ದಿನ ಭವಿಷ್ಯ | 6 ಜೂನ್‌ 2023 | ಯಾವ್ಯಾವ ರಾಶಿಯವರಿಗೆ ಈ ದಿನ ಹೇಗಿದೆ?

ಶಿವಮೊಗ್ಗ
LIVE

DINA-BHAVISHYA

Mesha

ಮೇಷ

ಸ್ನೇಹಿತನಿಂದ ವ್ಯಾಪಾರದಲ್ಲಿ ಅನುಕೂಲ. ಬಿಡುವಿಲ್ಲದ ಕೆಲಸದ ನಡುವೆಯು ನಿಮಗಾಗಿ ಸಮಯ ಹೊಂದಿಸಿಕೊಳ್ಳುವುದು ಉಚಿತ. ಹಣದಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸಂಗಾತಿಯೊಂದಿಗೆ ಮುನಿಸು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:


Vrushabaವೃಷಭ

ಮನಸಿನ ಶಾಂತಿಗಾಗಿ ಆಧ್ಯಾತ್ಮದ ಮೊರೆ ಹೋಗಿ. ಭೂಮಿ ಮಾರಾಟ ಸಫಲ. ನಿರೀಕ್ಷೆಗಿಂತಲು ಹೆಚ್ಚು ಲಾಭ. ಪಾಲುದಾರಿಕೆ ವ್ಯವಹಾರದಲ್ಲಿ ಸ್ವಲ್ಪ ಕಸಿವಿಸಿ. ಸಂಗಾತಿಗೆ ಅನಾರೋಗ್ಯ.


Mithunaಮಿಥುನ

ಧಾರ್ಮಿಕ ಚುಟುವಟಿಕೆಯಲ್ಲಿ ಭಾಗಿ. ಸ್ನೇಹಿತರೊಂದಿಗೆ ಸಮಯ ಕಳೆಯುತ್ತೀರಿ. ಅಪವ್ಯಯದ ಕುರಿತು ಎಚ್ಚರವಿರಲಿ. ವಿದ್ಯಾರ್ಥಿಗಳು ಓದಿನೆಡೆ ಇನ್ನಷ್ಟು ಹೆಚ್ಚು ಗಮನ ಹರಿಸಬೇಕು.


Karkatakaಕರ್ಕಾಟಕ

ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತೀರಿ. ಸ್ವಂತ ನಿರ್ಧಾರ ಮಾಡಿ ದೃಢವಾಗಿ ಹೆಜ್ಜೆ ಇಡಿ. ಸ್ನೇಹಿತರು ಸಾಲಕ್ಕೆ ಬೇಡಿಕೆ ಇಡುತ್ತಾರೆ. ಹಠಾತ್‌ ಪ್ರಯಾಣ ಕೈಗೊಳ್ಳಬೇಕಾಗುತ್ತದೆ. ಪ್ರಯಾಣದಿಂದ ಅನುಕೂಲವಾಗಲಿದೆ.


Simhaಸಿಂಹ

ಅನಿರೀಕ್ಷಿತವಾಗಿ ಹಣ ಕೈಗೆ ತಲುಪಲಿದ್ದು, ನಿಮ್ಮ ಬಹುದಿನದ ಸಮಸ್ಯೆ ಬಗೆಹರಿಯಲಿದೆ. ಅನುಭವಿಗಳ ಜೊತೆಗಿನ ಒಡನಾಟದದಿಂದ ಉದ್ಯೋಗದಲ್ಲಿ ಲಾಭ. ಉತ್ತಮ ವಿಚಾರ, ಚಟುವಟಿಕೆಯಿಂದ ನಿಮ್ಮ ಆದಾಯ ಹೆಚ್ಚಿಸಲಿದೆ.


Kanyaಕನ್ಯಾ

ಒತ್ತಡದ ದಿನ. ವ್ಯವಹಾರ ಮತ್ತು ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಲಿದೆ. ಸ್ನೇಹಿತನಿಂದ ನೆರವು ದೊರೆಯಲಿದೆ. ಧ್ಯಾನ ಮಾಡಿ ಶಾಂತವಾಗಿರಲು ಪ್ರಯತ್ನಿಸಿ.


