ಶಿವಮೊಗ್ಗ : ಮಾಲೀಕರು ಊಟಕ್ಕೆ ತೆರಳಿದ್ದಾಗ ಹುಡುಗನೊಬ್ಬ ಅಂಗಡಿಯ (SHOP) ಒಳಗೆ ಬಗ್ಗಿ ಕ್ಯಾಶ್ ಡ್ರಾದಲ್ಲಿದ್ದ ಹಣ ಕಳ್ಳತನ ಮಾಡಿದ್ದಾನೆ. ಶಿವಮೊಗ್ಗ ನಗರದ ಸೀಗೆಹಟ್ಟಿಯ ಕೆಂಚರಾಯ ಬೀದಿಯ ಕಿರಾಣಿ ಅಂಗಡಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ » ಖಾಸಗಿ ಬಸ್, ಟಾಟಾ ಏಸ್ ಮುಖಾಮುಖಿ ಡಿಕ್ಕಿ, ಹತ್ತಕ್ಕು ಹೆಚ್ಚು ಕುರಿಗಳು ಸಾವು
ಅಂಗಡಿಯ ಮಾಲೀಕರಾದ ಸವಿತಾ ಅವರು ಮಧ್ಯಾಹ್ನ ಊಟಕ್ಕೆ ಮನೆಯ ಒಳಗೆ ತೆರಳಿದ್ದರು. ಆಗ ಅಂಗಡಿಯಿಂದ (SHOP) ಜೋರು ಶಬ್ದ ಕೇಳಿಸಿದೆ ಎಂದು ಮರಳಿದ್ದರು. ಅವರನ್ನು ಕಂಡು ಹುಡುಗನೊಬ್ಬ ಪರಾರಿಯಾಗಿದ್ದಾನೆ. ಸವಿತಾ ಅವರು ಅಂಗಡಿಗೆ ಬಂದಾಗ ಆ ಹುಡುಗ ಕ್ಯಾಶ್ ಡ್ರಾ ಕಡೆಗೆ ಬಗ್ಗಿ ಅದರೊಳಗೆ ಕೈ ಹಾಕಿದ್ದ. ಆಗ ಸವಿತಾ ಅವರು ಜೋರಾಗಿ ಕೂಗಿಕೊಂಡಿದ್ದು, ಆತ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ಮಧ್ಯಾಹ್ನ 2.57ರ ಹೊತ್ತಿಗೆ ಹುಡುಗ ಅಂಗಡಿಗೆ ಬಂದು ಕ್ಯಾಶ್ ಡ್ರಾದಲ್ಲಿದ್ದ ಹಣ ಕದ್ದೊಯ್ದಿದ್ದಾನೆ. ಸುಮಾರು 1500 ರೂ. ಹಣ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200