SHIVAMOGGA LIVE | 16 JULY 2023
SHIMOGA : ನೂತನ ಶಾಸಕಿ ಮತ್ತು ವಿಧಾನಸಭೆಯ ಜೆಡಿಎಸ್ ಪಕ್ಷದ ಉಪ ನಾಯಕಿ ಶಾರದಾ ಪೂರ್ಯಾನಾಯ್ಕ್ ಅವರಿಗೆ ಜೆಡಿಎಸ್ ಪಕ್ಷದ ವತಿಯಿಂದ ಅಭಿನಂದನೆ (Felicitation) ಸಲ್ಲಿಸಲಾಯಿತು.
ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರ ಪರವಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಅವರು ಅಭಿನಂದನೆ (Felicitation) ಸಲ್ಲಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆ ಇತ್ತು. ಆದರೆ ಒಂದು ಸ್ಥಾನ ಪಡೆದಿದ್ದೇವೆ. ಸೋತವರು ಧೃತಿಗೆಡುವಂತಿಲ್ಲ. ನಮ್ಮ ಬಳಿ ಬರುವ ಜನರ ಕೆಲಸವನ್ನು ಮಾಡಿಕೊಡಬೇಕಿದೆ. ಮುಂದೆ ಅಧಿಕಾರಕ್ಕೆ ಬರಲು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರಬೇಕು.ಎಂ.ಶ್ರೀಕಾಂತ್, ಜೆಡಿಎಸ್ ಜಿಲ್ಲಾಧ್ಯಕ್ಷ
ಫಲಿತಾಂಶದ ಕುರಿತು ನಮ್ಮ ಕನಸು, ನಿರೀಕ್ಷೆ ಬೇರೆಯದ್ದೆ ಇತ್ತು. ಆದರೆ ಕುಮಾರಸ್ವಾಮಿಯವರ ಧೈರ್ಯ ಗಮನಿಸಿದರೆ ಸಮಾಧಾನವಾಯಿತು. ಸದನದಲ್ಲಿ ಕುಮಾರಸ್ವಾಮಿ ಅವರೆ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡುತ್ತಿದ್ದಾರೆ. ಅನೇಕ ಹಿರಿಯ ನಾಯಕರಿದ್ದರು ಉಪ ನಾಯಕಿ ಜವಾಬ್ದಾರಿ ವಹಿಸಿದ್ದಾರೆ. ಹಿರಿಯ ಮುಖಂಡರು ಕೂಡ ತಮ್ಮ ಸಹಕಾರವಿರಲಿದೆ ಎಂದು ತಿಳಿಸಿದ್ದಾರೆ.ಶಾರದಾ ಪೂರ್ಯಾನಾಯ್ಕ್, ಶಿವಮೊಗ್ಗ ಗ್ರಾಮಾಂತರ ಶಾಸಕಿ
ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರಿಗೆ ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. pic.twitter.com/3VTchVq4RY
— Shivamogga Live (@liveshivamogga) July 16, 2023
ಶಾರದಾ ಪೂರ್ಯಾನಾಯ್ಕ್ ಅನುಭವಿ ರಾಜಕಾರಣಿ. ಜಿಲ್ಲಾ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿದ್ದವರು. ಸದನದಲ್ಲಿ ಇನ್ನು ಅವರು ಆರ್ಭಟಿಸಿಲ್ಲ. ಇನ್ಮುಂದೆ ಧ್ವನಿ ಎತ್ತಲಿದ್ದಾರೆ. ಈಗ ಅವರು ಕೇವಲ ಗ್ರಾಮಾಂತರ ಕ್ಷೇತ್ರದ ಶಾಸಕಿಯಲ್ಲ. ರಾಜ್ಯದ ನಾಯಕಿ. ಶಿವಮೊಗ್ಗದಲ್ಲಿ ಕಾರ್ಯಕರ್ತರಿಗೆ ತೊಂದರೆಯಾದರೆ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರು ನಮ್ಮನ್ನು ಪ್ರಶ್ನಿಸುತ್ತಾರೆ ಅನ್ನುವ ಭಾವನೆ ಅಧಿಕಾರಿಗಳಿಗೆ ಬರಬೇಕು.ಆಯನೂರು ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ
ಜಿಲ್ಲೆಯ ಪ್ರತಿ ಹಳ್ಳಿಯಲ್ಲು ಕಾರ್ಯಕರ್ತರಿದ್ದಾರೆ. ಶ್ರೀಕಾಂತ್ ಅವರು ಪಕ್ಷವನ್ನು ಬಲಿಷ್ಠವಾಗಿ ಕಟ್ಟಿದ್ದಾರೆ. ಹಿಂದೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯನ್ನು ಕೈಗೆ ತೆಗೆದುಕೊಂಡಿದ್ದರು. ಈಗ ಇಡೀ ಜಿಲ್ಲೆಗೆ ಶಾರದಾ ಪೂರ್ಯನಾಯ್ಕ್ ಅವರೆ ನಮ್ಮ ಶಾಸಕರು. ಕಾನೂನಾತ್ಮಕವಾಗಿ ಯಾವುದೆ ಕೆಲಸಗಳಿದ್ದರು ಅವರ ನೇತೃತ್ವದಲ್ಲಿ ನಾವು ಮಾಡಿಸಿಕೊಡುತ್ತೇವೆ.ಕೆ.ಬಿ.ಪ್ರಸನ್ನ ಕುಮಾರ್, ಮಾಜಿ ಶಾಸಕ
ಇದನ್ನೂ ಓದಿ – ಶಿವಮೊಗ್ಗದ ಕಾಲೇಜುಗಳ ಬಳಿ ಬೈಕ್ ಸ್ಟಂಟ್ ಮಾಡಿದವರಿಗೆ ಪೊಲೀಸರಿಂದ ಶಾಕ್ – ಇಲ್ಲಿದೆ ಮತ್ತಷ್ಟು ಸುದ್ದಿಗಳು
ಜಿಲ್ಲೆಯ ವಿವಿಧೆಡೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕರ್ತರು ಕೂಡ ಶಾರದಾ ಪೂರ್ಯಾನಾಯ್ಕ್ ಅವರಿಗೆ ಅಭಿನಂದನೆ ಸಲ್ಲಿಸಿದರು.