ಶಿವಮೊಗ್ಗ : ಬಂಗಾರದ ಸರ (Gold Chain) ಖರೀದಿಸಿ ಸಿಟಿ ಬಸ್ನಲ್ಲಿ ಮನೆಗೆ ಮರಳುವ ಹೊತ್ತಿಗೆ ಕಳ್ಳತನವಾಗಿದೆ. ಮಹಿಳೆಯ ಬ್ಯಾಗಿನಿಂದ ಚಿನ್ನದ ಸರವನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಖರೀದಿಸಿದ ಕೆಲವೇ ಹೊತ್ತಿಗೆ ಕಳವು
ನಾಗರತ್ನಮ್ಮ ಎಂಬುವವರು ಗೋಪಿ ಸರ್ಕಲ್ ಸಮೀಪ ಆಭರಣ ಜ್ಯೂವೆಲರ್ಸ್ ಅಂಗಡಿಯಿಂದ 1.93 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರ ಖರೀದಿಸಿದ್ದರು. ಅದಕ್ಕೆ 7 ಗ್ರಾಂ ತೂಕದ ತಾಳಿ, ಲಕ್ಷ್ಮಿ ಕಾಸು, ಗುಂಡುಗಳನ್ನು ಜ್ಯೂವೆಲರಿ ಅಂಗಡಿಯಲ್ಲೇ ಜೋಡಿಸಿಕೊಂಡಿದ್ದರು. ಒಟ್ಟು 2.50 ಲಕ್ಷ ರೂ. ಮೌಲ್ಯದ ಮಾಂಗಲ್ಯವನ್ನು ಬಾಕ್ಸ್ನಲ್ಲಿ ಹಾಕಿಸಿಕೊಂಡು, ಬ್ಯಾಗಿನಿಲ್ಲಿ ಇರಿಸಿಕೊಂಡಿದ್ದರು.
ಸಿಟಿ ಬಸ್ ಹತ್ತಿ ಮನೆಗೆ

ನಾಗರತ್ನಮ್ಮ ಅವರು ತಮ್ಮ ಸಹೋದರಿ ಮತ್ತು ಮಗಳೊಂದಿಗೆ ಆಭರಣ ಜ್ಯೂವೆಲರಿ ತೆರಳಿದ್ದರು. ಅಲ್ಲಿಂದ ಗಾಂಧಿ ಬಜಾರ್ಗೆ ಹೋಗಿದ್ದರು. ಬಳಿಕ ಮನೆಗೆ ತೆರಳಲು ಎಸ್.ಎನ್.ಸರ್ಕಲ್ನಲ್ಲಿ ಸಿಟಿ ಬಸ್ ಹತ್ತಿದ್ದರು. ಬಸ್ಸು ಬಸ್ ನಿಲ್ದಾಣದವರೆಗೆ ಹೋಗಿ ತಿರುಗಿ ಮಾರುಕಟ್ಟೆಗೆ ಬಂದಿತ್ತು. ಈ ವೇಳೆಯಲ್ಲೆ ಚಿನ್ನದ ಸರ (Gold Chain) ಕಳುವಾಗಿರುವ ಕುರಿತು ಮಹಿಳೆ ಶಂಕೆ ವ್ಯಕ್ತಪಡಿಸಿದ್ದಾರೆ.

ಮನೆಗೆ ಹೋದಾಗ ಕಾದಿತ್ತು ಶಾಕ್
ಮನೆಗೆ ಹೋಗಿ ಬ್ಯಾಗಿನಿಂದ ಆಭರಣ ಜ್ಯೂವೆಲರ್ಸ್ ಅಂಗಡಿಯ ಬಾಕ್ಸ್ ಹೊರತೆಗೆದು ನೋಡಿದಾಗ ಮಾಂಗಲ್ಯ ಸರ ಇರಲಿಲ್ಲ. ಆತಂಕಕ್ಕೀಡಾದ ಮಹಿಳೆ ಕುಟುಂಬದವರಿಗೆ ಮಾಹಿತಿ ನೀಡಿದ್ದರು. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ವಿಧಾನಸೌಧದಲ್ಲಿ ಕೆಲಸ ಕೊಡಿಸ್ತೀನಿ ಅಂದ, ಲಕ್ಷ ಲಕ್ಷ ಹಣ ಪಡೆದವನ ಹಿನ್ನೆಲೆ ಪರಿಶೀಲಿಸಿದಾಗ ಕಾದಿತ್ತು ಆಘಾತ
LATEST NEWS
- ವರ್ಷ ಪೂರ್ತಿ ರಂಗ ಚಟುವಟಿಕೆ, ಉದ್ಘಾಟನೆಯ ದಿನಾಂಕ ಪ್ರಕಟ, ಏನಿದು ಕಾರ್ಯಕ್ರಮ?

- ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ಥಿತ್ವಕ್ಕೆ, ಉದ್ದೇಶವೇನು? ರಾಜ್ಯಾಧ್ಯಕ್ಷೆ ಏನೆಲ್ಲ ಹೇಳಿದರು?

- ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ಫೆಬ್ರವರಿ 7ರಂದು ಇಡೀ ದಿನ ಕರೆಂಟ್ ಇರಲ್ಲ, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್

- ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ತಗ್ಗಿದ ತಪಮಾನ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ?

- ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ಪಂದ್ಯ ಗೆದ್ದವರಿಗೆ ಎರಡು ಟಗರು

About The Editor
ನಿತಿನ್ ಆರ್.ಕೈದೊಟ್ಲು






