ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ : ಭಾರತೀಯ ಸೇನೆಯ ಅಧಿಕಾರಿ ಎಂದು ನಂಬಿಸಿ ಶಿವಮೊಗ್ಗದ ವೈದ್ಯೆ (Doctor) ಮತ್ತು ಅವರ ಮನೆಯಲ್ಲಿ ಬಾಡಿಗೆಗೆ ಇರುವ ವ್ಯಕ್ತಿಯೊಬ್ಬರಿಗೆ 3.72 ಲಕ್ಷ ರೂ. ಹಣ ವಂಚಿಸಲಾಗಿದೆ. ವಿಡಿಯೋ ಕರೆ ಮಾಡಿ ರೋಗಿಗಳನ್ನು ಕಳುಹಿಸಲಾಗುತ್ತಿದೆ ಎಂದು ನಂಬಿಸಿ ಹಣ ಲಪಟಾಯಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎನ್ಸಿಸಿ ಕಚೇರಿಯಿಂದ ಫೋನ್..!
ಶಿವಮೊಗ್ಗದ ಎನ್ಸಿಸಿ ಕಚೇರಿಯಿಂದ ಕ್ಯಾಪ್ಟನ್ ಮಾತನಾಡುತ್ತಿರುವುದಾಗಿ ತಿಳಿಸಿ ವ್ಯಕ್ತಿಯೊಬ್ಬ ವೈದ್ಯೆಗೆ (ಹೆಸರು ಗೌಪ್ಯ) ಕರೆ ಮಾಡಿದ್ದ. ಸೇನಾ ವಾಹನದಲ್ಲಿ ಸುಮಾರು 45 ರೋಗಿಗಳನ್ನು ನಿಮ್ಮ ಕ್ಲಿನಿಕ್ಗೆ ಕಳುಹಿಸುತ್ತಿರುವುದಾಗಿ ತಿಳಿಸಿದ್ದ. ಈ ಸಂಬಂಧ ಮಾತನಾಡಲು ಕರ್ನಲ್ ಸಂದೀಪ್ ರಾವತ್ ವಿಡಿಯೋ ಕಾಲ್ ಮಾಡುತ್ತಾರೆ. ಅವರ ಜೊತೆಗೆ ಮಾತನಾಡುವಾಗ ಎರಡು ಮೊಬೈಲ್ ಇಟ್ಟುಕೊಳ್ಳಬೇಕು. ಇದು ಸೇನಾ ನಿಯಮ ಎಂದು ತಿಳಿಸಿದ್ದ.
ವಿಡಿಯೋ ಕರೆ ಮಾಡಿದ ಕರ್ನಲ್
ವಿಡಿಯೋ ಕರೆ ಸ್ವೀಕರಿಸಿದ ವೈದ್ಯಗೆ ಸೇನಾ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬ ತನ್ನನ್ನು ಕರ್ನಲ್ ಸಂದೀಪ್ ರಾವತ್ ಎಂದು ಪರಿಚಯಿಸಿಕೊಂಡಿದ್ದ. ಹಿಂದಿ ಸರಿಯಾಗಿ ಬಾರದ ಹಿನ್ನೆಲೆ ವೈದ್ಯೆ ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿಯೊಬ್ಬರನ್ನು ಕರೆಯಿಸಿಕೊಂಡು ಸೇನಾಧಿಕಾರಿ ಜೊತೆ ಮಾತನಾಡಿಸಿದ್ದರು. ಕರ್ನಲ್ ಸಂದೀಪ್ ರಾವತ್, ವೈದ್ಯೆಯ ಗೂಗಲ್ ಪೇ ಓಪನ್ ಮಾಡಿಸಿ, ತಾನು ಸೂಚಿಸಿದ ನಂಬರ್ಗೆ 49,511 ರೂ. ಹಣ ವರ್ಗಾಯಿಸುವಂತೆ ಸೂಚಿಸಿದ್ದ. ಈ ಹಣ ಮರಳಿ ಬರಲಿದೆ. ಇದೆಲ್ಲ ಸೇನಾ ನಿಯಮ ಎಂದು ನಂಬಿಸಿದ್ದ.

ಲಕ್ಷ ಲಕ್ಷ ಲಪಟಾಯಿಸಿದ ಖದೀಮ
ವೈದ್ಯೆಯ ಗೂಗಲ್ ಪೇನಿಂದ ಹಣ ವರ್ಗಾಯಿಸಿಕೊಂಡು ಖಾತೆಯಲ್ಲಿ ಹಣ ಖಾಲಿಯಾದ ಬಳಿಕ ಕರ್ನಲ್ ಸಂದೀಪ್ ರಾವತ್ ವರಸೆ ಬದಲಿಸಿದ್ದ. ವೈದ್ಯೆಗೆ ನೆರವಾಗಲು ಬಂದಿದ್ದ ಬಾಡಿಗೆ ಮನೆಯ ವ್ಯಕ್ತಿಯ ಮೊಬೈಲ್ನಿಂದಲು ಹಣ ವರ್ಗಾಯಿಸುವಂತೆ ತಾಕೀತು ಮಾಡಿದ್ದ. ಅಂತೆಯೇ ಬಾಡಿಗೆ ಮನೆಯ ವ್ಯಕ್ತಿಯ ಮೊಬೈಲ್ನಿಂದ ಹಣ ವರ್ಗಾಯಿಸಲಾಗಿತ್ತು. ವಿಡಿಯೋ ಕರೆ ಕಡಿತವಾದ ಮೇಲೆ ಪುನಃ ಕರೆ ಮಾಡಿದ ಕರ್ನಲ್ ಸಂದೀಪ್ ರಾವತ್, ನಿಮ್ಮ ಹಣ ನಿಮ್ಮ ಖಾತೆಗೆ ಮರಳಲಿದೆ ಎಂದು ಭರವಸೆ ನೀಡಿದ್ದ.
ಅನುಮಾನಗೊಂಡ ವೈದ್ಯೆ ಮತ್ತು ಬಾಡಿಗೆ ಮನೆಯ ವ್ಯಕ್ತಿ ಕೂಡಲೆ 1930ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಬಳಿಕ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ » ಸಿಗಂದೂರು ಲಾಂಚ್, ಬೆಳಗಾವಿಯ ಕುಟುಂಬದ ಮೇಲೆ ಹಲ್ಲೆ ಅಟ್ಯಾಕ್, ಕಾರಣವೇನು?
LATEST NEWS
- ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಅಗ್ನಿ ಅವಘಡ, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಆಹುತಿ

- ಕಲ್ಲು ಬಂಡೆ ಬಿದ್ದು ಕೃಷಿಕ ಸ್ಥಳದಲ್ಲೇ ಸಾವು

- ಹೆಗಲತ್ತಿಯಲ್ಲಿ ನಾಗಯಕ್ಷೆ ದೇವಾಲಯದ 12ನೇ ವಾರ್ಷಿಕೋತ್ಸವ, ಇವತ್ತು ಪಲ್ಲಕ್ಕಿ ಉತ್ಸವ

- ಶಿವಮೊಗ್ಗ ಜಿಲ್ಲೆಯಲ್ಲಿ ರಣ ಬಿಸಿಲು, ತಾಪಮಾನ ಹೆಚ್ಚಳ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ಉಷ್ಣಾಂಶ?

- ತುಂಗಾ ಚಾನಲ್ ಬಳಿ ಸ್ಕೂಟಿ ನಿಲ್ಲಿಸಿಕೊಂಡಿದ್ದವರ ಮೇಲೆ ಪೊಲೀಸ್ ದಾಳಿ, ಒಬ್ಬ ಎಸ್ಕೇಪ್, ಮತ್ತೊಬ್ಬ ಅರೆಸ್ಟ್

About The Editor
ನಿತಿನ್ ಆರ್.ಕೈದೊಟ್ಲು





