SHIVAMOGGA LIVE NEWS | 27 OCTOBER 2023➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
THIRTHAHALLI : ಕಳೆದ ಎರಡು ದಿನದಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ತುಂಗಾ ನದಿಯಲ್ಲಿ (Tunga River) ಪತ್ತೆಯಾಗಿದೆ.

ಶುಕ್ರವಾರ ಬೆಳಗ್ಗೆ ಗಾಯತ್ರಿ ಮಂದಿರ ಸಮೀಪದ ನಿವಾಸಿ ದೇವರಾಜ್ (52) ಮೃತದೇಹ ಪಟ್ಟಣದ ತುಂಗಾನದಿಯಲ್ಲಿ ಪತ್ತೆಯಾಗಿದೆ. ಮನೆಗಳಿಗೆ ಹಾಲು ಹಾಕುವ ವ್ಯಾಪಾರ ಮಾಡುತ್ತಿದ್ದರು. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ- ಶಿವಮೊಗ್ಗದಲ್ಲಿ ಕೇಕ್ ತಯಾರಿಕೆಗೆ ಒಂದು ದಿನದ ತರಬೇತಿ, 12 ಜನಕ್ಕಷ್ಟೆ ಅವಕಾಶ, ಈಗಲೆ ಹೆಸರು ನೋಂದಾಯಿಸಿ