SHIVAMOGGA LIVE NEWS | 26 APRIL 2023
BHADRAVATHI : ಕ್ಷುಲಕ ವಿಚಾರಕ್ಕೆ ಯುವಕರ ಮಧ್ಯೆ ಗಲಾಟೆಯಾಗಿದ್ದು ಭದ್ರಾವತಿಯಲ್ಲಿ ದೂರು ಪ್ರತಿದೂರು (Counter Complaint) ದಾಖಲಾಗಿದೆ. ಓರ್ವ ಯುವಕನಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು, ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಭದ್ರಾವತಿಯ ಭೂತನಗುಡಿ ನೇತಾಜಿ ಆಟೋ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ.
ಜಬಿ ಮತ್ತು ಸಂಜಯ್ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಫೋಟೊಗ್ರಾಫರ್ ಕೃಷ್ಣಮೂರ್ತಿ ಎಂಬಾತ ದೂರು ನೀಡಿದ್ದಾರೆ. ರಾತ್ರಿ 11.30ಕ್ಕೆ ಆಟೋ ನಿಲ್ದಾಣದ ಬಳಿ ನಿಂತಿದ್ದಾಗ ಅಲ್ಲಿಗೆ ಬಂದ ಜಬಿ ಮತ್ತು ಸಂಜಯ್ ಜೋರಾಗಿ ಕೂಗಾಡುತ್ತ ಬಂದು ತನ್ನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಕೊಲೆ ಬೆದರಿಕೆಯನ್ನು ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.
ಇನ್ನು, ಸಂಜಯ್ ಪ್ರತಿದೂರು (Counter Complaint) ನೀಡಿದ್ದು, ಸೊಳ್ಳೆ ಬತ್ತಿ ತರಲು ಜಬಿ ಜೊತೆಗೆ ರಾತ್ರಿ 11.30ರ ಹೊತ್ತಿಗೆ ಅಂಗಡಿಗೆ ತೆರಳುತ್ತಿದ್ದೆ. ಆಗ ಕೃಷ್ಣ ಮತ್ತು ಇತರರು ತಮ್ಮನ್ನು ಹತ್ತಿರ ಕರೆದು ಬೆದರಿಕೆ ಒಡ್ಡಿದ್ದಾರೆ. ಚಾಕುವಿನಿಂದ ಚುಚ್ಚಲು ಮುಂದಾದರು. ತಪ್ಪಿಸಿಕೊಳ್ಳುವಾಗ ಕೈಗೆ ಚಾಕು ಚುಚ್ಚಿದೆ. ಇದೆ ವೇಳೆ ತಮ್ಮ ಮೇಲೆ ಹಲ್ಲೆಯಾಗಿದೆ. ಜೀವ ಬೆದರಿಕೆಯನ್ನು ಒಡ್ಡಿದ್ದಾರೆ ಎಂದು ದೂರು ನೀಡಿದ್ದಾನೆ.
ಇದನ್ನೂ ಓದಿ – ಅಪಘಾತದಿಂದ ಮಿದುಳು ನಿಷ್ಕ್ರಿಯ, ಭದ್ರಾವತಿ ಯುವಕನ ಹೃದಯ, ಶ್ವಾಸಕೋಶ, ಮೂತ್ರಪಿಂಡ ಸೇರಿ ಅಂಗಾಂಗ ದಾನ
ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.