Thulaತುಲಾ

ಉದ್ಯೋಗ ದೊರೆಯಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹೊಸ ಹೆಜ್ಜೆ ಇಡುವ ಮುನ್ನ ಎರಡು ಬಾರಿ ಯೋಚಿಸುವುದು ಉತ್ತಮ. ಸಮಯ ವ್ಯರ್ಥ ಮಾಡಬೇಡಿ. ಪ್ರತಿ ನಿಮಿಷಕ್ಕೂ ದೊಡ್ಡ ಬೆಲೆ ತೆರಬೇಕಾಗುತ್ತದೆ.


Vrushikaವೃಶ್ಚಿಕ

ಮುಂಗೋಪ. ಸಣ್ಣಪುಟ್ಟ ವಿಚಾರಕ್ಕು ಉದ್ವೇಗಕ್ಕೊಳಗಾಗುತ್ತೀರಿ. ಶಾಂತಿಯುತವಾಗಿದ್ದರೆ ಉತ್ತಮ. ಹಣದ ಅಪವ್ಯಯದಿಂದ ದಿನದ ಅಂತ್ಯದಲ್ಲಿ ಮನಸಿಗೆ ನೋವು.


WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

Dhanuಧನು

ಮನಸು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಇದರಿಂದ ನೀವು ಅಂದುಕೊಂಡ ಕೆಲಸಗಳು ನೆರವೇರಲಿದೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು.


Makaraಮಕರ

ಕೆಲಸದ ಸ್ಥಳದಲ್ಲಿ ಪ್ರಶಂಸೆ ಲಭಿಸಲಿದೆ. ಉದ್ಯಮಿಗಳು ಹಿರಿಯರ ಮಾರ್ಗದರ್ಶನ ಪಡೆಯುವುದು ಸೂಕ್ತ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತೋಹಾರಿ ಬೆಳವಣಿಗೆ.


Kumbaಕುಂಭ

ಪ್ರೀತಿಪಾತ್ರರಿಂದ ಸ್ವಲ್ಪ ಕಿರಿಕಿರಿ. ಅತಿಯಾದ ಆಹಾರ ಸೇವನೆಯಿಂದ  ಆರೋಗ್ಯದಲ್ಲಿ ಸಮಸ್ಯೆ. ಮಾನಸಿಕ ಒತ್ತಡ.


Meenaಮೀನ

ಕೆಲಸದ ಸ್ಥಳದಲ್ಲಿ ಪ್ರತಿಸ್ಪರ್ಧಿಗಳಿಗಿಂತಲೂ ಉತ್ತಮವಾಗಿರುತ್ತೀರಿ. ಹಣವನ್ನು ಕೂಡಿಡಲು ಆರಂಭಿಸಿ, ಮುಂದಿನ ಜೀವನಕ್ಕೆ ಅನುಕೂಲವಾಗಲಿದೆ. ಮನೆಯ ಸದಸ್ಯರೊಂದಿಗೆ ಪ್ರೀತಿಯಿಂದ ಇರುವುದು ಸೂಕ್ತ.


DINAKONDU PARIHARA jpgಹೊಸ್ತಿಲ ಮೇಲೆ ನಿಲ್ಲುವುದು ಸರಿಯಾದ ಕ್ರಮವಲ್ಲ. ಅದರಲ್ಲಿಯು ಮನೆಯ ಮುಂಬಾಗಿಲಿನ ಹೊಸ್ತಿಲ ಮೇಲೆ ನಿಲ್ಲಬೇಡಿ. ಬೇರೆ ಯಾರೂ ನಿಲ್ಲದ ಹಾಗೆ ನೋಡಿಕೊಳ್ಳಿ. ಹೊಸ್ತಿಲ ಮೇಲೆ ಕಾಲಿಡದೆ, ನಿಲ್ಲದೆ ಇದ್ದರೆ ಮನೆಯವರಿಗೆ ಶ್ರಯಸ್ಸು ಲಭಿಸಲಿದೆ.

Shivamogga Live Reach

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment