SHIVAMOGGA LIVE NEWS | 13 DECEMBER 2022
ಶಿವಮೊಗ್ಗ : ಹೃದಯಾಘಾತ (heart attack) ಸಂಭವಿಸಿ ಶಿವಮೊಗ್ಗದ ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿಯೊಬ್ಬ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸೋಮಿನಕೊಪ್ಪದ ಸೈಯದ್ ಅಬು ಸಲೆಹಾ (35) ಮೃತ ಕೈದಿ.
ಸೋಮವಾರ ಕೇಂದ್ರ ಕಾರಾಗೃಹದಲ್ಲಿ ಸೈಯದ್ ಅಬು ಸಲೆಹಾಗೆ ಎದೆ ನೋವು (heart attack) ಕಾಣಿಸಿಕೊಂಡಿದೆ. ಕೂಡಲೆ ಆತನಿಗೆ ಇಸಿಜಿ ಮಾಡಿಸಿ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ದಾಖಲಿಸಿ ಕೆಲವೆ ಹೊತ್ತಿನಲ್ಲಿ ಆತ ಮೃತಪಟ್ಟಿದ್ದಾನೆ.
ಇದನ್ನೂ ಓದಿ – ಫೋಟೊ ತೆಗೆಯುತ್ತಿದ್ದಾಗಲೇ ಛಾಯಾಗ್ರಾಹಕನಿಗೆ ಹೃದಯಾಘಾತ
ಕೋಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವೊಂದರಲ್ಲಿ ಈತ ಬಂಧಿತನಾಗಿದ್ದ. 2020ರಿಂದ ವಿಚಾರಣಾಧೀನ ಕೈದಿಯಾಗಿ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿದ್ದ.