SHIVAMOGGA LIVE NEWS | 8 APRIL 2023
SHIMOGA : ನೀತಿ ಸಂಹಿತೆ ಹಿನ್ನೆಲೆ ಶಿವಮೊಗ್ಗ ವಿಮಾನ ನಿಲ್ದಾಣ ಟರ್ಮಿನಲ್ (Terminal) ಕಟ್ಟಡದ ಮೇಲ್ಛಾವಣಿಗೆ ಹೊದಿಕೆ ಮುಚ್ಚಬೇಕು. ಸರ್ಕಾರಿ ಬಸ್ಗಳ ಮೇಲಿರುವ ಸರ್ಕಾರಿ ಜಾಹೀರಾತುಗಳನ್ನು ತೆಗೆಯುವಂತೆ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿ ಮೂಲಕ ರಾಜ್ಯ ಚುನಾವಣಾಧಿಕಾರಿಗೆ ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಗೊತ್ತಿರಬೇಕಾದ 10 ಪ್ರಮುಖ ಸಂಗತಿ ಇಲ್ಲಿದೆ
ಮನವಿಯಲ್ಲಿ ಏನೇನಿದೆ?
ವಿಮಾನ ನಿಲ್ದಾಣದ ಟರ್ಮಿನಲ್ (Terminal) ಕಟ್ಟಡದ ಮೇಲ್ಛಾವಣಿಯಲ್ಲಿ ಕಮಲದ ಚಿಹ್ನೆ ಇರುವಂತೆ ವಿನ್ಯಾಸಗೊಳಿಸಲಾಗಿದೆ. ನೀತಿ ಸಂಹಿತೆ ಹಿನ್ನೆಲೆ ಟರ್ಮಿನಲ್ ಕಟ್ಟವನ್ನು ಮುಚ್ಚಬೇಕು. ಇನ್ನು, ಸರ್ಕಾರಿ ಬಸ್ಸುಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವಿರುವ ಜಾಹೀರಾತುಗಳು ಹಾಗೆಯೇ ಇದೆ. ಇವುಗಳನ್ನು ಕೂಡಲೆ ತೆರವು ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.