DINA BHAVISHYA | 27 JANUARY 2025
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಮೇಷ : ಸಂಪಾದನೆ ಮಧ್ಯಮ. ಮಕ್ಕಳ ಬಗ್ಗೆ ಗಮನವಿರಲಿ. ಆರೋಗ್ಯದಲ್ಲಿ ಏರುಪೇರು. ಅನಗತ್ಯ ಧನವ್ಯಯ. ಸುಬ್ರಹ್ಮಣ್ಯನನ್ನ ಆರಾಧಿಸಿ. ಶುಭ ಸಂಖ್ಯೆ: 1-5-8-9
ವೃಷಭ : ಗುರುವಿನ ಬಲವಿಲ್ಲ. ಯತ್ನ ಕಾರ್ಯದಲ್ಲಿ ವಿಫಲ. ಪಂಚಮದ ಕೇತು ತೊಂದರೆ ಮಾಡಿಯಾನು. ತಾಳ್ಮೆ ಯಿಂದ ಇರಿ. ಗಣೇಶ ಸ್ತೋತ್ರ ಪಠಿಸಿ. ಶುಭ ಸಂಖ್ಯೆ : 2-7-10-11
ಮಿಥುನ : ನೀವು ನವಮದ ಶನಿಯಿಂದ ಭಾಗ್ಯೋದಯವನ್ನು ನಿರೀಕ್ಷಿಸಬೇಡಿ. ಸಂಬಂಧದಿಂದ ಮಾತಿನ ಗಾಯ. ಆಲಸ್ಯವನ್ನು ದೂರವಿಡಿ. ಶುಭಫಲ ಖಂಡಿತ ಲಭ್ಯ. ಮಹಾದೇವನಿಗೆ ಪೂಜೆ ಸಲ್ಲಿಸಿ. ಶುಭ ಸಂಖ್ಯೆ : 5-6-10
ಕರ್ಕ : ಶುಭಫಲವಾದ ರಾಶಿ ನಿಮ್ಮದು. ಧನಾಗಮನ. ಎಂಟರ ಶನಿ ಒಳ್ಳೆಯದನ್ನು ಮಾಡುತ್ತಾನೆ. ಗಣೇಶನ ಪ್ರಾರ್ಥನೆಯಿಂದ ಅನುಕೂಲ. ಶುಭ ಸಂಖ್ಯೆ : 4-5-1
ಸಿಂಹ : ನಿಮ್ಮ ರಾಶಿಗೆ ಇಂದು ಆನೆ ಬಲ. ಮುಟ್ಟಿದ್ದೆಲ್ಲಾ ಚಿನ್ನ. ಆದರೆ ಶತೃವಿನ ಬಗ್ಗೆ ಎಚ್ಚರವಿರಲಿ. ಜೊತೆಗಿರುವವರೆ ಶತೃ. ದುರ್ಗಾದೇವಿಗೆ ನಮಸ್ಕರಿಸಿ. ಶುಭ ಸಂಖ್ಯೆ : 5-6-9-11

