ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಅಕ್ಟೋಬರ್ 2021
ಕಾರು ತೊಳೆಯಲು ಕೆರೆಗೆ ಇಳಿದಿದ್ದ ವ್ಯಕ್ತಿಯೊಬ್ಬರು ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಉತ್ತರ ಕನ್ನಡದ ಹಳಿಯಾಳ ನಿವಾಸಿ ರಾಜಾ ಭಕ್ಷಿ (37) ಮೃತ ವ್ಯಕ್ತಿ. ಇವರು ಹಾಯ್ ಹೊಳೆಯಲ್ಲಿರುವ ಸಂಬಂಧಿಯ ಮನೆಗೆ ಬಂದಿದ್ದರು. ಕಾರು ತೊಳೆಯಲು ಕೆರೆಗೆ ಬಂದಿದ್ದರು. ಕಾರು ತೊಳೆದ ಬಳಿಕ ಅವರು ಕೆರೆಗೆ ಇಳಿದಿರುವ ಸಾಧ್ಯತೆ ಇದೆ.
ಕಾಲು ಜಾರಿ ಕೆರೆಯೊಳಗೆ ಬಿದ್ದಿದ್ದು, ಈಜು ಬಾರದ ಹಿನ್ನೆಲೆ ರಾಜಾ ಭಕ್ಷಿ ಮುಳುಗಿರುವ ಸಾಧ್ಯತೆ ಇದೆ. ಮೃತದೇಹವನ್ನು ಮೇಲೆತ್ತಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.