ಆನವೇರಿಯಿಂದ ಬಸ್ಸಲ್ಲಿ ಬಂದು ಶಿವಮೊಗ್ಗ ಗುರುಪುರದ ಬಳಿ ತನ್ನ ಬ್ಯಾಗ್ ಪರಿಶೀಲಿಸಿದ ವ್ಯಕ್ತಿಗೆ ಆಘಾತ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

SHIVAMOGGA LIVE NEWS | 13 JANUARY 2023

SHIMOGA : ಬಂಗಾರದ ಆಭರಣಗಳನ್ನು ರಿಪೇರಿ ಮಾಡಿಸಲು ಶಿವಮೊಗ್ಗದ ಗಾಂಧಿ ಬಜಾರ್ ಗೆ ಬಸ್ಸಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಬ್ಯಾಗಿನಲ್ಲಿದ್ದ ಎರಡು ಪರ್ಸ್ (purse) ಕಳ್ಳತನವಾಗಿದೆ. ಅವುಗಳಲ್ಲಿ ಇದ್ದ ನಗದು ಮತ್ತು ಆಭರಣ ಕಳುವಾಗಿದೆ ಎಂದು ದೂರಲಾಗಿದೆ.

➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

Shimoga Live News update 3 million views

ಭದ್ರಾವತಿ ತಾಲೂಕು ಆನವೇರಿಯ ನಾಗರಾಜ್ ರಾಯ್ಕರ್ ಎಂಬುವವರ ಬ್ಯಾಗಿನಲ್ಲಿದ್ದ ಪಾರ್ಸ್ (purse) ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ.

ನಾಗರಾಜ್ ರಾಯ್ಕರ್ ಅವರ ಗ್ರಾಹಕರು ಕೊಟ್ಟಿದ್ದ ಒಡವೆಗಳನ್ನು ಒಂದು ಪರ್ಸಿನಲ್ಲಿಟ್ಟುಕೊಂಡಿದ್ದರು. ಮತ್ತೊಂದು ಪರ್ಸಿನಲ್ಲಿ 80 ಸಾವಿರ ರೂ. ನಗದು ಇಟ್ಟಿದ್ದರು. ಎರಡು ಪರ್ಸುಗಳನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ಶಿವಮೊಗ್ಗದ ಗಾಂಧಿ ಬಜಾರ್ ಗೆ ಬಸ್ಸಿನಲ್ಲಿ ತೆರಳುತ್ತಿದ್ದರು. ಗುರುಪುರದ ಬಳಿ ತಮ್ಮ ಪರಿಚಯಸ್ಥರ ಬಳಿ ಕೆಲಸವಿದ್ದರಿಂದ ಅಲ್ಲಿ ಬಂದು ಬ್ಯಾಗ್ ಪರಿಶೀಲಿಸಿದ್ದಾರೆ. ಆಗ ಎರಡು ಪರ್ಸುಗಳು ಇರಲಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ – ಲಾಯರ್ ಹೆಸರಲ್ಲಿ ವಿಶ್ವವಿದ್ಯಾಲಯಕ್ಕೆ ಆರ್.ಟಿ.ಐ ಅರ್ಜಿ, ಹಿಂಬರಹದಿಂದ ಹೊರಬಿತ್ತು ಅಸಲಿ ವಿಚಾರ

ರಿಪೇರಿ ಮತ್ತು ಪಾಲಿಶ್ ಮಾಡಿಸಿಲು ಕೊಟ್ಟಿದ್ದ ಸುಮಾರು 2.70 ಲಕ್ಷ ರೂ. ಮೌಲ್ಯದ 49 ಗ್ರಾಂ ಆಭರಣ, 80 ಸಾವಿರ ರೂ. ನಗದು ಕಳ್ಳತನವಾಗಿದೆ ಎಂದ ನಾಗರಾಜ್ ರಾಯ್ಕರ್ ದೂರಿನಲ್ಲಿ ತಿಳಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sidgandur Temple Jathre

Leave a Comment