ತಲೆಗೆ ಮಚ್ಚಿನೇಟು, ಯುವಕ ಪ್ರಜ್ಞಾಹೀನ, ಗಲಾಟೆಗೆ ಕಾರಣವಾದವಾ ದನಗಳು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 24 OCTOBER 2023

SHIMOGA : ಜೋಳದ ಹೊಲಕ್ಕೆ ನುಗ್ಗಿ ದನಗಳು ಬೆಳೆ ಹಾನಿ ಮಾಡಿದ ವಿಚಾರವಾಗಿ ಯುವಕನೊಬ್ಬನ ತಲೆಗೆ ಮಚ್ಚಿನಿಂದ ಹೊಡೆದು (Attack) ಗಂಭೀರ ಗಾಯಗೊಳಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಟ್ಟಿಕೆರೆ ಗ್ರಾಮದ ಕೌಶಿಕ್‌ (19) ಎಂಬಾತ ಗಂಭೀರ ಗಾಯಗೊಂಡಿದ್ದಾನೆ. ಕೌಶಿಕ್‌ ಅವರ ಜೋಳದ ಹೊಲಕ್ಕೆ ದನಗಳು ನುಗ್ಗಿದ್ದು, ಬೆಳೆ ಹಾನಿಯಾಗಿತ್ತು. ದನಗಳನ್ನು ಸರಿಯಾಗಿ ನೋಡಿಕೊಳ್ಳಿ ಎಂದು ಅವುಗಳ ಮಾಲೀಕರಿಗೆ ಕೌಶಿಕ್‌ ತಿಳಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅ.21ರಂದು ದನದ ಮಾಲೀಕ ಮತ್ತು ಆತನ ಮಗ ಜಮೀನಿಗೆ ಹೋಗುತ್ತಿದ್ದ ಕೌಶಿಕ್‌ನನ್ನು ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿದ್ದಾರೆ. ಮಚ್ಚಿನಿಂದ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾರೆ (Attack) ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ- ಬೈಕ್‌ ಹಾರನ್‌ ಮಾಡಿದ್ದಕ್ಕೆ ಫಾಲೋ ಮಾಡಿಕೊಂಡು ಬಂದು ಮಾರಕಾಸ್ತ್ರದಿಂದ ದಾಳಿ

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕೌಶಿಕ್‌ನನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment