ಶಿವಮೊಗ್ಗದಲ್ಲಿ ಸಮಾಜ ಸೇವಕನಿಂದ 1 ಕೋಟಿ ರೂ. ವಂಚನೆ, ಏನಿದು ಪ್ರಕರಣ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 25 FEBRURARY 2023

SHIMOGA : ಅಡಕೆ ಬೆಳೆಯಲು ಆಸಕ್ತಿ ಇರುವವರಿಗೆ ಸರ್ಕಾರ 4 ಎಕರೆ ಜಮೀನು ಮಂಜೂರು ಮಾಡಲಿದೆ. ಇದಕ್ಕಾಗಿ ತಲಾ 4 ಲಕ್ಷ ರೂ. ನೀಡಬೇಕು ಎಂದು 27 ಜನರಿಗೆ ವಂಚಿಸಲಾಗಿದೆ (fraud) ಎಂದು ಆರೋಪಿಸಿ ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.

Crime-News-General-Image

ಶಿವಮೊಗ್ಗದ ಸಂಜೀವ್ ಪ್ರಭು ಎಂಬುವವರು ಸೇರಿದ ಒಟ್ಟು 27 ಮಂದಿಗೆ ವಂಚಿಸಲಾಗಿದೆ. ಜಮೀನು ಕೊಡಿಸುವ ಆಸೆ ಹುಟ್ಟಿಸಿ ಪ್ರತಿಯೊಬ್ಬರಿಂದ ತಲಾ 4 ಲಕ್ಷ ರೂ. ಹಣ ಪಡೆಯಲಾಗಿದೆ. ಒಟ್ಟು 1.08 ಕೋಟಿ ರೂ. ವಂಚನೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ವಂಚನೆ ಆಗಿದ್ದು ಹೇಗೆ?

ಸಂಜೀವ್ ಪ್ರಭು ಅವರು ನಡೆಸುತ್ತಿರುವ ಸಿಹಿ ತಿನಿಸು ಅಂಗಡಿಗೆ ಬಂದಿದ್ದ ವ್ಯಕ್ತಿಯೊಬ್ಬ ತನ್ನನ್ನು ಸಮಾಜ ಸೇವಕ ಎಂದು ಪರಿಚಯಿಸಿಕೊಂಡಿದ್ದ. ಒಮ್ಮೆ ಮಾತನಾಡುವಾಗ ಸಮಾಜ ಸೇವಕ, ‘ಸರ್ಕಾರ ಅಡಕೆ ಬೆಳೆಯಲು 4 ಎಕರೆ ಜಮೀನು ಮಂಜೂರು ಮಾಡುತ್ತಿದೆ. ಕೃಷಿ ಆಸಕ್ತಿ ಇರುವ ಸಣ್ಣದೊಂದು ಗುಂಪು ಮಾಡಿಕೊಂಡು ಈ ಯೋಜನೆಯ ಲಾಭ ಪಡೆಯಬಹುದು’ ಎಂದು ತಿಳಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ – SHIMOGA AIRPORT JOBS ಹೆಸರಲ್ಲಿ ಆನ್‌ಲೈನ್‌ನಲ್ಲೆ ಸಂದರ್ಶನ, ಅಲ್ಲೇ ಹಣಕ್ಕೆ ಬೇಡಿಕೆ, ಅಕಾಂಕ್ಷಿಗಳೆ ಹುಷಾರ್

ತಲಾ 4 ಲಕ್ಷ ರೂ. ಹಣ

2014ರ ಸೆಪ್ಟೆಂಬರ್ ತಿಂಗಳಲ್ಲಿ ಸಂಜೀವ್ ಪ್ರಭು ಅವರ ಸಿಹಿ ತಿನಿಸು ಅಂಗಡಿಯಲ್ಲಿ 26 ಜನರು ಗಂಪು ಸೇರಿಸಿ, ಸಭೆ ನಡೆಸಲಾಯಿತು. ಅಲ್ಲಿ ಸಮಾಜ ಸೇವಕ ಸರ್ಕಾರದ ಯೋಜನೆ ಕುರಿತು ಮಾಹಿತಿ ನೀಡಿದ್ದ. ತಲಾ 4 ಎಕರೆ ಜಮೀನು ಮಂಜೂರು ಮಾಡಿಸಲು ಬೆಂಗಳೂರಿಗೆ ಓಡಾಟ, ಕಚೇರಿ ಖರ್ಚು ಎಂದು ಪ್ರತಿಯೊಬ್ಬರಿಂದ 4 ಲಕ್ಷ ರೂ. ಹಣ ಪಡೆದಿದ್ದ.

ಜಮೀನು ಮಂಜೂರು ಮಾಡಿಸುತ್ತೇನೆ ಎಂದು ಒಟ್ಟು 1.08 ಕೋಟಿ ರೂ. ಪಡೆದ ಸಮಾಜ ಸೇವಕ, ಈತನಕ ಜಮೀನು ಇಲ್ಲದೆ, ಹಣವನ್ನು ಹಿಂತಿರುಗಿಸದೆ ವಂಚಿಸಿದ್ದಾನೆ (fraud) ಎಂದು ಸಂಜೀವ್ ಪ್ರಭು ಆರೋಪಿಸಿದ್ದಾರೆ. ಈ ಸಂಬಂಧ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment