ಶಿವಮೊಗ್ಗ ಲೈವ್.ಕಾಂ | SHIMOGA | 29 ಮಾರ್ಚ್ 2020
ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಶಿವಮೊಗ್ಗಕ್ಕೆ ಬಂದಿರುವವರ ಪತ್ತೆಗೆ ಸ್ಟಾಫ್ ನರ್ಸ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆರು ಮನೆ ಮನೆಗೆ ಸುತ್ತುತ್ತಿದ್ದಾರೆ. ಪ್ರತಿ ಮನೆಗೂ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಕರೋನ ಸೋಂಕ ಹರಡದಂತೆ ತಡೆಯುವ ಸಲುವಾಗಿ ಈ ಮಹಿಳೆಯರು ಜಿಲ್ಲೆಯಾದ್ಯಂತ ಹರಸಾಹಸ ಪಡುತ್ತಿದ್ದಾರೆ.
ತಮ್ಮ ಜೀವ, ಜೀವನ ಪಣಕ್ಕಿಟ್ಟು ಬಿರು ಬಿಸಿಲಿನಲ್ಲೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ಟಾಫ್ ನರ್ಸ್’ಗಳು ಪ್ರತಿ ಮನೆಗೂ ಭೇಟಿ ನೀಡುತ್ತಿದ್ದಾರೆ. ಬೆಂಗಳೂರು ಮತ್ತು ಇತರೆ ಜಿಲ್ಲೆಗಳಿಂದ ಬಂದಿದ್ದರೆ ಅವರ ವಿವರ, ಫೋನ್ ನಂಬರ್ ಕೇಳಿ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ, 14 ದಿನ ಮನೆಯಿಂದ ಹೊರಬಾರದಂತೆ ಎಚ್ಚರಿಕೆ ನೀಡುತ್ತಿದ್ದಾರೆ.
ಮನೆಯಲ್ಲಿರದೆ ಊರು ಸುತ್ತುತ್ತಿದ್ದಾರೆ
ವೈದ್ಯಕೀಯ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಬಿರು ಬಿಸಿಲನ್ನು ಲೆಕ್ಕಿಸದೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ನಾನಾ ಜಿಲ್ಲೆಗಳಿಂದ ಬಂದವರು ಇವರ ಮಾತಿಗೆ ಕಿವಿಗೊಡುತ್ತಿಲ್ಲ. ಬಹುತೇಕರು ಊರೂರು ಸುತ್ತುತ್ತಿದ್ದಾರೆ. ಬೆಂಗಳೂರು ರಿಜಿಸ್ಟರೇಷನ್ ಇರುವ ವಾಹನಗಳು ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಓಡಾಡುತ್ತಿವೆ. ಇದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]