ಶಿವಮೊಗ್ಗ ಲೈವ್.ಕಾಂ | SHIMOGA NEWS | 10 MAY 2021
ಲಾಕ್ ಡೌನ್ ಅವಧಿಯಲ್ಲಿ ಕೃಷಿ ಚಟುವಟಿಕೆಗೆ ಯಾವುದೆ ಅಡ್ಡಿ ಉಂಟು ಮಾಡಬಾರದು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಆದರೆ ಮೊದಲ ದಿನ ಲಾಕ್ ಡೌನ್ ಅವಧಿಯಲ್ಲಿ ರೈತರು, ಕೃಷಿಕರು ತೀವ್ರ ಸಂಕಷ್ಟ ಅನುಭವಿಸಿದರು.
ಕೃಷಿಕರಿಗಾದ ಸಮಸ್ಯೆ ಏನು?
ಮನೆ ಒಂದು ಕಡೆ, ಜಮೀನು ಒಂದು ಕಡೆ ಇರುವ ರೈತರು ತೀವ್ರ ಸಂಕಷ್ಟ ಅನುಭವಿಸಿದರು.
‘ಅಗತ್ಯ ಸೇವೆ ಹೊರತು ಮತ್ಯಾರಿಗೂ ರಸ್ತೆಗಿಳಿಯುವ ಅವಕಾಶವಿಲ್ಲ. ಅಗತ್ಯ ಸೇವೆಯಲ್ಲಿ ಇರುವವರಿಗೆ ಪಾಸ್ ಮತ್ತು ಐಡಿ ಕಾರ್ಡ್ ಇದೆ. ಆದರೆ ರೈತರಿಗೆ ಯಾವುದೆ ಐಡಿ ಕಾರ್ಡು, ಪಾಸ್ ಇಲ್ಲ. ಪಹಣಿ ಮತ್ತು ಇತರೆ ದಾಖಲೆಗಳನ್ನ ಹೊತ್ತು ಓಡಾಡುವಂತಾಗಿದೆ. ಅದರೆ ಇದಕ್ಕೆ ಪೊಲೀಸರು ಅವಕಾಶ ನೀಡುತ್ತಿಲ್ಲ’ ಅನ್ನುತ್ತಾರೆ ರೈತ ಮಂಜುನಾಥ್.
ಇದನ್ನೂ ಓದಿ | ಲಾಕ್ ಡೌನ್ ಮೊದಲ ದಿನ, ಶಿವಮೊಗ್ಗ ನಗರದಲ್ಲಿ ಹೇಗಿತ್ತು ಪರಿಸ್ಥಿತಿ?
ಔಷಧ ಸಿಂಪಡಣೆ, ಗೊಬ್ಬರ ಹಾಕಬೇಕು, ನೀರು ಬಿಡಬೇಕಿದೆ, ಕಳೆ ತೆಗೆಯಬೇಕು ಎಂದು ಹಲವರು ಕೃಷಿಕರು ಪೊಲೀಸರ ಮುಂದೆ ಮನವಿ ಮಾಡಿದ ಉದಹಾರಣೆಗಳಿವೆ. ಆದರೆ ಸರ್ಕಾರದ ನಿಯಮದಲ್ಲಿ ಈ ಅವಕಾಶವಿಲ್ಲ ಎಂದು ಪೊಲೀಸರು ತಡೆದಿದ್ದಾರೆ. ಹತ್ತಾರು ಕಿ.ಮೀ ದೂರದಲ್ಲಿರುವ ಜಮೀನಿಗೆ ನಡೆದು ಹೋಗಿ ಕೆಲಸ ಮಾಡಲು ಅಸಾಧ್ಯವಾಗಿದೆ.
ಜಿಲ್ಲಾ ರಕ್ಷಣಾಧಿಕಾರಿ ಹೇಳಿದ್ದೇನು?
ಈ ಕುರಿತು ಶಿವಮೊಗ್ಗ ಲೈವ್.ಕಾಂ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾದ್ ಅವರ ಗಮನ ಸೆಳೆಯಿತು. ‘ಯಾರನ್ನೂ ಓಡಾಡಲು ಬಿಡಬಾರದು ಎಂದು ಈಗ ಇರುವ ನಿಯಮದಲ್ಲಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಅವರೊಂದಿಗೆ ಸಭೆ ನಡೆಸುತ್ತೇವೆ. ಮಾರ್ಗಸೂಚಿಯಲ್ಲಿ ಬದಲಾವಣೆಯಾದರೆ ತಿಳಿಸುತ್ತೇವೆ’ ಎಂದರು.
ಮಿನಿಸ್ಟರ್ ಹೇಳಿದ್ದೇನು?
‘ಕೃಷಿ ಚಟುವಟಿಕೆಗೆ ತೊಂದರೆ ಆಗಿದೆ ಎಂಬುದು ಗಮನಕ್ಕೆ ಬಂದಿದೆ. ಈ ಬಗ್ಗೆ ಯಾವುದೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಪುರಲೆ ಸೇರಿದಂತೆ ವಿವಿಧೆಡೆ ಹಾಲು ವಿತರಣೆ ಮಾಡುತ್ತಿದ್ದವರಿಗೆ ತೊಂದರೆಯಾಗಿದೆ ಎಂದು ಫೋನ್ ಮಾಡಿದ್ದರು. ಮಾತಾಡಿ ಸಮಸ್ಯೆ ಬಗೆಹರಿಸಿದ್ದೇನೆ’ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಇದನ್ನೂ ಓದಿ | ಇನ್ನೂರು ರುಪಾಯಿ ಕೊಟ್ಟು ಚಿಕನ್ ತಂದವನಿಗೆ ಶಿವಮೊಗ್ಗದಲ್ಲಿ ಐನೂರು ರೂ. ದಂಡ
ಲಾಕ್ ಡೌನ್ ಮಾರ್ಗಸೂಚಿ ಗೊಂದಲದಿಂದಾಗಿ ಜಿಲ್ಲೆಯ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ, ಹಲವರು ರೈತರು ಬೆಳೆ ನಷ್ಟ ಅನುಭವಿಸುವುದು ನಿಶ್ಚಿತ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]