SHIVAMOGGA LIVE NEWS | 2 NOVEMBER 2022
BHADRAVATHI | ಹೆದ್ದಾರಿ ದಾಟಲು ರಸ್ತೆ ಪಕ್ಕ ನಿಂತಿದ್ದ ವ್ಯಕ್ತಿಗೆ ಲಗೇಜ್ ಆಟೋ ಡಿಕ್ಕಿ (luggage auto) ಹೊಡೆದು ಗಾಯಗೊಂಡಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.
ಭದ್ರಾವತಿ ತಾಲೂಕು ಬಿ.ಆರ್.ಪಿ ಸಮೀಪದ ಶಾಂತಿನಗರದಲ್ಲಿ ಘಟನೆ ಸಂಭವಿಸಿದೆ. ಸಂಪತ್ (55) ಎಂಬುವವರು ಗಾಯಗೊಂಡಿದ್ದಾರೆ.
ಸಂಪತ್ ಅವರು ಶಾಂತಿನಗರದ ಚಿಕನ್ ಸ್ಟಾಲ್ ಒಂದರಲ್ಲಿ ಚಿಕಿನ್ ಖರೀದಿಸಿ ಮನೆಗೆ ಮರಳುತ್ತಿದ್ದರು. ಶಿವಮೊಗ್ಗ – ತರೀಕೆರೆ ಹೆದ್ದಾರಿ ದಾಟಲು ರಸ್ತೆ ಪಕ್ಕದ ಮಣ್ಣಿನ ಹಾದಿ ಮೇಲೆ ನಿಂತಿದ್ದರು. ಈ ಸಂದರ್ಭ ಹೆಚ್.ಕೆ.ಜಂಕ್ಷನ್ ಕಡೆಯಿಂದ ಬಂದ ಲಗೇಜ್ ಆಟೋ (luggage auto) ಸಂಪತ್ ಅವರಿಗೆ ಡಿಕ್ಕಿ ಹಡೆದಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದಲ್ಲಿ ಹಿರಿಯ ನಾಗರಿಕರಿಗೆ ಸಹಾಯವಾಣಿ, ಸಿಗಲಿದೆ 4 ರೀತಿಯ ನೆರವು
ಅಪಘಾತದಲ್ಲಿ ಸಂಪತ್ ಅವರ ತಲೆ, ಬೆನ್ನು ಸೇರಿದಂತೆ ವಿವಿಧೆಡೆ ಗಾಯವಾಗಿದೆ. ಕೂಡಲೆ ಸ್ಥಳೀಯರ ನೆರವಿನೊಂದಿಗೆ ಸಂಪತ್ ಅವರನ್ನು ಆಂಬುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಸಕ್ರೆಬೈಲಿನ ಸೂರ್ಯ 3000 ಕಿ.ಮೀ ದೂರದ ಕಾಡಿಗೆ ವರ್ಗ, ಸಿಬ್ಬಂದಿ ಜೊತೆ ಕೊನೆಯ ಫೋಟೊ
ಇನ್ನು, ಅಪಘಾತ ಸಂಭವಿಸುತ್ತಿದ್ದಂತೆ ಗೂಡ್ಸ್ ಆಟೋ ಚಾಲಕ ಪರಾರಿಯಾಗಿದ್ದಾನೆ. ಆತನ ವಿರುದ್ಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ADVERTISEMENT (luggage auto)
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.