WNpxjl-sVYKxf44yb7sCXyTX3I&_nc_ht=scontent.fblr1-3.fna&oh=f2bd382e572f6b83611a3eb3447da32c&oe=5E29356E)
ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಮುಂದಿನ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಿಕಾರಿಪುರದಲ್ಲಿ ಶಾಹಿ ಗಾರ್ಮೆಂಟ್ ಘಟಕ ಆರಂಭವಾಗಲಿದ್ದು ಇದರಿಂದ ಈ ಭಾಗದ 2000ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಉದ್ಯೋಗವಕಾಶ ಸೃಷ್ಟಿಯಾಗಲಿದೆ.
![ಶಿಕಾರಿಪುರದಲ್ಲಿ ಸಿಎಂ ಯಡಿಯೂರಪ್ಪ ಜನತಾ ದರ್ಶನ, ಅಹವಾಲು ಹಿಡಿದು ಬಂದರು ಭಾರಿ ಸಂಖ್ಯೆಯ ಜನ 4 71069368 2418456264869490 5348831418648625152 n.jpg? nc cat=106& nc oc=AQnQ0lEA 1ts30qSN41Cdf0COXk15YG9OCn8IA1pqb66IH6f VA9YoacooVSqhBTiuo& nc ht=scontent.fblr1 3](https://scontent.fblr1-3.fna.fbcdn.net/v/t1.0-9/71069368_2418456264869490_5348831418648625152_n.jpg?_nc_cat=106&_nc_oc=AQnQ0lEA_1ts30qSN41Cdf0COXk15YG9OCn8IA1pqb66IH6f-VA9YoacooVSqhBTiuo&_nc_ht=scontent.fblr1-3.fna&oh=9c553c180f917f7acb21dc959fc216e3&oe=5E36461B)
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಯನ್ನು ಹತ್ತು ತಿಂಗಳ ಒಳಗಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಇದಕ್ಕಾಗಿ 45 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರಿಂದ ಹೆಚ್ಚಿನ ಕೈಗಾರಿಕೆಗಳು ಆರಂಭವಾಗಿ, ಉದ್ಯೋಗವಕಾಶ ಸೃಷ್ಟಿಯಾಗುವ ಭರವಸೆ ಹೊಂದಲಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅವಕಾಶವಿದೆ.
![ಶಿಕಾರಿಪುರದಲ್ಲಿ ಸಿಎಂ ಯಡಿಯೂರಪ್ಪ ಜನತಾ ದರ್ಶನ, ಅಹವಾಲು ಹಿಡಿದು ಬಂದರು ಭಾರಿ ಸಂಖ್ಯೆಯ ಜನ 5 70291774 2398477380397019 5374487392906379264 n.jpg? nc cat=106& nc oc=AQmOvLaF6jmmYQcSLpxvTXFit8xER33H2MHH5oVQuWPAqCd5Bdzm7P93GxXDs4YSzTg& nc ht=scontent.fblr1 3](https://scontent.fblr1-3.fna.fbcdn.net/v/t1.0-9/70291774_2398477380397019_5374487392906379264_n.jpg?_nc_cat=106&_nc_oc=AQmOvLaF6jmmYQcSLpxvTXFit8xER33H2MHH5oVQuWPAqCd5Bdzm7P93GxXDs4YSzTg&_nc_ht=scontent.fblr1-3.fna&oh=5f335477ce4bfdd7b1e7a45f1a264123&oe=5E2FA1D6)
ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಡಾ.ಸುಧಾಮೂರ್ತಿ ಅವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದ ಚಿತ್ರಣವೇ ಬದಲಾಗಲಿದೆ. ಜೋಗಜಲಪಾತದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.
![ಶಿಕಾರಿಪುರದಲ್ಲಿ ಸಿಎಂ ಯಡಿಯೂರಪ್ಪ ಜನತಾ ದರ್ಶನ, ಅಹವಾಲು ಹಿಡಿದು ಬಂದರು ಭಾರಿ ಸಂಖ್ಯೆಯ ಜನ 6 71927764 2418456194869497 7714397369747374080 n.jpg? nc cat=107& nc oc=AQnfdTz4Nn4AAk9sszea8txUbPH5l6aFm3Tx5zPgBK53pI N8xwURArfoCZPVzM ZrA& nc ht=scontent.fblr1 3](https://scontent.fblr1-3.fna.fbcdn.net/v/t1.0-9/71927764_2418456194869497_7714397369747374080_n.jpg?_nc_cat=107&_nc_oc=AQnfdTz4Nn4AAk9sszea8txUbPH5l6aFm3Tx5zPgBK53pI-N8xwURArfoCZPVzM_ZrA&_nc_ht=scontent.fblr1-3.fna&oh=eca2af02b2d7468f69f3688898727e7a&oe=5DF130A2)
ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವು ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಶಿವಮೊಗ್ಗ ಲೈವ್.ಕಾಂ