SHIVAMOGGA LIVE NEWS | 24 APRIL 2024
HOLEHONNURU : ಸಚಿವ ಸಂತೋಷ್ ಲಾಡ್ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಲ್ಲಿಹಾಳ್ ಸರ್ಕಲ್ನಲ್ಲಿ ಮರಾಠ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸಂತೋಷ್ ಲಾಡ್ ಅವರ ಕುರಿತು ವಿಜಯೇಂದ್ರ ಹೇಳಿಕೆ ಸಮಾಜಕ್ಕೆ ಮಾಡಿರುವ ಅಪಮಾನ. ಅದ್ದರಿಂದ ಕೂಡಲೆ ಕ್ಷಮೆ ಕೇಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮರಾಠ ಸಮಾಜದ ಕಾರ್ಯದರ್ಶಿ ದೇವೇಂದ್ರ ರಾವ್ ಅವತಾಡೆ, ಯಶ್ವಂತ ರಾವ್ ಘೋರ್ಪಡೆ, ರುದ್ರೋಜಿರಾವ್ ಜಾಧವ್, ಕಿರಣ್ ಮೋರೆ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ಶಿವಮೊಗ್ಗ ಲೋಕಸಭೆ, ಯಾವ್ಯಾವ ಅಭ್ಯರ್ಥಿಯ ಕ್ರಮ ಸಂಖ್ಯೆ ಏನು? ಚಿಹ್ನೆಗಳೇನು? ಇಲ್ಲಿದೆ ಲಿಸ್ಟ್