SHIVAMOGGA LIVE NEWS | 17 MAY 2023
BENGALURU : ನೈಋತ್ಯ ಮುಂಗಾರು (Monsoon) ಈ ಬಾರಿ ಸ್ವಲ್ಪ ತಡವಾಗಿ ಆರಂಭವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ. ಇದಕ್ಕೆ ಎರಡು ಪ್ರಮುಖ ಕಾರಣಗಳನ್ನು ಕೂಡ ಗುರುತಿಸಿದೆ.
ವಾಡಿಕೆಯಂತೆ ಜೂ.1ರಿಂದ ನೈಋತ್ಯ ಮುಂಗಾರು (Monsoon) ಕೇರಳವನ್ನು ಪ್ರವೇಶಿಸಿ ಕ್ರಮೇಣ ಕರ್ನಾಟಕದ ಮೂಲಕ ಬೇರೆ ರಾಜ್ಯಗಳತ್ತ ಸಾಗುತ್ತದೆ. ಆದರೆ ಈ ಬಾರಿ ಜೂ. 4 ಅಥವಾ 5ರಂದು ನೈಋತ್ಯ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ – ರೈಲು ಡಿಕ್ಕಿಯಾಗಿ ಹಳಿ ಪಕ್ಕದ ಚರಂಡಿಯಲ್ಲಿ ಸಿಲುಕಿದ ಕಾಡು ಕೋಣ
ತಡವಾಗಲು ಎರಡು ಕಾರಣ
1 ಪ್ರಸ್ತುತ ವಾತಾವರಣ ತುಂಬಾ ಬಿಸಿ ಇದೆ. ಇದರಿಂದ ಮಳೆಯ ಮಾರುತವಾಗಿ ಪರಿವರ್ತನೆಯಾಗಲು ಕೆಲವು ದಿನಗಳು ಬೇಕಾಗುತ್ತವೆ. 2 ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾ ಕರಾವಳಿಗೆ ಅಪ್ಪಳಿಸಿದ ಚಂಡಮಾರುತವು ಮುಂಗಾರಿನ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಿದೆ.WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