ಕನ್ಯಾ : ಜೊತೆಗಿರುವ ಶತೃ ಇನ್ನೂ ದೂರವಾಗಿಲ್ಲ. ನಿಮ್ಮ ಮಾತು ನಿಮ್ಮ ನಡೆ ಬೇರೆ ಬೇರೆ ಆಗುತ್ತದೆ. ಸಪ್ತದ ರಾಹು ಅಶುಭನಾಗಿದ್ದಾನೆ. ಎಚ್ಚರ. ನಾಗನಿಗೆ ಹಾಲಿನ ಅಭಿಷೇಕ ಮಾಡಿಸಿ. ಶುಭ ಸಂಖ್ಯೆ : 7-10-11-03
ತುಲಾ : ಆರೋಗ್ಯದ ಬಗ್ಗೆ ಗಮನವಿರಲಿ. ಚಿಂತೆ ನಿಮ್ಮನ್ನು ಕಾಡುತ್ತದೆ. ಹಣ ಆಗಮನದ ನಿರೀಕ್ಷೆ ಖುಷಿ ನೀಡುತ್ತದೆ. ಈ ದಿನ ಬೆಲ್ಲ ತೊಗರಿ ದಾನ ಮಾಡಿ. ಶುಭವಿದೆ. ಶುಭ ಸಂಖ್ಯೆ : 8-9-4
ವೃಶ್ಚಿಕ : ಮಂಗಳ ಕಾರ್ಯಕ್ಕೆ ಪ್ರಶಸ್ತ ದಿನ. ವಿವಾಹ ಭಾಗ್ಯ ಕರುಣಿಸುವ ದಿನ. ದುರ್ಗಾ ದೇವಿಯನ್ನ ಸ್ತುತಿಸಿ. ಶುಭ ಸಂಖ್ಯೆ : 8-1-5
ಧನು : ನಿಮ್ಮ ದಾಯಾದಿಗಳಿಂದ ಸಮಸ್ಯೆ. ಕುಟುಂಬದಲ್ಲೂ ವಿರಸ. ಒಂಬತ್ತರ ಶುಕ್ರ ತೊಂದರೆ ನೀಡಿಯಾನು ತಾಳ್ಮೆ ಆಗತ್ಯ. ಶುಭವಿದೆ. ಶುಭ ಸಂಖ್ಯೆ : 9-12-04
ಮಕರ : ನಿಮ್ಮ ರಾಶಿಗೆ ಈದಿನ ಒಳ್ಳೆಯದಿದೆ. ನಿಧಾನವಾದ ಕೆಲಸ ಇಂದಿನಿಂದ ಚೇತರಿಗೆ ಕಾಣುತ್ತದೆ. ಆರ್ಥಿಕ ಚೇತರಿಕೆ. ಈಶ್ವರನ ಆರಾಧನೆ ಬಹಳ ಮುಖ್ಯ. ಶುಭ ಸಂಖ್ಯೆ: 10-11-02
ಕುಂಭ : ನೆನ್ನೆಯ ಚಾಲೀ ಮುಂದುವರೆಯಬಹುದು. ಬೇಸರ ಬೇಡ. ಮಹಾದೇವ ನಿಮ್ಮ ಕೆಲಸಕ್ಕೆ ಅನುಗ್ರಹ ನೀಡುತ್ತಾನೆ. ಶಿವ ಪಂಚಾಕ್ಷರ ಮಂತ್ರ ಜಪಿಸಿ. ಅನುಗ್ರಹ ಜಾಸ್ತಿ. ಶುಭ ಸಂಖ್ಯೆ : 11-03-06
ಮೀನ : ಬುದ್ಧಿಯ ಗೊಂದಲದಿಂದ ನಿಮಗೆ ಭ್ರಮೆ ಅನ್ನಿಸ ಬಹುದು. ಯೋಗಕ್ಕೋಸ್ಕರ ಕಾಯುವ ರಾಶಿ ನಿಮ್ಮದು. ಸುಬ್ರಹ್ಮಣ್ಯನಿಗೆ ಪಂಚಾಮೃತ ಅಭಿಷೇಕ ಮಾಡಿಸಿ. ಶುಭ ಸಂಖ್ಯೆ : 12-1-8-5
ಇದನ್ನೂ ಓದಿ ⇒ ನಮ್ಮೂರಲ್ಲೇ ರೆಡಿಯಾಗುತ್ತವೆ ಈ ಬಟ್ಟೆ, ಇದನ್ನು ಧರಿಸಿದರೆ ಆರೋಗ್ಯವು ಉತ್ತಮವಾಗಿರುತ್ತೆ, ಎಲ್ಲಿದೆ ಅಂಗಡಿ?
LATEST NEWS
- ವರ್ಷ ಪೂರ್ತಿ ರಂಗ ಚಟುವಟಿಕೆ, ಉದ್ಘಾಟನೆಯ ದಿನಾಂಕ ಪ್ರಕಟ, ಏನಿದು ಕಾರ್ಯಕ್ರಮ?

- ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ಥಿತ್ವಕ್ಕೆ, ಉದ್ದೇಶವೇನು? ರಾಜ್ಯಾಧ್ಯಕ್ಷೆ ಏನೆಲ್ಲ ಹೇಳಿದರು?

- ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ಫೆಬ್ರವರಿ 7ರಂದು ಇಡೀ ದಿನ ಕರೆಂಟ್ ಇರಲ್ಲ, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್

- ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ತಗ್ಗಿದ ತಪಮಾನ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ?

- ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ಪಂದ್ಯ ಗೆದ್ದವರಿಗೆ ಎರಡು ಟಗರು

About The Editor
ನಿತಿನ್ ಆರ್.ಕೈದೊಟ್ಲು





