SHIVAMOGGA LIVE NEWS | 21 FEBRUARY 2024
SAGARA : ತನ್ನ ಪತ್ನಿಯೊಂದಿಗೆ ಮಾತನಾಡಿದ ಎಂದು ಆರೋಪಿಸಿ, ಆಕ್ರೋಶಗೊಂಡ ಪತಿ, ಎದುರು ಮನೆಯ ಯುವಕ ಮತ್ತು ಆತನ ಕಾರಿನ ಮೇಲೆ ದಾಳಿ ಮಾಡಿದ್ದಾನೆ. ಜಗಳ ಬಿಡಿಸಲು ಬಂದ ಯುವಕನ ಸ್ನೇಹಿತನಿಗೂ ಪತಿರಾಯ ಪೆಟ್ಟು ಕೊಟ್ಟಿದ್ದಾನೆ. ಘಟನೆಯಲ್ಲಿ ಕಾರಿನ ಗಾಜು ಪುಡಿಯಾಗಿದೆ. ಯುವಕನ ಬೆರಳು ಕಟ್ ಆಗಿದೆ.
ಏನಿದು ಘಟನೆ? ಹೇಗಾಯ್ತು ದಾಳಿ?
ಸಾಗರ ತಾಲೂಕು ಬೆಳಲಮಕ್ಕಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ರವಿ ಹಲ್ಲೆ ನಡೆಸಿದ ಆರೋಪಿ. ರವಿಯ ಪತ್ನಿಯೊಂದಿಗೆ ಯಲಕುಂದ್ಲಿಯ ನವೀನ್ ಮಾತನಾಡಿದ್ದ. ಇದರಿಂದ ಆಕ್ರೋಶಗೊಂಡ ರವಿ, ನವೀನ್ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ದಾಳಿ ಮಾಡಿದ್ದ. ಘಟನೆಯಲ್ಲಿ ಕಾರಿನ ಗಾಜು ಪುಡಿಯಾಗಿತ್ತು. ಶಬ್ದ ಕೇಳಿ ಹೊರ ಬಂದ ನವೀನ್ ಮೇಲೂ ರವಿ ದಾಳಿ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಸ್ನೇಹಿತನಿಗು ಪೆಟ್ಟು ಕೊಟ್ಟ ಪತಿರಾಯ
ಇನ್ನು, ಜಗಳ ಬಿಡಿಸಲು ಬಂದ ನವೀನ್ ಸ್ನೇಹಿತ ಧರೇಶ್ ಮೇಲೂ ರವಿ ಹಲ್ಲೆ ನಡೆಸಿದ್ದಾನೆ ಎಂದು ಆಪಾದಿಸಲಾಗಿದೆ. ಮಚ್ಚಿನಿಂದ ದಾಳಿ ವೇಳೆ ನವೀನ್ ಬೆರಳು ತುಂಡಾಗಿದೆ. ಎದೆ ಭಾಗದಲ್ಲೂ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ನವೀನ್ನನ್ನು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಧರೇಶ್ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಟೀ ಕುಡಿದು ಹಿಂತಿರುಗುಷ್ಟರಲ್ಲಿ ನಾಪತ್ತೆಯಾಗಿತ್ತು ಬೈಕ್