ಶಿವಮೊಗ್ಗ ಜಂಬೂ ಸವಾರಿ ಆರಂಭಕ್ಕು ಮುನ್ನ ಕಲಾವಿದನ ಕಾಲು ತುಳಿದ ಆನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 9 ಅಕ್ಟೋಬರ್ 2019

ಜಂಬೂ ಸವಾರಿ ಆರಂಭಕ್ಕು ಮುನ್ನ ಆನೆ ತುಳಿದು ಕಲಾವಿದರೊಬ್ಬರ ಕಾಲಿನ ಮೂಳೆ ಮುರಿದಿದೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಂಗಳವಾದ್ಯ ನುಡಿಸಲು ಭದ್ರಾವತಿಯಿಂದ ಆಗಮಿಸಿದ್ದ ತಂಡದಲ್ಲಿದ್ದ ಸತೀಶ್ ಎಂಬುವವರ ಕಾಲನ್ನು ಆನೆಯೊಂದು ತುಳಿದಿದೆ. ಸಾಗರ್ ಆನೆ ಮೇಲೆ ಅಂಬಾರಿಯನ್ನು ಇರಿಸುವ ಹೊತ್ತಿಗೆ ಎರಡು ಹೆಣ್ಣಾನೆಗಳನ್ನು ಸಾಗರ್ ಆನೆಯ ಅಕ್ಕಪಕ್ಕದಲ್ಲಿ ನಿಲ್ಲಿಸಿಕೊಳ್ಳಲಾಯಿತು. ಈ ವೇಳೆ ಹೆಣ್ಣಾನೆಗಳ ತಿರುಗುವ ರಭಸದಲ್ಲಿ ಕಲಾವಿದನ ಕಾಲು ತುಳಿದಿವೆ.

ಆನೆ ತುಳಿತದ ನೋವಿನಿಂದ ಕುಸಿದು ಕುಳಿತ ಕಲಾವಿದ ಸತೀಶ್ ಅವರಿಗೆ ಸ್ಥಳೀಯರು ಸಂತೈಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳು ಸತೀಶ್ ಅವರ ಸ್ಥಿತಿ ಕುರಿತು ಪಾಲಿಕೆ ಉಪಮೇಯರ್ ಚನ್ನಬಸಪ್ಪ ಮತ್ತು ವಿಪಕ್ಷ ನಾಯಕ ರಮೇಶ್ ಹೆಗ್ಡೆ ಅವರ ಗಮನಕ್ಕೆ ತಂದರು. ಕೂಡಲೆ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 9, 2019

Leave a Comment