ಶಿವಮೊಗ್ಗ ಲೈವ್.ಕಾಂ | SHIMOGA CITY | 10 ಮೇ 2020
ಈತನಕ ಗ್ರೀನ್ ಜೋನ್ನಲ್ಲಿದ್ದ ಶಿವಮೊಗ್ಗ ಜಿಲ್ಲೆಗು ಕರೋನ ಸೋಂಕು ವಕ್ಕರಿಸಿಕೊಂಡಿದೆ. ಎಂಟು ಮಂದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.
ಯಾರಿಗೆಲ್ಲ ಪಾಸಿಟಿವ್ ಬಂದಿದೆ?
ಗುಜರಾತ್ ರಾಜ್ಯದ ಅಹಮದಾಬಾದ್ನಿಂದ ಒಂಭತ್ತು ಮಂದಿ ಶಿವಮೊಗ್ಗಕ್ಕೆ ಬಸ್ಸಿನಲ್ಲಿ ಆಗಮಿಸಿದ್ದರು. ಈ ಪೈಕಿ ಎಂಟು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಅಹಮದಾಬಾದ್ನಿಂದ ಬಂದಿದ್ದ ಒಂಭತ್ತು ಮಂದಿ ಪೈಕಿ ಏಳು ಜನ ಶಿಕಾರಿಪುರದವರು, ಒಬ್ಬರು ತೀರ್ಥಹಳ್ಳಿಯವರು ಎಂದು ತಿಳಿದು ಬಂದಿದೆ.
ಎಲ್ಲರಿಗೂ ತಬ್ಲಿಘಿ ನಂಟು
ಎಲ್ಲ ಒಂಭತ್ತು ಮಂದಿಗು ತಬ್ಲಿಘಿ ನಂಟು ಇದೆ ಎಂದು ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದರು. ಆದರೆ ಇವರೆಲ್ಲ ಅಹಮದಾಬಾದ್ನಿಂದ ನೇರವಾಗಿ ಇಲ್ಲಿಗೆ ಬಂದಿದ್ದಾರೆ. ಚೆಕ್ಪೋಸ್ಟ್ನಲ್ಲಿ ಕಾಮನ್ ತಪಾಸಣೆ ನಡೆಸಿದ್ದಾರೆ. ಆ ಬಳಿಕ ಇವರನ್ನು ನೇರವಾಗಿ ಕ್ವಾರಂಟೈನ್ಗೆ ಕಳುಹಿಸಿ, ಚಿಕಿತ್ಸೆ ಆರಂಭಿಸಲಾಗಿದೆ ಎಂದರು.
ಗ್ರೀನ್ ಜೋನ್ನಲ್ಲೇ ಉಳಿಯುತ್ತೆ ಶಿವಮೊಗ್ಗ
ಇವರೆಲ್ಲ ಅಹಮದಾಬಾದ್ನಿಂದ ಬಂದಿದ್ದಾರೆ. ಹಾಗಾಗಿ ಶಿವಮೊಗ್ಗ ಗ್ರೀನ್ ಜೋನ್ನಲ್ಲೇ ಉಳಿಯಲಿದೆ ಎಂದು ಈಶ್ವರಪ್ಪ ತಿಳಿಸಿದರು.