ಶಿವಮೊಗ್ಗ ಲೈವ್.ಕಾಂ | SAGARA NEWS | 2 ಜೂನ್ 2020
ಮೊಬೈಲ್ ವಿಚಾರವಾಗಿ ಸಾಗರದಲ್ಲಿ ಯುವಕನೊಬ್ಬನನ್ನು ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಪೊಲೀಸರು ಐವರನ್ನು ಅರೆಸ್ಟ್ ಮಾಡಿದ್ದಾರೆ. ಮೇ 28ರಂದು ಸಂಜೆ ಹತ್ಯೆಯಾಗಿತ್ತು.
ಅರಳಿಕೊಪ್ಪ ಗ್ರಾಮದಲ್ಲಿ ಸಾಜೀಲ್ ಹುಸೇನ್ (23) ಎಂಬಾತನ ಹತ್ಯೆ ನಡೆದಿತ್ತು. ಈ ಸಂಬಂಧ ಸಾಜೀಲ್ ಕುಟುಂಬದವರು ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ.
ಸಾಗರದ ಜನ್ನತ್ ನಗರ ನಿವಾಸಿ ಸುಫೇಲ್ ಅಲಿಯಾಸ್ ಸುಕ್ಕಾ (26), ಹಾನಂಬಿ ನೆಹರು ನಗರದ ಮುಜ್ಜು ಅಲಿಯಾಸ್ ಮುಜಾಮಿಲ್ (25), ಜನ್ನತ್ ನಗರದ ಸುಹೇಬ್ (20), ಕೆಳದಿ ರಸ್ತೆಯ ಅಬ್ದುಲ್ ಸಲಾಂ ಅಲಿಯಾಸ್ ಸಲ್ಲು (24), ಸಮೀವುಲ್ಲಾ (25) ಬಂಧಿತರು.
ಆರೋಪಿಗಳ ಬಂಧನಕ್ಕೆ ಸಾಗರ ಡಿವೈಎಸ್ಪಿ ವಿನಾಯಕ ಶಟಗೇರಿ ಅವರು ಸಾಗರ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ತಂಡ ರಚಿಸಿದ್ದರು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳು ಮತ್ತು ಎರಡು ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]