SHIVAMOGGA LIVE NEWS | 26 ಮಾರ್ಚ್ 2022
ವಿದ್ಯುತ್ ಮಾರ್ಗದ ರಿಪೇರಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ಲೈನ್ಮನ್ ಒಬ್ಬರು ಮೃತಪಟ್ಟಿದ್ದಾರೆ. ಸೊರಬ ತಾಲೂಕು ದೂಗೂರು ಬಳಿ ಘಟನೆ ಸಂಭವಿಸಿದೆ.
ಉಳವಿ ಮೆಸ್ಕಾಂ ಶಾಖೆ ಲೈನ್ಮನ್, ಗದಗ ಜಿಲ್ಲೆ ಗಜೇಂದ್ರಗಡದ ರವಿ ಬೀರಪ್ಪ ಚವ್ಹಾಣ್ (32) ಮೃತ ದುರ್ದೈವಿ.
ತಾಲೂಕಿನ ದೂಗೂರು ಗ್ರಾಮದಲ್ಲಿ ಕೆಲಸ ಮಾಡುವಾಗ ವಿದ್ಯುತ್ ತಗುಲಿ ಲೈನ್ಮನ್ ಮೃತಪಟ್ಟಿದ್ದಾರೆ. ಶುಕ್ರವಾರ ಸಂಜೆ ದೂಗೂರು ಬಳಿ 11 ಕೆವಿ ವಿದ್ಯುತ್ ಮಾರ್ಗದ ಕೆಲಸ ಮಾಡುವಾಗ ವಿದ್ಯುತ್ ತಗುಲಿದ್ದು ತಕ್ಷಣ ಸಾಗರ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200