DINA BHAVISHYA, 2 FEBRUARY 2025
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಮೇಷ : ಸೂಕ್ತ ರೀತಿಯಲ್ಲಿ ಹಣಕಾಸು ನಿರ್ವಹಣೆ ಮಾಡಬೇಕು. ಸಂಪೂರ್ಣ ತಿಳಿವಳಿಕೆ ಗಳಿಸದೆ ವ್ಯಾಪಾರ, ವಹಿವಾಟಿನಲ್ಲಿ ಹೂಡಿಕೆ ಮಾಡುವುದು ಬೇಡ.
ವೃಷಭ : ಒತ್ತಡ ನಿವಾರಣೆಗೆ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಹಾಸ್ಯದ ಮಾತಿನಿಂದ ಸುತ್ತಲು ಇದ್ದವರಲ್ಲಿ ಉಲ್ಲಾಸ ಮೂಡಿಸಿ.
ಮಿಥುನ : ವಾದಗಳಿಂದ ಸಾಧಿಸುವುದಕ್ಕಿಂತಲು ಕಳೆದುಕೊಳ್ಳುವುದು ಹೆಚ್ಚು. ವಾದಕ್ಕಿಳಿಯುವ ಮುನ್ನ ಮರು ಯೋಚಸುವುದು ಸೂಕ್ತ. ಪ್ರೀತಿಪಾತ್ರರೊಂದಿಗಿನ ಮಾತಿನಿಂದ ಸಂತೋಷ.
ಕರ್ಕಾಟಕ : ಕಷ್ಟಕಾಲಕ್ಕೆ ಅನುಕೂಲವಾಗುವಂತೆ ಹಣ ಸಂಗ್ರಹಿಸಿಡುವುದು ಸೂಕ್ತ. ಮುಂದೆ ಉಪಯೋಗ ಆಗಲಿದೆ. ಸೃಜನಶೀಲ ವ್ಯಕ್ತಿತ್ವದಿಂದ ಅನಿರೀಕ್ಷಿತ ಫಲ ಸಿಗಲಿದೆ.
ಸಿಂಹ : ಅನುಭವ ಮತ್ತು ಜ್ಞಾನ ಹಂಚಿಕೊಂಡರೆ ಮನ್ನಣೆ ಸಿಗುವುದು ನಿಶ್ಚಿತ. ಒತ್ತಡ ನಿವಾರಣೆಗೆ ಆಸಕ್ತಿಕರ ವಿಚಾರ ಓದುವುದು ಸೂಕ್ತ.

ಕನ್ಯಾ : ನಿತ್ಯ ವ್ಯಾಯಾಮ ಮಾಡುವುದು ಆರೋಗ್ಯಕರ. ಮನಸನ್ನು ಮುದವಾಗಿ ಇಡಲಿದೆ. ನಿತ್ಯ ವ್ಯಾಯಾಮದ ಕಡೆ ಯೋಚನೆ ಸೂಕ್ತ. ದುಡುಕಿನ ನಿರ್ಧಾರಿಂದ ಸಮಸ್ಯೆ ಉಂಟಾಗಲಿದೆ.
ತುಲಾ : ಕುಟುಂಬ ಸದಸ್ಯರ ಜೊತೆ ಸೌಹಾರ್ದ ವಾತಾವರಣ ಸೃಷ್ಟಿಸಿಕೊಳ್ಳಬೇಕಿದೆ. ಅನಗತ್ಯ ಅಲೋಚನೆಗಳಿಂದ ನೆಮ್ಮದಿ ಭಂಗ.
ವೃಶ್ಚಿಕ : ಧ್ಯಾನದಿಂದ ನೆಮ್ಮದಿ ಮತ್ತು ಮಾನಸಿಕ ಶಕ್ತಿ ವೃದ್ಧಿಯಾಗಲಿದೆ. ಹಣಕಾಸು ದುರ್ಬಲ. ಹೆಚ್ಚು ಚಿಂತೆ ಮಾಡಬೇಕಾಗುತ್ತದೆ.
ಧನು : ಹಣ ಉಳಿಸುವ ಪ್ರಯತ್ನ ವಿಫಲ. ಸಣ್ಣಪುಟ್ಟದ್ದಕ್ಕು ದೊಡ್ಡ ಮಟ್ಟದ ಖರ್ಚು. ಮಾನಸಿಕ ನೆಮ್ಮದಿ ಇರುವುದಿಲ್ಲ. ಮಕ್ಕಳಿಗೆ ಅನಾರೋಗ್ಯ.
ಮಕರ : ಕೆಲಸದ ಸ್ಥಳದಲ್ಲಿ ಮಹತ್ವದ ಬದಲಾವಣೆಯಿಂದ ಅನುಕೂಲ. ಹಣ ಹೂಡಿಕೆಯತ್ತ ಆಸಕ್ತಿ ಹೆಚ್ಚಳ.
ಕುಂಭ : ಓದು ಮತ್ತು ಸಂಗೀತದಿಂದ ಮನಸಿಗೆ ಮುದ. ಚೈತನ್ಯ ಹೆಚ್ಚಲಿದೆ. ಉದ್ಯೋಗ ಮತ್ತು ಕುಟುಂಬದಲ್ಲಿ ಉಲ್ಲಾಸ.

ಮೀನ : ಸಹೋದ್ಯೋಗಿಗಳ ಜೊತೆಗೆ ಬಾಂಧವ್ಯ ಉತ್ತಮವಾಗಿದ್ದರೆ ಕೆಲಸ ಸುಲಭ. ಆತುರದ ನಿರ್ಧಾರ, ಹೆಚ್ಚಿನ ನಂಬಿಕೆಗಳು ಭವಿಷ್ಯದಲ್ಲಿ ಕೆಡುಕು ಉಂಟು ಮಾಡಲಿವೆ.
ಇದನ್ನೂ ಓದಿ – ಭದ್ರಾ ಜಲಾಶಯದಿಂದ ನದಿಗೆ 5800 ಕ್ಯೂಸೆಕ್ ನೀರು, ಯಾವಾಗ? ಕಾರಣವೇನು?
LATEST NEWS
- ಮನೆಯನ್ನೇ ಬಂದೂಕು ಕಾರ್ಖಾನೆ ಮಾಡಿಕೊಂಡಿದ್ದ ಕಾರ್ಪೆಂಟರ್, ಎಲ್ಲಿ? ಎಷ್ಟು ಬಂದೂಕು ಸಿಕ್ತು?

- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





