ತಿಥಿ ಕಾರ್ಯ ಮುಗಿಸಿ ಹಿಂತಿರುಗಿದಾಗ ಮನೆ ಬಾಗಿಲುಗಳು ತೆರೆದಿದ್ದವು, ಲೈಟ್‌ ಆನ್‌ ಇತ್ತು, ಒಳ ಹೋದಾಗ ಕಾದಿತ್ತು ಶಾಕ್‌

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

FATAFAT NEWS, 17 AUGUST 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ತಿಂಡಿ ತಿಂದು ಹೊಟೇಲ್‌ನಿಂದ ಹೊರ ಬಂದ ವ್ಯಕ್ತಿಗೆ ಶಾಕ್‌

EBEDEF fatafat-1-1.webpಶಿವಮೊಗ್ಗ ಲೈವ್.ಕಾಂ : ಹೊಟೇಲ್‌ನಲ್ಲಿ ತಿಂಡಿ ತಿಂದು ವಾಪಸ್‌ ಬರುವಷ್ಟರಲ್ಲಿ ಬೈಕ್‌ ಕಳ್ಳತನವಾಗಿದೆ (THEFT). ಮೊಹಮದ್‌ ಇಕ್ಬಾಲ್‌ ಅಹಮದ್‌ ಎಂಬುವವರು ತಮಗೆ ಸೇರಿದ ಹೋಂಡಾ ಆಕ್ಟೀವಾ ಬೈಕ್‌ ಅನ್ನು ಶಿವಮೊಗ್ಗದ ಆಶೋಕ ಹೊಟೇಲ್‌ ರಸ್ತೆಯಲ್ಲಿ ಪಾರ್ಕ್‌ ಮಾಡಿದ್ದರು. ಹೊಟೇಲ್‌ನಲ್ಲಿ ತಿಂಡಿ ತಿಂದು ಮರಳುವಷ್ಟರಲ್ಲಿ ಬೈಕ್‌ ಇರಲಿಲ್ಲ. ಎಲ್ಲೆಡೆ ಹುಡುಕಿದೆ ಮೊಹಮದ್‌ ಇಕ್ಬಾಲ್‌ ಅಹಮದ್‌ ಅವರು ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂವರು ಚಾಲಕರಿಂದ ಆಟೋ ಚಾಲಕನ ಮೇಲೆ ಹಲ್ಲೆ

EBEDEF fatafat-2.webpಶಿವಮೊಗ್ಗ ಲೈವ್.ಕಾಂ : ಊರಿನಿಂದ ಬಂದಿದ್ದ ತಂಗಿಯನ್ನು ಆಟೋದಲ್ಲಿ ಕರೆದೊಯ್ದ ಚಾಲಕನ ಮೇಲೆ ಸ್ಟಾಂಡ್‌ನಲ್ಲಿ ನಿಲ್ಲಿಸಿದ್ದ ಆಟೋದ ಚಾಲಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗ ಘಟನೆ ಸಂಭವಿಸಿದೆ. ಆಟೋ ಚಾಲಕ ಅಜಯ್‌ ಮೇಲೆ ಮೂವರು ಆಟೋ ಚಾಲಕರು ಹಲ್ಲೆ ನಡೆಸಿದ್ದಾರೆ. ಊರಿಂದ ಬಂದಿದ್ದ ತಂಗಿ ಮತ್ತು ಮಕ್ಕಳನ್ನು ಆಟೋ ಹತ್ತಿಸಿಕೊಂಡಿದ್ದಾರೆ. ಆಗ ಇತರೆ ಆಟೋ ಚಾಲಕರು ಆಟೋ ತಂದು ಅಡ್ಡ ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ ⇒ ಶಿವಮೊಗ್ಗದ ಎಲ್ಲಾ ಆಸ್ಪತ್ರೆಗಳ ಹೊರ ರೋಗಿ ವಿಭಾಗ ಇನ್ನು 24 ಗಂಟೆ ಬಂದ್

ತಿಥಿ ಕಾರ್ಯ ಮುಗಿಸಿ ಬರುವಷ್ಟರಲ್ಲಿ ಮನೆಯಲ್ಲಿ ಕಳ್ಳತನ

EBEDEF fatafat-3.webpಶಿವಮೊಗ್ಗ ಲೈವ್.ಕಾಂ : ಕುಟುಂಬದವರೆಲ್ಲ ಸಂಬಂಧಿಯೊಬ್ಬರ ತಿಥಿ ಕಾರ್ಯಕ್ಕೆ ಹೋಗಿದ್ದ ವೇಳೆ ಮನೆಯಲ್ಲಿ ಕಳ್ಳತನವಾಗಿದೆ. ಚಿನ್ನ, ಬೆಳ್ಳಿ ಅಭರಣ ಮತ್ತು ನಗದು ಸೇರಿ 1.47 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದೆ. ಹೊಸನಗರ ತಾಲೂಕು ನಗರ ಹೋಬಳಿಯ ಕಾನುಗೋಡು ಗ್ರಾಮದ ರಾಮಕೃಷ್ಣ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ತಿಥಿ ಕಾರ್ಯ ಮುಗಿಸಿ ಮನೆ ಬಳಿ ಬಂದಾಗ ಬಾಗಿಲುಗಳು ತೆರೆದಿದ್ದವು. ಮನೆಯೊಳಗೆ ಲೈಟ್‌ ಕಾಣಿಸಿತ್ತು. ಒಳ ಹೋಗಿ ನೋಡಿದಾಗ ಬೀರು ಬಾಗಿಲು ತೆರೆದುಕೊಂಡಿತ್ತು. ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ ⇒ EXCLUSIVE | ಆಗುಂಬೆಗೆ ಆಸ್ಟ್ರೇಲಿಯಾದ ಭಾರತೀಯ ಹೈಕಮಿಷನರ್‌ ಭೇಟಿ, 3 ದಿನ ಅ‍ಧ್ಯಯನ ಪ್ರವಾಸ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment