SHIVAMOGGA LIVE | 1 AUGUST 2023
HOSANAGARA : ಯುವಕರ (Youths) ಗುಂಪೊಂದು ನಡುರಾತ್ರಿ ಉಪನ್ಯಾಸಕರೊಬ್ಬರ ಮನೆಗೆ ನುಗ್ಗಲು ಯತ್ನಿಸಿದೆ. ಬಾಗಿಲು ಒಡೆದು ಒಳ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದೆ ಎಂದು ಆರೋಪಿಸಲಾಗಿದೆ.
ಹೊಸನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿರುವ ಉಪನ್ಯಾಸಕ ಅಂಜನ್ ಕುಮಾರ್ ಮನೆ ಮೇಲೆ 10 ರಿಂದ 15 ಯುವಕರು ದಾಳಿ ನಡೆಸಿದ್ದಾರೆ.
ಏನಿದು ಪ್ರಕರಣ?
ಜು.29ರ ರಾತ್ರಿ 12 ಗಂಟೆ ಹೊತ್ತಿಗೆ ಉಪನ್ಯಾಸಕ ಅಂಜನ್ ಕುಮಾರ್ ಮನೆ ಕಾಂಪೌಂಡ್ ಒಳಗೆ ಯುವಕರ ಗುಂಪು ಅತಿಕ್ರಮ ಪ್ರವೇಶ ಮಾಡಿದೆ. ಮನೆಯೊಳಗೆ ಮುಸ್ಲಿಂ ಯುವತಿಯನ್ನು ಇರಿಸಿಕೊಂಡಿದ್ದೀಯ ಬಾಗಿಲು ತೆಗಿ ನಾವು ನೋಡಬೇಕು ಎಂದು ಉಪನ್ಯಾಸಕನಿಗೆ ಒತ್ತಾಯಿಸಿದ್ದಾರೆ. ಉಪನ್ಯಾಸಕ ನಿರಾಕರಿಸಿದಾಗ, ಬಾಗಿಲು ಒಡೆದು ಒಳಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಯುವಕರ ಗುಂಪು ಬೆದರಿಕೆ ಒಡ್ಡಿದೆ ಎಂದು ಉಪನ್ಯಾಸಕ ದೂರಿನಲ್ಲಿ ಆರೋಪಿಸಿದ್ದಾರೆ.
ಮಾಲೀಕ, ಪೊಲೀಸರಿಂದ ಪರಿಶೀಲನೆ
ಯುವಕರ (Youths) ಗುಂಪು ದಾಳಿ ನಡೆಸಿರುವ ವಿಚಾರ ತಿಳಿಯುತ್ತಿದ್ದಂತೆ ಮನೆ ಮಾಲೀಕ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಯುವಕರ ಆರೋಪದ ಹಿನ್ನೆಲೆ ಉಪನ್ಯಾಸಕ ಅಂಜನ್ ಕುಮಾರ್ ಅವರ ಮನೆಯ ಪರಿಶೀಲನೆ ನಡೆಸಿದರು. ಮನೆಯಲ್ಲಿ ಯಾರು ಇರಲಿಲ್ಲ. ಈ ಹಿನ್ನೆಲೆ ಯುವಕರಿಗೆ ಬುದ್ದಿ ಹೇಳಿ ಕಳುಹಿಸಿದ್ದಾರೆ. ಈ ವೇಳೆ ಯುವಕರು ಪುನಃ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಉಪನ್ಯಾಸನ ದೂರಿನಲ್ಲಿ ಆಪಾದಿಸಿದ್ದಾರೆ.
ಹೊಸನಗರ ಠಾಣೆಯಲ್ಲಿ ಮಂಜುನಾಥ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200