SHIVAMOGGA LIVE NEWS | 24 APRIL 2024
SHIMOGA : ಸಾಗರ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಎಪಿಎಂಸಿ ಯಾರ್ಡ್ ಶಾಖೆಯ ಕಿಟಕಿ ಮರಿದು ಹಣ ಕಳ್ಳತನಕ್ಕೆ ಯತ್ನಿಸಲಾಗಿದೆ. ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿರುವ ಕಳ್ಳರು ಸ್ಟ್ರಾಂಗ್ ರೂಂ ತೆಗೆಯಲು ಪ್ರಯತ್ನಿಸಿ ವಿಫಲವಾಗಿದ್ದಾರೆ.
ಏ.21ರಂದು ಮಧ್ಯರಾತ್ರಿ 2 ಗಂಟೆ ಹೊತ್ತಿಗೆ ಬ್ಯಾಂಕ್ನ ಕಿಟಿಕಿ ಮುರಿದು ಕಳ್ಳರು ಒಳ ನುಗ್ಗಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಟ್ರಾಂಗ್ ರೂಂನ ಲಾಕರ್ ತೆರೆಯಲು ಪ್ರಯತ್ನಿಸಿದ್ದಾರೆ. ಏ.22ರಂದು ಬೆಳಗ್ಗೆ ಸಹಾಯಕ ವ್ಯವಸ್ಥಾಪಕ ಬ್ಯಾಂಕ್ನ ಬಾಗಿಲು ತೆಗೆದು ಒಳ ಬಂದಾಗ ದಾಖಲೆಗಳು ಚೆಲ್ಲಾಪಿಲ್ಲಿಯಾಗಿತ್ತು. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಗಾಂಧಿ ಬಜಾರ್ ಚಿನ್ನದ ಅಂಗಡಿ ಸ್ಟಾಕ್ ಚೆಕ್ ವೇಳೆ ಮಾಲೀಕನಿಗೆ ಶಾಕ್, ಸಿಸಿಟಿವಿ ಪರಿಶೀಲಿಸಿದಾಗ ಕಾದಿತ್ತು ಆಘಾತ