ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ನವೆಂಬರ್ 2021
ದೀಪಾವಳಿ ಹಬ್ಬದ ಅಂಗವಾಗಿ ಶಿವಮೊಗ್ಗ ನಗರದ ವಿವಿಧೆಡೆ ಗೋಪೂಜೆ ನಡೆಸಲಾಗುತ್ತಿದೆ. ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಗೋಪೂಜೆ ಆಯೋಜಿಸಲಾಗಿದೆ.
ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ದೇಗುಲದಲ್ಲಿ ಗೋಪೂಜೆ ನೆರವೇರಿಸಲಾಯಿತು. ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಅವರು ಗೋ ಪೂಜೆ ಮಾಡಿದರು. ವಿವಿಧ ಸಂಘಟಗಳ ಪ್ರಮುಖರು ಈ ಸಂದರ್ಭ ಹಾಜರಿದ್ದರು.
ಇನ್ನು, ಗಾಂಧಿ ಬಜಾರ್’ನ ಬಸವೇಶ್ವರ ದೇವಸ್ಥಾನ, ಸೀಗೆಹಟ್ಟಿಯ ಜಾನಕೀರಾಮ ಮಂದಿರದಲ್ಲೂ ಗೋ ಪೂಜೆ ನೆರವೇರಿಸಲಾಯಿತು.