ಅನ್ನ ಮಾಡುವ ವಿಚಾರದಲ್ಲಿ ಜಗಳ, ಬಿಸಿ ಬಿಸಿ ತಿಳಿಯನ್ನು ಅತ್ತೆ ತಲೆ ಮೇಲೆ ಸುರಿದ ಸೊಸೆ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ ಲೈವ್.ಕಾಂ | SAGARA NEWS | 24 ಆಗಸ್ಟ್ 2021

ಅನ್ನ ಮಾಡುವ ವಿಚಾರವಾಗಿ ಅತ್ತೆ, ಸೊಸೆ ಮಧ್ಯೆ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ಸೊಸೆ ಬಿಸಿ ಬಿಸಿ ಅನ್ನದ ತಿಳಿಯನ್ನು ಅತ್ತೆ ತಲೆ ಮೇಲೆ ಸುರಿದಿದ್ದಾಳೆ. ಸುಟ್ಟ ಗಾಯಗಳಿಂದಾಗಿ ಅತ್ತೆ ಆಸ್ಪತ್ರೆ ಸೇರಿದ್ದು, ಸೊಸೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಾಗರ ತಾಲೂಕು ಮುಳಕೇರಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಪಾರ್ವತಮ್ಮ (58) ಅವರು ಸುಟ್ಟ ಗಾಯಗಳಿಂದಾಗಿ ಸಾಗರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಅನ್ನ ಮಾಡುವ ವಿಚಾರದಲ್ಲಿ ಕಿರಿಕ್

ಪಾರ್ವತಮ್ಮ ಅವರ ಸೊಸೆ ನೇತ್ರಾ ಅನ್ನಕ್ಕೆ ಇಟ್ಟಿದ್ದರು. ಇದನ್ನು ಗಮನಿಸಿದ ಪಾರ್ವತಮ್ಮ ಅವರು ತಾವು ಅನ್ನ ಮಾಡಿದ್ದು, ಮತ್ತೊಮ್ಮೆ ಯಾಕೆ ಇಟ್ಟಿದ್ದೀಯ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪಾರ್ವತಮ್ಮ ಮತ್ತು ನೇತ್ರಾ ಮಧ್ಯೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಸಿಟ್ಟಾದ ನೇತ್ರಾ, ಒಲೆ ಮೇಲೆ ಇರಿಸಿದ್ದ ಅನ್ನದ ಪಾತ್ರೆಯನ್ನು ತಂದು ಅದರಲ್ಲಿದ್ದ ಬಿಸಿ ಅನ್ನದ ತಿಳಿಯನ್ನು ಪಾರ್ವತಮ್ಮ ಮೇಲೆ ಸುರಿದಿದ್ದಾರೆ ಎಂದು ಆರೋಪಿಸಲಾಗಿದೆ.

ಅನ್ನದ ಪಾತ್ರೆಯಲ್ಲೇ ಗುದ್ದಿದಳು

ಬಿಸಿ ತಿಳಿಯನ್ನು ತಲೆ ಮೇಲಿಂದ ಸುರಿಯುತ್ತಿದ್ದಂತೆ ಪಾರ್ವತಮ್ಮ ಅವರು ಜೋರಾಗಿ ಕೂಗಿಕೊಂಡು ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ ನೇತ್ರಾ ಅನ್ನ ಪಾತ್ರೆಯಿಂದಲೇ ಅತ್ತೆ ಪಾರ್ವತಮ್ಮಗೆ ತಲೆ ಮತ್ತು ಬೆನ್ನಿಗೆ ಗುದ್ದಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವೇಳೆ ಪಾರ್ವತಮ್ಮ ಅವರ ಮಕ್ಕಳು ಮತ್ತು ಸ್ಥಳೀಯರು ಬಂದು ರಕ್ಷಿಸಿದ್ದಾರೆ.

AVvXsEjg6pSNP zPCKJ5AxskZbTphiAhyel8fkc4QBzDJ3X lXVeTsL46xZ6FlCL5ds0KHqOlW9yBTC84uYdxkpBTdLwxJa4VlU2AqXFSSBQgyLEl J0I1zv W3nFahKNjFVkZKVnr3mc2N1pP21fIRcS 9W6EJOOmt15rlSAzJoQ

ಕೂಡಲೆ ಪಾರ್ವತಮ್ಮ ಅವರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿದೆ. ಪಾರ್ವತಮ್ಮ ಅವರ ಮುಖ, ಕಣ್ಣುಗಳು, ಕೈಗಳು ಸೇರಿದಂತೆ ವಿವಿಧೆಡೆ ಸುಟ್ಟ ಗಾಯವಾಗಿದೆ.

ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೊಸೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾರ್ವತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

238274473 1178430235970218 2635873810325074933 n.jpg? nc cat=106&ccb=1 5& nc sid=730e14& nc ohc=RmV6nLXI3JwAX9gwRnl& nc ht=scontent.fblr1 3

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment