SHIVAMOGGA LIVE NEWS | 20 DECEMBER 2022
ಶಿವಮೊಗ್ಗ : ತುರ್ತು ಕೆಲಸಕ್ಕೆ ಅಗತ್ಯವಿದೆ ಎಂದು ಕೃಷಿಕರೊಬ್ಬರಿಂದ ಕಾರು (car missing) ಪಡೆದು ನಾಲ್ಕು ತಿಂಗಳಾದರು ಹಿಂತಿರುಗಿಸದೆ ವಂಚಿಸಲಾಗಿದೆ. ಈ ಸಂಬಂಧ ಸ್ನೇಹಿತನ ಮಗನ ವಿರುದ್ಧ ಆ ಕೃಷಿಕ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಬಸವನಗೌಡ ಎಂಬುವವರು ತಮ್ಮ ಸ್ನೇಹಿತನ ಮಗ ರೋಹಿತ್ ಐಯ್ಯಂಗಾರ್ ಎಂಬುವವರಿಗೆ ವ್ಯಾಗನಾರ್ ಕಾರು ಕೊಟ್ಟಿದ್ದರು.
(car missing)
ಏನಿದು ಪ್ರಕರಣ?
ರೋಹಿತ್ ಅಯ್ಯಂಗಾರ್ ಅವರ ತಂದೆ ಮತ್ತು ಬಸವನಗೌಡ ಅವರು ಸ್ನೇಹಿತರು. ರೋಹಿತ್ ಅಯ್ಯಂಗಾರ್ ಬೇಕರಿ ನಡೆಸುತ್ತಿದ್ದಾನೆ. ಆತನ ಕಾರು ಕೆಟ್ಟು ಹೋಗಿದ್ದು, ರಿಪೇರಿಗೆ ಕೊಟ್ಟಿದ್ದಾಗಿ ತಿಳಿಸಿದ್ದಾನೆ. ಬೇಕರಿ ಕೆಲಸಗಳಿರುವುದರಿಂದ ಒಂದು ವಾರದ ಮಟ್ಟಿಗೆ ವ್ಯಾಗನಾರ್ ಕಾರು ಕೊಡುವಂತೆ ಬಸವನಗೌಡ ಅವರಿಗೆ ಮನವಿ ಮಾಡಿದ್ದ. ಸ್ನೇಹಿತನ ಮಗನಾದ್ದರಿಂದ ಬಸವನಗೌಡ ಅವರು ನಂಬಿಕೆ ಇಟ್ಟು ಕಾರು ಕೊಟ್ಟಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದ ಈ ಆಟೋ ಈಗ ‘ಪುನೀತ ರಥ’, ಚಾಲಕನ ಮನೆ, ಮನ, ಮೊಬೈಲ್ ತುಂಬಾ ಅಪ್ಪು ಅಮರ
ಒಂದು ವಾರ ಕಳೆದರು ಕಾರು ಮರಳಿ ಬಾರದಿದ್ದರಿಂದ ಬಸವನಗೌಡ ಅವರು ಫೋನ್ ಮೂಲಕ ವಿಚಾರಿಸಿದ್ದಾರೆ. ಇನ್ನೊಂದು ಸ್ವಲ್ಪ ದಿನದಲ್ಲಿ ಹಿಂತಿರುಗಿಸುವುದಾಗಿ ರೋಹಿತ್ ಭರವಸೆ ನೀಡಿದ್ದಾನೆ. ನಾಲ್ಕು ತಿಂಗಳು ಕಳೆದರು ಕಾರು ಮರಳಿ ಕೊಡದಿದ್ದಾಗ ಬಸವನಗೌಡ ಅವರು ಹೊಳಲ್ಕೆರೆಯಲ್ಲಿರುವ ರೋಹಿತ್ ಬೇಕರಿ ಬಳಿ ತೆರಳಿದ್ದಾರೆ. ಆತ ಬೇಕರಿ ಮತ್ತು ಮನೆಯನ್ನು ಬಾಡಿಗೆಗೆ ಕೊಟ್ಟು ಮೈಸೂರಿಗೆ ಹೋಗಿರುವುದು ಗೊತ್ತಾಗಿದೆ.
ಇದನ್ನೂ ಓದಿ – ಅರ್ಧ ವರ್ಷದಲ್ಲಿ 7 ರೌಡಿಗಳ ಕಾಲಿಗೆ ಗುಂಡಿಟ್ಟ ಶಿವಮೊಗ್ಗ ಪೊಲೀಸರು, ಯಾರೆಲ್ಲರಿಗೆ ಫೈರ್ ಮಾಡಲಾಗಿದೆ?
ಕಾರು ಪಡೆದು ನಾಲ್ಕು ತಿಂಗಳು ಕಳೆದರು ಅದನ್ನು ಹಿಂತಿರುಗಿಸದೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಬಸವನಗೌಡ ಅವರು ದೂರು ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200