ಕೂಡಲೇ ಹಕ್ಕುಪತ್ರ ನೀಡಬೇಕು
SHIMOGA : ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು 18 ವರ್ಷಗಳಾದರೂ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರ ನೀಡುತ್ತಿಲ್ಲ. ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಸೊರಬ ತಾಲೂಕು ಬೊಮ್ಮನಹಳ್ಳಿ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 3 ಲಕ್ಷ ರೈತರ ಅರ್ಜಿ ಕಾನೂನು ಬಾಹಿರ ವಜಾ ಮಾಡಲಾಗಿತ್ತು. ಈ ನಡೆ ಸಿಂಧುವಲ್ಲ ಎಂದು ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಸುಪ್ರೀಂ ಕೋರ್ಟ್ ಆದೇಶದಂತೆ ಅರಣ್ಯ ಹಕ್ಕು ಕಾಯ್ದೆ ಉಲ್ಲಂಘನೆ ಎಂದು ಮತ್ತೆ ಕೆಲವು ಅರ್ಜಿಗಳನ್ನು ವಜಾಗೊಳಿಸಲಾಯಿತು ಎಂದು ದೂರಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ತೀ.ನಾ. ಶ್ರೀನಿವಾಸ್, ಸಂತೋಷ್, ಕೃಷ್ಣಪ್ಪ ದ್ಯಾವಪ್ಪ, ಮಂಜಪ್ಪ, ದತ್ತಪ್ಪ ಚಿನ್ನಪ್ಪ, ನಾರಾಯಣ್, ನಾಗರಾಜ್ ಮತ್ತಿತರರು ಇದ್ದರು.
ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ ⇓