ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಇನ್ನೊಬ್ಬರ ತಪ್ಪು ಹುಡುಕಲು ತುಂಬಾ ಬುದ್ದಿವಂತಿಕೆ ಬೇಕಾಗಿಲ್ಲ. ಇನ್ನೊಬ್ಬರ ಒಳ್ಳೆಯತನ ಮೆಚ್ಚಿಕೊಳ್ಳಲು ದೊಡ್ಡ ಹೃದಯ ಬೇಕು.
ಮೇಷ
ದಿನಚರಿ ಬದಲಾವಣೆ ಮಾಡಿಕೊಳ್ಳಬೇಕು. ಕಷ್ಟವಾದರೂ ಅದಕ್ಕೆ ಹೊಂದಿಕೊಳ್ಳಬೇಕು. ಗುರು ಹಿರಿಯರಲ್ಲಿ ಗೌರವ ತೋರಿಸಿ. ವ್ಯವಹಾರದ ಸಂದರ್ಭ ಎಚ್ಚರ ವಹಿಸಿ.
ವೃಷಭ
ಮುಜುಗರದ ಕಾರಣಕ್ಕೆ ಉತ್ತಮ ಅವಕಾಶ ಕೈತಪ್ಪಲಿದೆ. ಪರರನ್ನು ಪೀಡಿಸುವ ಜನರ ಜೊತೆಗಿನ ಸಂಭಾಷಣೆಯಿಂದ ಪ್ರಯೋಜನ ಆಗುವುದಿಲ್ಲ.
ಮಿಥುನ
ಮಾಡಿದ ಕೆಲಸದಲ್ಲಿ ಗುಣಮಟ್ಟದ ಕೊರತೆಯಿಂದ ಮನಸಿಗೆ ಸಮಾಧನ ಅನಿಸುವುದಿಲ್ಲ. ಪ್ರಚೋದನೆಗೆ ಒಳಗಾಗದೆ ಉತ್ತಮವಾಗಿ ಕೆಲಸ ಮಾಡಿ.
ಕರ್ಕಾಟಕ
ಕನಸನ್ನು ನನಸು ಮಾಡಿಕೊಳ್ಳುವ ಭರದಲ್ಲಿ ಹಣ ವ್ಯಯ ಮಾಡದಿರಿ. ವ್ಯವಸಾಯದಿಂದ ಹೆಚ್ಚು ಆದಾಯ ಕಂಡುಕೊಳ್ಳುವಿರಿ.
ಸಿಂಹ
ಸಿಹಿ ತಿಂಡಿ, ತಿನುಸುಗಳಿಂದ ದೂರವಿರಿ. ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿರುವವರಿಗೆ ಉತ್ತಮ ಅವಕಾಶವಿದೆ.
ಕನ್ಯಾ
ಮನೆ ಕಾರ್ಯಕ್ರಮದ ಕಾರಣಕ್ಕೆ ನಿತ್ಯದ ವೇಳಾಪಟ್ಟಿ ಬದಲಾಗಲಿದೆ. ನಿದ್ರಾಹೀನತೆ ಸಮಸ್ಯೆಯಿಂದ ಕೆಲಸದ ಸ್ಥಳದಲ್ಲಿ ಸಮಸ್ಯೆಯಾಗಲಿದೆ.
ತುಲಾ
ಉದ್ಯೋಗದಲ್ಲಿ ನಿರೀಕ್ಷಿತ ಫಲಿತಾಂಶಕ್ಕಾಗಿ ಹರಸಾಹಸ ಪಡಬೇಕಾಗುತ್ತದೆ. ಯಾವುದೆ ವಿಷಯದಲ್ಲಿ ಅಸಮರ್ಪಕ ನಿರ್ಧಾರಗಳನ್ನು ಕೈಗೊಳ್ಳದಿರಿ.
ವೃಶ್ಚಿಕ
ದೇವರ ಅನುಗ್ರಹದಿಂದ ಜನ ಮತ್ತು ಧನ ಸಹಾಯ ದೊರೆಯಲಿದೆ. ಸ್ವ ಉದ್ಯೋಗಿಗಳಿಗೆ ಅನುಕೂಲ.
ಧನು
ವಿದ್ಯಾಭ್ಯಾಸದ ಖರ್ಚು, ವೆಚ್ಚ ಹೆಚ್ಚಲಿದೆ. ಕುಟುಂಬದಲ್ಲಿ ಆರ್ಥಿಕ ಸಮಸ್ಯೆ. ಸಂಜೆ ವೇಳೆಗೆ ಸಂತೋಷದ ಸುದ್ದಿ ದೊರೆಯಲಿದೆ.
ಮಕರ
ಮಕ್ಕಳಿಗಾಗಿ ತ್ಯಾಗ ಮಾಡಬೇಕು. ನಾನಾ ಕಾರಣಕ್ಕೆ ಮನಸಿನ ನೆಮ್ಮದಿ ಹಾಳಾಗಲಿದೆ. ಸಹೋದರ ಸಂಬಂಧಿಯ ದುಃಖಕ್ಕೆ ಹೆಗಲಾಗುವಿರಿ.
ಕುಂಭ
ಇತರರ ಸಂತೋಷಕ್ಕಾಗಿ ನಿಮ್ಮ ಶಕ್ತಿ ವ್ಯಯಿಸಬೇಡಿ. ವಿದ್ಯುತ್ ಉಪಕರಣ ಮಾರಾಟದಿಂದ ಲಾಭ. ನೈಸರ್ಗಿಕ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳಿ.
ಮೀನ
ಮನಸ್ಸಿಗೆ ಬಂದ ಹಾಗೆ ಹಣ ಖರ್ಚು ಮಾಡಬೇಡಿ. ಪುಸ್ತಕಗಳ ಓದಿನಿಂದ ಉತ್ತಮ ಭವಿಷ್ಯವಿದೆ.
LATEST NEWS
- ಬೆಳಗ್ಗೆ ಲೇಔಟ್ಗೆ ಬಂದ ಲೆಕ್ಚರರ್ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

About The Editor
ನಿತಿನ್ ಆರ್.ಕೈದೊಟ್ಲು
















