SHIVAMOGGA LIVE NEWS | 10 APRIL 2024
BHADRAVATHI : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಚುನಾವಣೆಗೆ ಸ್ಪರ್ಧೆ ವಿಚಾರ ಬಿಜೆಪಿಯೊಳಗೆ ಕಾರ್ಯಕರ್ತರ ಹಂತದಲ್ಲಿ ಗೊಂದಲ ಸೃಷ್ಟಿಸಿದೆ. ಈ ಮಧ್ಯೆ ಇದು ವೈಯಕ್ತಿಕ ಪ್ರತಿಷ್ಠೆಯ ಹಂತಕ್ಕೆ ತಲುಪಿದ್ದು, ಭದ್ರಾವತಿಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ದೂರು : ಮಂಡಲ ಅಧ್ಯಕ್ಷರ ಅವಹೇಳನ
ಈಶ್ವರಪ್ಪ ನಡೆ ಹಿಂದೂಗಳ ಕಡೆ ಎಂಬ ವಾಟ್ಸಪ್ ಗ್ರೂಪ್ನಲ್ಲಿ ಬಿಜೆಪಿ ಭದ್ರಾವತಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಧರ್ಮಪ್ರಸಾದ್ ಅವರು ಚಂದನ್ ರಾವ್ ಎಂಬುವವರ ವಿರುದ್ಧ ದೂರು ನೀಡಿದ್ದಾರೆ.
ಪ್ರತಿದೂರು : ಫೋನ್ ಮಾಡಿ ಕೊಲೆ ಬೆದರಿಕೆ
ಇತ್ತ ಚಂದನ್ ರಾವ್ ಅವರು ಬಿಜೆಪಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ಅವರ ವಿರುದ್ಧ ಪ್ರತಿ ದೂರು ನೀಡಿದ್ದಾರೆ. ಧರ್ಮಪ್ರಸಾದ್ ಅವರು ತನಗೆ ಕರೆ ಮಾಡಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಚಂದನ್ ರಾವ್ ಆಪಾದಿಸಿದ್ದಾರೆ.
ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಮನೆಯಲ್ಲಿ ಕುಳಿತು ಸುಲಭವಾಗಿ ಹಣ ಸಂಪಾದನೆ, ಶಿವಮೊಗ್ಗದ ವ್ಯಕ್ತಿ ಕೊನೆಗೆ ಗಳಿಸಿದ್ದೆಷ್ಟು? ಕಳೆದುಕೊಂಡಿದ್ದೆಷ್ಟು?